SUDDILIVE || SHIVAMOGGA
ಆಸಿಫ್ ಮುನೀರ್ ಗೆ ಔತಣ ಕೂಟ-ನಗರದಲ್ಲಿ ಪ್ರತಿಭಟನೆ-Asif Munir's banquet-protest in the city
ಅಮರಿಕಾ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ರವರು ಭಾರತದ ಕಡು ವಿರೋಧಿ ಹಾಗೂ ಪಾಪಿ ಪಾಕಿಸ್ತಾನದ ಕುತಂತ್ರಿ ರಕ್ಷಣಾ ಸಚಿವ ಮುನೀರ್ ಅವರಿಗೆ ಅಮೆರಿಕಾದ ವೈಟ್ ಹೌಸ್ನಲ್ಲಿ ಔತಣಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿರುವುದನ್ನು ತೀವ್ರವಾಗಿ ಖಂಡಿಸಿ,ಕಪ್ಪುಪಟ್ಟಿ ಪ್ರದರ್ಶನ ಮಾಡಿ ಡೊನಾಲ್ಡ್ ಟ್ರಂಪ್ರವರ ಪ್ರತಿಕೃತಿಯನ್ನು ದಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಮುಖಂಡರು ಪ್ರತಿಭಟಿಸಿದರು.
ಕಳೆದ ತಿಂಗಳು ನಮ್ಮ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಕಾಶ್ಮೀರದ ಪೆಹೆಲ್ಗಾಂನಲ್ಲಿ ಪಾಕಿಸ್ತಾನ ಪೋಷಿತ ಉಗ್ರರು ಧರ್ಮಾಧಾರಿತವಾಗಿ 26 ಪ್ರವಾಸಿಗರ ಮೇಲೆ ನರಮೇಧ ನಡೆಸಿ ಹತ್ಯೆಗೈದಿದ್ದರು. ಈ ಉಗ್ರಗಾಮಿಗಳಿಗೆ ಪಾಕಿಸ್ತಾನ ಸರ್ವ ರೀತಿಯಲ್ಲಿ ರಕ್ಷಣೆ ನಿಡುವುದಾಗಿ ಇದೇ ಪಾಕಿಸ್ತಾನದ ಪಾಪಿ ರಕ್ಷಣಾ ಸಚಿವರು ಬಹಿರಂಗವಾಗಿ ಘೋಷಣೆ ಮಾಡಿದ್ದರು.
ಈ ಉಗ್ರರನ್ನು ಸದೆಬಡಿಯಲು ದೇಶದ ದಕ್ಷ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿನೂತನವಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿ, ಪಾಕಿಸ್ತಾನದ ಗಡಿಯೊಳಗೂ ನುಗ್ಗಿ ಹುಡುಕಿ ಹುಡುಕಿ ಉಗ್ರರನ್ನು ಸದೆ ಬಡಿದಿರುತ್ತಾರೆ. ಈ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ದಿಗಿಲುಗೊಂಡ ಇದೇ ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಮುನೀರ್ ಅವರು ನಮ್ಮ ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಅಂಗಲಾಚಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲು ಗೋಗರೆದಿದ್ದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ
ಇಂತಹ ಪರಮನೀಚ ಪಾಕಿಸ್ತಾನ ಹಾಗೂ ಪಾಪಿಸ್ತಾನದ ರಕ್ಷಣಾ ಸಚಿವ ಶ್ರೀ ಮುನೀರ್ರವರಿಗೆ ದೊಡ್ಡಣ್ಣನಾದ ಅಮೆರಿಕಾದ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರು ಔತಣ ಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು:- ಕಲ್ಲೂರು ಮೇಘರಾಜ, ಹೆಚ್.ಎಂ.ಸಂಗಯ್ಯ, ಮಂಜುನಾಥ ಪಾಟೀಲ್, ಜನಮೇಜರಾವ್, ಶಂಕ್ರಾ ನಾಯ್ಕ, ವೇದಾನಂದ ಗೌಡ, ಟಿ.ಹೆಚ್.ಬಾಬು ಭಾಗಿಯಾಗಿದ್ದರು.
Asif Munir's banquet-protest in the city