ತೀರ್ಥಹಳ್ಳಿಯಲ್ಲಿ ಮರದ ಬುಡಕ್ಕೆ ಆಸಿಡ್ ಹಾಕಿರುವ ಪ್ರಕರಣ- ಪೊಲೀಸ್ ಠಾಣೆಯಲ್ಲಿ ದೂರು ದಾಖಲು..!Acid to tree stump in Tirthahalli
ಶಿವಮೊಗ್ಗದಲ್ಲಿ ಮರವನ್ನು ಕಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಆದರೆ ತೀರ್ಥಳ್ಳಿಯಲ್ಲಿ ಮರವನ್ನು ತೆಗೆಯಲು ಬುಡಕ್ಕೆ ಆಸಿಡ್ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಕೊಪ್ಪ ಸರ್ಕಲ್ ಹಾಗೂ ಆಗುಂಬೆ ಬಸ್ ನಿಲ್ದಾಣದ ಬಳಿಯ ಡಿವೈಡರ್ ನಲ್ಲಿದ್ದ ಮರದ ಬುಡಕ್ಕೆ ನಿನ್ನೆ ರಾತ್ರಿ ಮರದ ಬುಡಕ್ಕೆ ಆಸಿಡ್ ಹಾಕಿ ಮರವನ್ನು ಸಾಯಿವ ಪ್ರಯತ್ನ ನಡೆದಿದೆ
ನಿನ್ನೆ ರಾತ್ರಿ ದುಷ್ಕರ್ಮಿಗಳು ಆಸಿಡ್ ಹಾಕಿದ್ದು ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ.
ಸಾರ್ವಜನಿಕರು ಇಂಜಿನಿಯರ್ ಗೆ ನೀಡಿದ ದೂರಿನ ಆಧಾರದ ಮೇಲೆ ಆಸಿಡ್ ಹಾಕಿದ ಛಾಯಾಚಿತ್ರದ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ಇನ್ನು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಅನುಮತಿಯನ್ನು ಪಡೆಯದೇ ಜಾಹೀರಾತು ಫಲಕವನ್ನು ಹಾಕಲಾಗಿದ್ದು, ಅದನ್ನು ತೆರವುಗೊಳಿಸಲು ಅನುಮತಿ ನೀಡಬೇಕೆಂದು ಕೋರಲಾಗಿದೆ.
Acid to tree stump in Tirthahalli