SUDDILIVE || SHIVAMOGGA
ಬಿಜೆಪಿಗೆ ದಿನಾ ಇವರ ವಿರುದ್ಧ ಹೋರಾಡುವಂತಾಗಿದೆ- ಡಿ.ಎಸ್ ಅರುಣ್-BJP has to fight against them every day - D.S. Arun
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬ್ರಿಟಿಶಷರ ಡಿವೈಡೆಡ್ ಪಾಲಿಸಿಯನ್ನು ಅನುಸರಿಸುತ್ತಿದೆ ಎಂದು ಎಂಎಲ್ಸಿ ಡಿಎಸ್ ಅರುಣ್ ಆರೋಪಿಸಿದರು
ವಸತಿ ಯೋಜನೆಯಲ್ಲಿ ಮುಸ್ಲೀರಿಗೆ ಮೀಸಲಾತಿ ಕಲ್ಪಿಸಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ 2013-18ರಲ್ಲಿ ಸಿದ್ದರಾಮಯ್ಯ ಆಡಳಿತ ನಡೆಸಿದ್ದರು. ಆಗ ಶಿಕ್ಷಣದಲ್ಲಿ ಜಾತಿ ಬೀಜ ಬಿತ್ತರಿಸುವ ಪ್ರಯತ್ನ ನಡೆಸಿದರು. 2023 ರಲ್ಲಿ ಎರಡನೇ ಬಾರಿಗೆ ಬಂದ ಸಿದ್ದರಾಮಯ್ಯ ಸರ್ಕಾರ ಯಾರನ್ನ ತುಷ್ಠೀಕರಣ ನಡೆಸುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸೋನಿಯಾ ಗಾಂಧಿಯವರನ್ನ ಅಥವಾ ರಾಹುಲ್ ಗಾಂಧಿ ಅವರನ್ನ ಅಥವಾ ಮುಸ್ಲೀಂರನ್ನ ಪ್ಲೀಸ್ ಮಾಡುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.
2023 ನಡವಳಿಕೆ ಏನಾಗಿದೆ ಅಂದ್ರೆ ಏನೇ ಹೇಳಿದರೂ ಕೇಳಲ್ಲ, ರಾಜ್ಯದ ಬುಕ್ಕಸ ಬರಬಾದ್ ಮಾಡೋದು ಗುರಿಯನ್ನಾಗಿಸುವ, ಹಿಂದುಗಳನ್ನ ಕೊಲೆ ಮಾಡಿದರೆ ಅವರು ವಿರುದ್ಧನೆ ಕೇಸ್ ಹಾಕುವ ಮನೋಭಾವನೆಯನ್ನ ಹೊಂದಿ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ, ಸಂವಿಧಾನವನ್ನು ನಂಬಿದ್ದೇವೆ ಎಂದು ಫೋಸ್ ಕೊಡುವ ಕಾಂಗ್ರೆಸ್ ನಾಯಕರುಗಳು ಸಂವಿಧಾನದ ಪುಸ್ತಕಗಳನ್ನ ಹಿಡಿದುಕೊಂಡು ಅಂಬೇಡ್ಕರಿಗೆ ಜೈ ಅನ್ನುತ್ತಾರೆ ವಿನಃ ಸಂವಿಧಾನದ ಪರ ನಡೆದುಕೊಂಡ ಉದಾಹರಣೆಗಳೆ ಇಲ್ಲವಾಗಿದೆ ಎಂದರು.
ಗುತ್ತಿಗೆ ಆಧಾರದ ಮೇಲೆ 3ಬಿಯಲ್ಲಿರುವ ಒಂದೇ ಒಂದು ಕಮ್ಯುನಿಟಿ ಮುಸಲ್ಮಾನ್ ಕಮ್ಯುನಿಟಿಗೆ ಪ್ಲೀಸ್ ಮಾಡುವ ದೃಷ್ಠಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳಿಗೆ ಅನುವು ಮಾಡಿಕೊಡದೆ ಈಗ ವಸತಿಗಳಲ್ಲೂ 15% ಮುಸ್ಲೀಂರಿಗೆ ರಿಸರ್ವೇಷನ್ ನೀಡಲಾಗುತ್ತಿರುವುದು ಸಂವಿಧಾನ ಬಾಹಿರವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಘನತೆ ಹಾಳು ಮಾಡುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಒಟ್ಟಿಗೆ ಹೋಗುವಂತಹದ್ದಾಗಿದೆ. ಮುಸ್ಲೀಂರಿಗೆ ತುಷ್ಠೀಕರಣ ಎಷ್ಟುವರ್ಷಗಳ ಕಾಲಮುಂದುವರೆಸುತ್ತೀರಾ? ಜಾತಿ ಗಣತಿ ನಡೆಯುತ್ತಿದೆ. ಇದಾದ ನಂತರ ಬಿಪಿಎಲ್ ಕಾರ್ಡ್ ದಾರರಿಗೆ ಯೋಜನೆ ರೂಪಿಸಿ ನೀಡಿ ಎಂದು ಸಲಹೆ ನೀಡಿದರು.
ಧರ್ಮಗಳಲ್ಲಿ ಮೀಸಲಾತಿ ಕೊಡುವುದು ಸಂವಿಧಾನದಲ್ಲಿ ಇಲ್ಲ. ಅಲ್ಪಸಂಖ್ಯಾತ ಕಮ್ಯೂನಿಟಿಯಲ್ಲಿ ಜೈನ್ ಕ್ಯೂನಿಟಿ ಇದ್ದರೂ ಅವರಿಗೆ ಯಾವ ಲಾಭವೂ ದೊರೆಯುತ್ತಿಲ್ಲ. ಬಿಜೆಪಿಗೆ ಇವರ ವಿರುದ್ಧ ದಿನಾ ಹೋರಾಟ ಮಾಡುವಂತಾಗಿದೆ. ಕೌನ್ಸಿಲ್ ನಲ್ಲಿ ಬಿಜೆಪಿ ಮೆಜಾರಿಟಿ ಇದ್ದರೂ ಕೂಡ ಬಿಲ್ ಪಾಸ್ ಮಾಡುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಎಲ್ಲಾ ಬಡವರ್ಗವಿದೆ ಅವರಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದರು.
BJP has to fight against them every day