SUDDILIVE || SHIVAMOGGA
ಕರವೇ ನಾರಾಯಗೌಡರ ಬಣದಿಂದ ಕಮಲ ಹಾಸನ್ ಪ್ರತಿಕೃತಿ ದಹನ-Karave Narayana wing burn Kamala hassan effugy
ಉದ್ದಟತನ ಮೆರೆದ ಕಮಲ ಹಾಸನ್ ವಿರುದ್ಧ ಕನ್ನಡ ಸಂಘಟನೆಗಳು ಸಾಲು ಸಾಲು ಪ್ರತಿಭಟನೆಗಳು ಶಿವಮೊಗ್ಗದಲ್ಲಿ ಆರಂಭವಾಗಿದೆ. ನಿನ್ನೆ ಕರವೇ ಸ್ವಾಭಿಮಾನಿ ಬಣ ಪ್ರತಿಕೃತಿ ದಹಿಸಿದರೆ ಇಂದು ಕರವೇ ನಾರಾಯಣ ಗೌಡರ ಬಣ ಪ್ರತಿಭಟನೆ ನಡೆಸಿ ನಟನ ಪ್ರತಿಕೃತಿಗೆ ಬೆಂಕಿ ಇಟ್ಟಿದೆ.
ಶಿವಮೊಗ್ಗದ ಅಶೋಕ ವೃತ್ತದಲ್ಲಿ ಕರವೇ ನಾರಾಯಣ ಗೌಡರ ಬಣ ಬೆಳಿಗ್ಗೆ 11-30 ಕ್ಕೆ ಸರಿಯಾಗಿ ಪ್ಲೆಕ್ಸ್ ಹಿಡಿದು ನಟ ಕಮಲ ಹಾಸನ್ ವಿರುದ್ಧ ಘೋಷಣೆ ಕೂಗಿದರು. ಕ್ಷಮೆ ಕೇಳಿದರೆ ಶಾಂತಿ ಇಲ್ಲವಾದಲ್ಲಿ ಕ್ರಾಂತಿ ಎಂಬ ಘೋಷಣೆ ಕೂಗುವ ಮೂಲಕ ನಟ ಕಮಲ ಹಾಸನ್ ತನ್ನ ಹೇಳಿಕೆಯನ್ನ ವಾಪಾಸ್ ಪಡೆದು ಕ್ಷಮೆ ಕೇಳುವಂತೆ ಆಗ್ರಹಿಸಲಾಯಿತು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಕೇಬಲ್ ಮಂಜು, ಜಿಲ್ಲಾ ಉಪಾಧ್ಯಕ್ಷ ಶೈಲೇಶ್ ಕುಮಾರ್, ರಾಜ್ಯ ಸಹಕಾರ್ಯದರ್ಶಿ ಮಧು, ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮ ಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ್ ಗೌಡ ಮತ್ತು ವಿಜಯ ಕುಮಾರ್, ಪದಾಧಿಕಾರಿಗಳು ತಾಲೂಕು ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.
Karave Narayana wing burn Kamala hassan effugy