SUDDILIVE || BHADRAVATHI
ಡಾ.ಅಂಶುಮಂತ್ ಬಿಆರ್ ಪಿಗೆ ಭೇಟಿ-Dr. Anshumanth visits BRP
ಬಿ ಆರ್ ಪಿ ಯ ಭದ್ರಾ ಜಲಾಶಯದ ಪಕ್ಕದಲ್ಲಿಯೇ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿಗೆ ನೀರು ಹರಿಸಲಾಗುತ್ತಿದೆ ಎಂಬ ರೈತ ಸಂಘದ ಮುಖಂಡ ಕೆಟಿ ಗಂಗಾಧರ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭದ್ರಾ ಡ್ಯಾಮ್ ನಲ್ಲಿ ನಡೆಯುತ್ತಿರುವ ಎಡದಂಡೆ ನಾಲೆಯ sluice ಗೇಟ್ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ನಂತರ ಭದ್ರಾ ಬಲದಂಡೆಯಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿವೀಕ್ಷಣೆ ಮಾಡಿ ರೈತ ಮುಖಂಡರುಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿಗಳು ಶ್ರೀಯುತ ಸತೀಶ್ ಆರ್, ಹಾಗೂ ಅಧೀಕ್ಷಕ ಇಂಜಿನಿಯರ್ ಶ್ರೀಯುತ ರವಿ ಚಂದ್ರ,ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Dr. Anshumanth visits BRP