SUDDILIVE || SHIVAMOGGA
ಎಡಗೈ ಅಪಘಾತಕ್ಕೆ ಕಾರಣ ಚಿತ್ರ ಬಿಡುಗಡೆ-Left-handed accident causes film release
"ಎಡಗೈ ಅಪಘಾತಕ್ಕೆ ಕಾರಣ"ಚಿತ್ರ ಎಲ್ಲೆಡೆ ಕರ್ನಾಟಕ ಸೇರಿದಂತೆ ದೇಶದಾದ್ಯಂತ ತೆರೆಕಾಣ್ತಿದೆ. ನಮ್ಮ ಜೆಸಿ ರಾಜೇಶ್ ಕಿಳಂಬಿ , ಪೂರ್ವ ವಲಯ ಅಧಿಕಾರಿ ಜೆಸಿಐ ಭಾರತ, ವಲಯ 24, ಈ ಚಿತ್ರದ ನಿರ್ಮಾಪಕರಾಗಿರೋದು ಇಡೀ ಜೆಸಿಐ ಗೆ ಹೆಮ್ಮೆ, ಕಿಳಂಬಿ ಮೀಡಿಯಾ ಲ್ಯಾಬ್ ನ ಎರಡನೇಯ ಚಿತ್ರ ಇದಾಗಿದೆ "ಎಡಗೈ ಅಪಘಾತಕ್ಕೆ ಕಾರಣ " ಸಿನೆಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ.
ಪೈಸಾ ವಸೂಲು ಮೂವೀ, ಎಲ್ಲಾ ಕಲಾವಿದರ ಅಭಿನಯ ಚೆನ್ನಗಿ ಮೂಡಿ ಬಂದಿದೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್, ದೂದ್ ಪೇಡಾ ದಿಗಂತ್ ಅವರ ನಟನೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಅಯಸ್ಕಾಂತದಂತೆ ಸೆಳೆಯುತ್ತದೆ. ಕ್ಷಣ ಕ್ಷಣಕ್ಕೂ ಥ್ರಿಲ್ಲರ್ , ಕುತೂಹಲ ಮುಂದುವರಿಸುತ್ತಾ ಹೋಗುತ್ತದೆ. ವಿಭಿನ್ನ ಕಥೆ. ಮರ್ಡರ್ ಮಿಸ್ಟ್ರಿ ಯನ್ನು ಸುಮುಕ್ ಭರವಸೆಯ ನಿರ್ದೇಶಕರು ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಸ್ಯಾಂಡಲ್ ವುಡ್ನ ಸಾಕಷ್ಟು ನಟ ನಟಿಯರು ಸಿನಿಮಾದ ಯಶಸ್ವಿಗಾಗಿ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಧನು ಚಿತ್ರನಟಿ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚಿತ್ರ ಪ್ರೇಮಿಗಳಿಗೆ ಒಂದು ಒಳ್ಳೆಯ ಚಿತ್ರ ತಪ್ಪದೆ ಕನ್ನಡ ಸಿನಿಮಾ ನೋಡಿ ಕನ್ನಡ ಸಿನಿಮಾ ಬೆಳಸಿ. "ಎಡಗೈ ಅಪಘಾತಕ್ಕೆ ಕಾರಣ" ಎಲ್ಲಾ ಜೆಸಿಐ ಸ್ನೇಹಿತರು ಕುಟುಂಬ ಸಮೇತ ಸಿನಿಮಾ ನೋಡಿ, ನಿಮ್ಮ ಸ್ನೇಹಿತರಿಗೆ, ಸಂಬಂಧಿಗಳಿಗೆ , ಅಕ್ಕ ಪಕ್ಕದ ಮನೆಯವರಿಗೆ ಹೇಳಿ, ನಮ್ಮ ಜೆಸಿಐ ಜೆಸಿ ರಾಜೇಶ್ ಕಿಳಂಬಿ ಅವರ ನಿರ್ಮಾಣದ ಸಿನಿಮಾ ನಮ್ಮ ಸಿನಿಮಾ ಎಲ್ಲರೂ ನೋಡಿ, ಕನ್ನಡ ಸಿನಿಮಾ ನೋಡಿ ಕನ್ನಡ ಸಿನಿಮಾ ಬೆಳೆಸುವಂತೆ ಮನವಿ ಮಾಡಿಕೊಳ್ಳಲಾಗಿದೆ
ನೆನ್ನೆ ದಿನ ನಡೆದಂತಹ ಬೆಂಗಳೂರಿನ ಓರಿಯನ್ ಮಾಲ್ ನ ಪಿವಿಆರ್ ಸಿನಿಮಾ ಪ್ರೀಮಿಯರ್ ಶೋ ನಲ್ಲಿ ಚಿತ್ರ ನಟ ನಟಿಯರುಗಳು, ಎಡಗೈ ಅಪಘಾತಕ್ಕೆ ಕಾರಣ ಇಡಿ ಚಿತ್ರತಂಡ ಹಾಗೂ ಮಾಧ್ಯಮ ಮಿತ್ರರು ಭಾಗವಹಿಸಿದ್ದರು ಹಾಗೆ ಶಿವಮೊಗ್ಗದ ಹೊಸನಗರ ತಾಲೂಕ ನ ಪೂರ್ವ ಪತ್ರಕರ್ತರು ಹಾಗೂ ಯುವ ನಿರ್ಮಾಪಕ ರಾಜೇಶ್ ಕೀಳಂಬಿ, ಹಾಗೆ ನಿರ್ಮಾಪಕರುಗಳಾದ ರಜನಿ ಪ್ರಸನ್ನ, ಗುರುದತ್ ಗಾಣಿಗ, ಇವರೊಂದಿಗೆ ಶಿವಮೊಗ್ಗದ ಸ್ನೇಹಿತರುಗಳಾದ ಶುಭಂ ಹೋಟೆಲ್ ಮಾಲೀಕರಾದ ಉದಯ್ ಕದಂಬ, ಚಂದ್ರಹಾಸ ಶೆಟ್ಟಿ, ಜೆಸಿ ಕಿರಣ್ ಕುಮಾರ್, ನವೀನ್ ತಲಾರಿ, ಅನಿಲ್ ಕುಮಾರ್,ಜೆಸಿಐ ನ ವಲಯ 24 ರ ಉಪಾಧ್ಯಕ್ಷ ಪ್ರಮೋದ್ ಶಾಸ್ತ್ರಿ ,ಬಿಜೆಪಿ ಮಾಧ್ಯಮ ಪ್ರಮುಖ ಎಸ್ ಎನ್ ಶ್ರೀನಾಗ, ಬಿಂದು ಎಂ ಬೆಳ್ಳಿ, ಅರ್ಚನ, ಹಾಗೂ ಶಿವಮೊಗ್ಗದ ಚಲನಚಿತ್ರ ಅಭಿಮಾನಿಗಳು ಉಪಸ್ಥಿತರಿದ್ದರು.
Left-handed accident causes