ನಾಗರಾಜ್ ಗೌಡರಿಂದ ಕೊಲೆ ಬೆದರಿಕೆ ಪ್ರಕರಣ-ಶಕ್ತಿ ಪ್ರದರ್ಶನ ನಡೆಸಿದ ಭಂಡಾರಿ‌ ಮಾಲ್ತೇಶ್-Bhandari Maltesh, showed strength

 SUDDILIVE || SHIVAMOGGA

ನಾಗರಾಜ್ ಗೌಡರಿಂದ ಕೊಲೆ ಬೆದರಿಕೆ ಪ್ರಕರಣ-ಶಕ್ತಿ ಪ್ರದರ್ಶನ ನಡೆಸಿದ ಭಂಡಾರಿ‌ ಮಾಲ್ತೇಶ್-Bhandari Maltesh, a case of death threats from Nagaraj Gowda, showed strength

Bhandari Malthesh, strength

ಶಿಕಾರಿಪುರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದ ನಾಗರಾಜ್ ಗೌಡರ ವಿರುದ್ಧವೇ ಎಫ್ಐಆರ್ ಆಗಿದೆ. ಕೊಲೆ ಬೆದರಿಕೆಯ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. 

ಮೊಬೈಲ್ ನಲ್ಲಿ ನಾಗರಾಜ್ ಗೌಡರು ಜಿಲ್ಲಾ ಉಪಾಧ್ಯಕ್ಷ ಭಂಡಾರಿ ಮಾಲ್ತೇಶ್ ಗೆ ಕೊಲೆ ಬೆದರಿಕೆ ಹಾಕಿದ ವಿಷಯವಾಗಿ ಶಹರ ಠಾಣೆಗೆ ದೂರು ತೆಗೆದುಕೊಂಡು ಹೋಗಲಾಗಿತ್ತು. ದೂರನ್ನ ದಾಖಲಿಸಿಕೊಳ್ಳದ ಶಹರ ಠಾಣೆ ಪೊಲೀಸ್ಅಧಿಕಾರಿಗಳು ಎಸ್ಪಿ ಅವರ ಅಂಗಳಕ್ಕೆ ನೂಕಿದ್ದರು.

ನಂತರ ಹಾಗೂ ಹೀಗೂ ಹೋಗಿ ಸಚಿವ ಮಧು ಬಂಗಾರಪ್ಪನವರ ಮಾರ್ಗದರ್ಶನದಲ್ಲಿ ದೂರು ದಾಖಲಾಗಿದೆ.

ದೂರಿಗೂ ಮುನ್ನಾ ಭಂಡಾರಿ ಮಾಲ್ತೇಶ್ ಶಿವಮೊಗ್ಗದ ಜಿಲ್ಲಾಧ್ಯಕ್ಷರಿಗೆ ನಾಗರಾಜ್ ಗೌಡರು ಬಿಜೆಪಿಗೆ ಚುನಾವಣೆಗಳಲ್ಲಿ ಸಪೋರ್ಟ್ ಮಾಡ್ತಾ ಇದ್ದಾರೆ ಎಂದು   ದೂರು ನೀಡಲು ಬಂದಿದ್ದ 200 ಕ್ಕೂ ಹೆಚ್ಚು ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ನಂತರ ಗೌಡರ ವಿರುದ್ಧ ದೂರನ್ನ ನೀಡಿದ್ದಾರೆ. ರಾಜ್ಯ ಕೆಪಿಸಿಸಿಗೆ ಈ ದೂರನ್ನ ರವಾನಿಸಿರುವುದಾಗಿ ವಿಷಯ ತಿಳಿದು ಬಂದಿದೆ. 

ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಶಿಕಾರಿಪುರದ ನಾಗರಾಜ್ ಗೌಡರ ವಿರುದ್ಧ ದೂರನ್ನ ಹೊತ್ತು 200 ಕ್ಕೂ ಹೆಚ್ಚು ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿರುವುದು ಶಿಕಾರಿಪುರದ ರಾಜಕಾರಣದಲ್ಲಿ ಮೈಲಿಗಲ್ಲು ಪಡೆದುಕೊಳ್ಳುತ್ತಾ ಎಂಬ ಪ್ರಶ್ನೆಗೆ ಉತ್ತರ ಈಗಲೇ ಹೇಳುವುದು ಕಷ್ಟ. ಆದರೆ ಸಭೆಯಲ್ಲಿ ನಾಗರಾಜ್ ಗೌಡರ ವಿರುದ್ಧದ ಧ್ವನಿ ಗಟ್ಟಿಯಾಗಿದೆ. 

ಶಿಕಾರಿಪುರದಲ್ಲಿ ಈಗ ಮತ್ತೊಂದು ಗುಂಪುಗಾರಿಕೆಗೆ ಈ ಪ್ರಕರಣ ಅಣಿ ಮಾಡಿಕೊಟ್ಟಂತೆ ಕಾಣುತ್ತಿದೆ. ಶಿಕಾರಿಪುರದಲ್ಲಿ ಉದಯೋನ್ಮುಖ ರಾಜಕಾರಣಿ ಎನಿಸಿಕೊಂಡಿದ್ದ ನಾಗರಾಜ್ ಗೌಡರ ಬೆನ್ನಿಗೆ ನಿಂತಿದ್ದ, ಅದರಲ್ಲೂ 2023ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ವೇಳೆ ಗೌಡರ ಬೆನ್ನಿಗೆ ನಿಂತವರೆಲ್ಲ ಈ ಬಾರಿ ಭಂಡಾರಿ ಮಾಲ್ತೇಶ್ ಪರ ನಿಂತಿರುವುದು ಗೌಡರ ಜಂಘೀಬಲವನ್ನೇ ಕುಸಿಯುವಂತೆ ಮಾಡಿದೆ. 

ಇಡೀ ದೇಶದಲ್ಲಿ ಕಾಂಗ್ರೆಸ್ ಗುಂಪುಗಾರಿಕೆಯಲ್ಲೇ ಬೆಳೆದು ಬಂದ ಪಕ್ಷ. ರಾಜ್ಯಕ್ಕಾಗಲಿ, ಶಿವಮೊಗ್ಗ, ಶಿಕಾರಿಪುರದಲ್ಲಾಗಲಿ ಗುಂಪುಗಾರಿಕೆ ಬಿಟ್ಟು ಕಾಂಗ್ರೆಸ್ ಇಲ್ಲವೆಂಬುದು ಆಡುವ ಮಕ್ಕಳಿಗೂ ಗೊತ್ತಾಗಿದೆ. ಆದರೆ ನಾಗರಾಜ್ ಗೌಡರನ್ನ ಬೆಂಬಲಿಸಿಕೊಂಡು ಬಂದವರೆ ಗುಂಪು ಬದಲಿಸಿರುವುದು ಗೌಡರಿಗೆ ಸಣ್ಣ ಹಿನ್ನಡೆಯೂ ಹೌದು. ಈ ಪ್ರಕರಣ ಎಲ್ಲಿಗೆ ಮುಟ್ಟಲಿದೆ ಗೊತ್ತಿಲ್ಲ. ಆದರೆ ಮತ್ತೊಂದು ಬಣದ ಉಗಮಕ್ಕೆ ಈ ಪ್ರಕರಣ ಅಣಿಮಾಡಿಕೊಟ್ಟಿದ್ದು ನಿಜ! ಸಭೆಯ ನಂತರ ಗೌಡರು ಭಂಡಾರಿ ಮಾಲ್ತೇಶ್ ಗೆ ಧಮ್ಕಿ ಹಾಕಿದ ನಂತರ ರಾಜಕೀಯ ಒತ್ತಡದಲ್ಲಿ ದೂರು ದಾಖಲಾಗಿದೆ. 

Bhandari Maltesh, showed strength

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close