SUDDILIVE || SHIVAMOGGA
ಡೋಲಿಯಲ್ಲಿ ಅನಾರೋಗ್ಯದ ವೃದ್ಧೆಯನ್ನ ಹೊತ್ತೊಯ್ದ ಗ್ರಾಮಸ್ಥರು-ಮಲಗಿಕೊಂಡಿರುವ ಅಧಿಕಾರಿಗಳು-Villagers carrying a sick old woman in a doli - officials lying down
90 ವರ್ಷದ ವೃದ್ದೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ಡೋಲಿಯಲ್ಲಿ ಕೂರಿಸಿಕೊಂಡು ಹೋಗಲಾಗಿದೆ. ಇದು ಗ್ರಾಮಸ್ಥರ ಪಾಡಾದರೆ ಅಭಿವೃದ್ಧಿ ಮಾಡುವ ಅಧಿಕಾರಿ ವರ್ಗಗಳಿಗೆ ಇದು ಏನೂ ಅನಿಸದೆ ಇರುವುದು ನಾಗರೀಕ ಸಮಾಜವನ್ನ ಅಣಕಿಸಿದಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ, ಡೋಲಿಯಲ್ಲಿ ಅನಾರೋಗ್ಯ ಪೀಡಿತ ವೃದ್ಧೆಯನ್ನ ಗ್ರಾಮಸ್ಥರು ಹೊತ್ತುಕೊಂಡು ಹೋಗಿದ್ದಾರೆ. ಇದು ಅಧಿಕಾರಿಗಳಿಗೆ ಏನೂ ಅನಿಸದೆ ಇರುವುದು ಹಾಗೂ ಇದೇ ಪರಿಸ್ಥಿತಿ ಅವರ ಕುಟುಂಬಕ್ಕೆ ಸಂಬಂಧಿಸಿದರೆ ಹೇಗೆ ಎಂದು ಅರಿವೆಗೆ ಬಾರದಿರುವುದು ದುರಂತವೂ ಹೌದು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಕಾಡಿಗ್ಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಮರ್ಪಕ ರಸ್ತೆ ಇಲ್ಲದೆ ಗ್ರಾಮಸ್ಥರು ಗೋಳಾಡುತ್ತಿದ್ದಾರೆ. ಅನಾರೋಗ್ಯ ಪೀಡಿತ ವೃದ್ಧೆ ಯನ್ನು ಡೋಲಿಯಲ್ಲಿ ಸಾಗಿಸುತ್ತಿದೆ. ಆದರೆ ಈ ಪ್ರದೇಶ ನಮಗೆ ಸಂಬಂಧ ಪಡದೆಂತೆ ಅಧಿಕರಿ ವರ್ಗ ಮತ್ತು ರಾಜಕಾರಣಿಗಳ ವರ್ತನೆ ಮುಂದುವರೆದಿದೆ.
ಪಶ್ಚಿಮ ಘಟ್ಟದಲ್ಲಿ ಮಾಡಬಾರದ ಅಭಿವೃದ್ದಿಗೆ ಅಧಿಕಾರಿಗಳು ಕೈಹಾಕಿದ್ದಾರೆ. ಒಂದು ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸದೆ ಇರುವುದು ನಾಗರೀಕ ಸಮಾಜವನ್ನ ಅಣಕಿಸುತ್ತಿದೆ. ರಸ್ತೆ ಅಗಲೀಕರಣಕ್ಕೆ, ಸೇತುವೆ, ರೈಲ್ವೆ ಸಂಪರ್ಕಕ್ಕೆ ಪಶ್ಚಿಮ ಘಟ್ಟವನ್ನ ನುಂಗಿ ನೀರು ಕುಡಿಯುವ ಅಭಿವೃದ್ದಿ ಕಾರ್ಯಗಳು ಸಂಪರ್ಕ ರಸ್ತೆಗೆ ಕಲ್ಪಿಸದಿರುವುದು ನಮ್ಮ ನಿಮ್ಮೆಲ್ಲರ ಹಣೆಬರಹವೂ ಹೌದು
90 ವರ್ಷದ ಕಾಡಿಗ್ಗೇರಿ ಕಲ್ಯಾಣಮ್ಮ ಅನಾರೋಗ್ಯ ಪೀಡಿತ ವೃದ್ಧೆಯಾಗಿದ್ದರು. ಪ್ಲಾಸ್ಟಿಕ್ ಚೇರ್ ನ್ನ ಡೋಲಿಯಾಗಿ ಪರಿವರ್ತಿಸಿಕೊಂಡು ಹೊಸನಗರಕ್ಕೆ ರವಾನಿಸಲಾಗಿದೆ. ಹೊಸನಗರ ತಾಲೂಕು ಕಾಡಗ್ಗೇರಿ ಸಂಪರ್ಕ ರಸ್ತೆಯ ಅವ್ಯವಸ್ಥೆ ಅನಾವರಣವಾಗಿದೆ.
ಹಲವು ದಿನಗಳಿಂದ ಅನಾರೋಗ್ಯ ಪಿಡಿತರಾಗಿದ್ದ ಕಲ್ಯಾಣಮ್ಮನಿಗೆ ಸರಿಯಾದ ರಸ್ತೆ ಇಲ್ಲದೆ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಆಗಿದೆ. ಗುಡ್ಡಗಾಡು ಪ್ರದೇಶದಿಂದ ಕಾಡ್ಗೇರಿ ಗ್ರಾಮಕೂಡಿದೆ. ಇಷ್ಟಾದರೂ ಅಧಿಕಾರಿಗಳು ಕ್ಯಾರೆ ಎಂದಿದ್ದಾರೆ.
ಗ್ರಾಮದ ಗ್ರಾಮಸ್ಥರ ಗೋಳನ್ನ ಕೇಳುವವರಿಲ್ಲ ಹೇಳುವವರಿಲ್ಲ. ನಾಲ್ಕೈದು ಜನ ಸೇರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ ಮನಕಲುಕುವಂತಿದೆ. 21 ನೇ ಶತಮಾನದಲ್ಲಿ ಈ ಗ್ರಾಮದಲ್ಲಿ ಅನಾರೋಗ್ಯ ಪೀಡಿತರಾದರೆ ದೇವರೇ ಗತಿ
officials lying down