ಸಲ್ಯೂಟ್ ಕಾರ್ಯಕ್ರಮಕ್ಕೆ ಅಜಿತ್ ಹನುಮಕ್ಕನವರ್-Ajith Hanumakkanavar for the Salute program

 SUDDILIVE || SHIVAMOGGA

ಸಲ್ಯೂಟ್ ಕಾರ್ಯಕ್ರಮಕ್ಕೆ ಅಜಿತ್ ಹನುಮಕ್ಕನವರ್-Ajith Hanumakkanavar for the Salute program

Ajith, Hanumakkar

ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ನಗರದ ಕುವೆಂಪು ರಂಗಮಂದಿರಲ್ಲಿ ಸಲ್ಯೂಟ್ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂತೋಷ್ ಬಳ್ಳೆಕೆರೆ ಮಾತನಾಡಿ, ಒಳ ಹೊರಗಿನ ಶತ್ರುಗಳಿಂದ ಭಾರತದ ಅಸ್ಮಿತೆಯ ರಕ್ಷಿಸಿದ ಸಿಂದೂರ ವೀರರಿಗೆ ನಮನಿಸುವ ದೃಷ್ಠಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯಲ್ಲಿ 10 ಪೊಲೀಸರಿಗೆ, ಮತ್ತು ಕರ್ತವ್ಯದ ವೇಳೆ ಸಾವನ್ನಪ್ಪಿದ ಪೊಲೀಸರಿಗೆ, ಪೆಹಲ್ಗಾಮ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತಿಯರಿಗೆ ಶ್ರದ್ಧಾಂಜಲಿ ನಡೆಯಲಿದೆ.

ದಿಕ್ಸೂಚಿ ಭಾಷಣವನ್ನ ಸುದ್ದಿಮಾಧ್ಯಮ ಅಜಿತ್ ಹನುಮಕ್ಕನವರ್ ಮಾಡಲಿದ್ದಾರೆ. ಉದ್ಘಾಟನೆಯನ್ನ ಸಂಸದ ರಾಘವೇಂದ್ರ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ್, ಎಸ್ ಎನ್ ಸಂಗಮೇಶ್, ಐಜಿಪಿ ರವಿಕಾಂತೇಗೌಡ, ಎಸ್ಪಿ ಮಿಥುನ್ ಕುಮಾರ್, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. 

ಜೂ.22 ರಂದು  ಸಂಜೆ 5-30 ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. 


Ajith Hanumakkanavar for the Salute program

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close