MrJazsohanisharma
" alt="ad">

ಹೆಚ್ಚಿನ ಬಡ್ಡಿಗಾಗಿ ನೋಟಿಸ್-ಹಲ್ಲೆ, ಕಳಚಿದ ಬಲಭುಜದ ಜಾಯಿಂಟ್, ಬಿತ್ತು ಕೇಸು...!Lodged case

SUDDILIVE || SHIVAMOGGA

ಹೆಚ್ಚಿನ ಬಡ್ಡಿಗಾಗಿ ನೋಟಿಸ್-ಹಲ್ಲೆ, ಕಳಚಿದ ಬಲಭುಜದ ಜಾಯಿಂಟ್, ಬಿತ್ತು ಕೇಸು...!Notice-assault for high interest, giant with severed right arm, Lodged case...!

Case, lodged

ಶಿವಮೊಗ್ಗದಲ್ಲಿ ಬಡ್ಡಿ ವ್ಯವಹಾರಗಳಿಗೆ ಬ್ರೇಕ್ ಹಾಕಲು ಈಗಾಗಲೇ ಪೊಲೀಸ್ ಇಲಾಖೆ ಹಲವು ಕ್ರಮ ಜರುಗಿಸಿದೆ. ಬಡ್ಡಿ, ಚಕ್ರ ಬಡ್ಡಿಯಂತಹ ಹಲವು ಬಡ್ಡಿಗೆ ಬಡ್ಡಿ ಬೆಳೆದು ಸಾಲ ಪಡೆದವರ ರಕ್ತ ಹೀರಿದವರಿಗೆ ತಕ್ಕ ನಂತಹ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಆದರೂ ಅಲ್ಲೊಂದು ಇಲ್ಲೊಂದು ಪ್ರಕ್ರರಣಗಳು ಬೆಳಕಿಗೆ ಬರುತ್ತಿದೆ.

ಅದರಂತೆ ಶಿವಮೊಗ್ಗದ ಹೊಸಮನೆ ನಿವಾಸಿ ಹಾಗೂ ಉದ್ಯಮಿ ಗೋಪಾಲ್ ಎಂ ಸಿಂಡಿಕೇಟ್ ಬ್ಯಾಂಕ್ ನ ಚೆಕ್ ನ್ನ ಜಯಕುಮಾರ್ ಎಂಬುವರ ಬಳಿ ಅಡವಿಟ್ಟು ವ್ಯವಹಾರಕ್ಕಾಗಿ ಹಣ ಪಡೆದಿದ್ದರು. ಸಕಾಲದಲ್ಲಿ ಹಣ ನೀಡಿ ಸಾಲ ತೀರಿಸಿದ್ದರೂ. ಚೆಕ್ ಮಾತ್ರ ಜಯಕುಮಾರ್ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಜಯಕುಮಾರ್ ಮತ್ತೆ ಗೋಪಾಲ್ ಗೆ ನೋಟೀಸ್ ನೀಡಿ ಹಣ ಕಟ್ಟುವಂತೆ ಸೋಚಿಸಲಾಗಿದೆ. 

8 ಲಕ್ಷ ರೂ ಕಟ್ಟುವಂತೆ ಸೂಚಿಸಿದ್ದರ ಪರಿಣಾಮ ಈ ಕುರಿತು ಗೋಪಾಲ್ ಮತ್ತೆ ಜಯಕುಮಾರ್ ಗೆ ಕರೆ ಮಾಡಿದ್ದಾರೆ. ನಿಮ್ಮ ಬಡ್ಡಿ ಹಣ ತುಂಬಿಲ್ಲ. ಹಣ ತುಂಬಿ ಎಂದಿದ್ದಾರೆ. ನಾನು ಮಾಡೋದು ಹೀಗೆ ಎಂದು ಉದ್ಧಟತನ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜಯಕುಮಾರ್ ಪೆಟ್ರೋಲ್ ಬಂಕ್ ಬಳಿ ಸಿಕ್ಕಾಗ ಗೋಪಾಲ್ ಅವರು ಯಾಕೆ ಹೀಗೆ ಮಾತನಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಇದರಿಂದ ಕುಪಿತಗೊಂಡ ಜಯಕುಮಾರ್ ಗೋಪಾಲ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವ್ಯಚ್ಯ ಶಬ್ದಗಳಿಂದ ಅವಮಾನಿಸಲಾಗಿದೆ. ಇದರಿಂದ ಗೋಪಾಲನ್ ಬಲಭುಜದ ಜಾಯಙಟ್ ಕಳಚಿಕೊಂಡಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಬಡ್ಡಿಗಾಗಿ ಪೀಡಿಸಿದ್ದ ಜಯರಾಮ್ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. 

Lodged case

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close