Suddilive || Shivamogga
ರಾಜ್ಯದ ಜಾತಿ ಜನಗಣತಿಗೆ ಸಹಕರಿಸಿ-Contribute to the state's caste census
ಜಿಲ್ಲೆಯಿಂದಲೇ ಜಾತಿ ಜನಗಣತಿ ಮತ್ತು ಜನಗಣತಿ ಆರಂಭಿಸಲು ಒತ್ತಾಯಿಸಿದ್ದು ನಾವೇ ಮೊದಲು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ವಿ.ರಾಜು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾತಿಗಣತಿ ಮಾಡಿರುವುದು ಸ್ವಾಗತಾರ್ಹ. ನಮ್ಮ ಬಲವಾದ ಆಗ್ರಹದಿಂದ ರಾಜ್ಯ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಲಾಯಿತು. 1981 ರಲ್ಲಿಯೇ ಹಾಲಪ್ಪ, ಗಣಪತಿಯಪ್ಪ, ಪತ್ರಕರ್ತ ರಾಮಪ್ಪನವರು ಮೊದಲಾದರು ಆಗ್ರಹಿಸಿದ್ದರು.
ಜನಸಂಖ್ಯಾತ ಆಧಾರದ ಮೇರೆಗೆ ಮೀಸಲಾತಿ ನೀಡಬೇಕು. ರಾಜಕೀಯವಾಗಿ ಶಕ್ತಿ ನೀಡಬೇಕು. ಹಾಗಾಗಿ ಜಾತಿ ಜನಗಣತಿ ಸ್ವಾಗತಾರ್ಹ, ಸಂಘಟನೆಯ ನಿರಂತರ ಹೋರಾಟದಿಂದ ಫಲಿತಾಂಶ ದೊರೆತಿದೆ ಎಂದರು.
ಕಾಂತರಾಜು ಅವರ ವಿಚಾರ ಕಾರ್ಯಕ್ರಮ ನಡೆಸಲಾಗಿತ್ತು. ಸರ್ಕಾರ ಕಾಂತರಾಜು ವರದಿ ಮಂಡನೆ ಮಾಡಿದೆ. ಮೇ9 ರಂದು ಸಚಿವ ಸಂಪುದ ಮುಂದೆ ಚರ್ಚೆ ಆಗಲಿದೆ. ದತ್ತಾಂಶಗಳನ್ನ ರಾಜ್ಯದಲ್ಲಿ ವೈಜ್ಞಾನಿಕ ವರದಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಅಂತಿಮಗೊಳಿಸಬೇಕು. ಚರ್ಚೆಗಳಾಗಬೇಕು ಎಂದರು.
ಆರ್ ಕೆ ಸಿದ್ದರಾಮಣ್ಣ ಮಾತನಾಡಿ, ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡುವುದಾಗಿ ಒಪ್ಪಿಕೊಂಡಿದೆ. ಇದಕ್ಕೆ ಸ್ವಗತಾರ್ಹವಿದೆ. ಇದರಿಂದ ಸಾಮಾಜಿಕ ನ್ಯಾಯ ದೊರಕಲಿದೆ. ಸಾಮಾಜಿಕ, ಆರ್ಥಿಕ ನ್ಯಾಯ ದೊರಕಲಿದೆ ಎಂದರು.
caste census