SUDDILIVE || SHIVAMOGGA
ನಿರಂತರ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು ರೈತನಿಗೆ The farmer was unable to eat the food he had in his hand due to the continuous rain.
ಶಿವಮೊಗ್ಗದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಿನ್ನಲೆಯಲ್ಲಿ ಅನ್ನದಾತನ ಪಾಡು ಕೇಳುವವರೇ ಇಲ್ಲದಂತಾಗಿದೆ. ಕಟಾವಿಗೆ ಬಂದ ಭತ್ತದ ಬೆಳೆ ಗದ್ದೆಯಲ್ಲೇ ನಾಶವಾಗುತ್ತಿದೆ.
ನಿರಂತರ ಮಳೆಯಿಂದ ಗದ್ದೆಯಲ್ಲೇ ಮೊಳಕೆ ಒಡೆದ ಭತ್ತದ ಪೈರು, ಒಂದು ಕಡೆ ಕಾಡಾನೆಗಳ ಕಾಟ, ಇನ್ನೊಂದೆಡೆ ಮಳೆಯ ಕಾಟವಾದರೆ ಕೈಗೆ ಬಂದ ಫಸಲು ಬಾಯಿಗೆ ಬಾರದೆ ಅನ್ನದಾತ ಕಂಗಾಲಾಗಿದ್ದಾನೆ. ಮಲೆನಾಡಿನಲ್ಲಿ ಸಾವಿರಾರೂ ಎಕ್ಕರೆ ಮಳೆಗೆ ಹಾನಿಯಾಗಿವೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡುವರೆ ಎಕ್ಕೆರೆ ಭತ್ತ ಕಳೆದುಕೊಂಡ ಪುರದಾಳಿನ ರೈತ ಗಣೇಶಪ್ಪ, ಹೊಲದಲ್ಲೇ ಕಟಾವು ಮಾಡಿದ ಭತ್ತ ಹೊಲದಲ್ಲೇ ಮೊಳಕೆ ಒಡೆದಿದ್ದು, ಕೈಗೆ ಬಂದ ತುತ್ತು ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾಗಿದೆ. ಎಕ್ಕರೆಗೆ ೭೫ ಸಾವಿರ ರೂ ನಷ್ಟ ಅನಭವಿಸಿರುವುದಾಗಿ ಅನ್ನದಾತ ಹೇಳಿಕೊಂಡಿದ್ದಾನೆ. ಪುರದಾಳು ಗ್ರಾಮ ಒಂದರಲ್ಲೇ ಒಂದು ಸಾವಿರ ಎಕ್ಕರೆ ಭತ್ತ ನಾಶವಾಗಿರುವುದಾಗಿ ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭತ್ತ ಕಟಾವು ಮಾಡಲು ಬಿಡದ ಮಳೆ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದೆ. ಮಳೆಯಿಂದ ರೈತ ಕಂಗಾಲಾಗಿದ್ದಾರೆ. ರೈತ ಹೊಲದಲ್ಲೇ ಕಣ್ಣೀರು ಇಡುವಂತ ಪರಿಸ್ಥಿತಿ ನಿರ್ನಾಣವಾಗಿದೆ. ಐವತ್ತು ಕ್ವಿಂಟಲ್ ಭತ್ತ ಹೊಲದಲ್ಲೇ ರೈತ ಗಣೇಶಪ್ಪ ಕಳೆದುಕೊಂಡಿದ್ದಾನೆ. ಇದರಿಂದಾಗಿ ಜಾನುವಾರುಗಳಿಗೂ ಮೇವಿನ ಕೊರತೆ ಆಗುವ ಭಯದಲ್ಲಿ ರೈತ ಹೇಳಿಕೊಂಡಿದ್ದಾನೆ. ಜಿಲ್ಲಾಡಳಿತ ಏನು ಮಾಡಲಿದೆ ಕಾದು ನೋಡಬೇಕಿದೆ.
due to the continuous rain