SUDDILIVE || SHIVAMOGGA
ವ್ಯಕ್ತಿತ್ವ ವಿಕಸನಕ್ಕೆ ಚೆಸ್ ಪಂದ್ಯಾವಳಿ ಸಹಕಾರಿ - ಜೆ ಸಿ ಐ 24ರ ಅಧ್ಯಕ್ಷ ಗಿರೀಶ್ ಭಾರ್ಗವ್-Chess tournament helps in personality development - JCI 24 President Girish Bhargav
ವ್ಯಕ್ತಿತ್ವ ವಿಕಸನಕ್ಕೆ ಚೆಸ್ ಪಂದ್ಯಾವಳಿ ಸಹಕಾರಿಯಾಗುತ್ತದೆ ಎಂದು ಜೆ ಸಿ ಐ ಜೋನ್ 24ರ ಅಧ್ಯಕ್ಷ ಗಿರೀಶ್ ಭಾರ್ಗವ್ ತಿಳಿಸಿದರು.
ಚಾಣಕ್ಯಚ ಸ್ಕೂಲ್ ಹಾಗೂ ಜೆಸಿಐ ಶಿವಮೊಗ್ಗ ಚಿರಂತನ ವತಿಯಿಂದ ಮೊದಲ ಬಾರಿಗೆ ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ 27ರಿಂದ 29 ರವರೆಗೆ 19 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯ ರಾಜ್ಯಮಟ್ಟದ ಫೀಡೆ ಕ್ಲಾಸಿಕಲ್ ರೇಟಿಂಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಜೆ ಸಿ ಐ ಚಿರಂತನ ಸಂಸ್ಥೆ ವತಿಯಿಂದ ಯುವಕರಿಗೆ ವ್ಯಕ್ತಿತ್ವ ವಿಕಾಸನಾ ತರಬೇತಿ ನೀಡಲಾಗುತ್ತಿದೆ. ಹಾಗೂ ಒತ್ತಡ ನಡುವೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಚೆಸ್ ಕ್ರೀಡೆಯಿಂದ ಲಭ್ಯವಾಗುತ್ತದೆ ಎಂದರು. ಎಲ್ಲಾ ಪ್ರಯತ್ನಗಳು ಯಶಸ್ಸು ಸಿಗೋದಿಲ್ಲ ಚೆಸ್ ನಲ್ಲಿ ಬುದ್ಧಿ ಜೊತೆ ಎದುರಾಳಿಯ ನಡೆಯ ಬಗ್ಗೆ ಅರಿವು ಇರಬೇಕು. ಚೆಸ್ ಕ್ರೀಡೆ ಭಾರತದಲ್ಲಿ ಅಲ್ಲದೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ.
ವಿಶ್ವನಾಥ್ ಅನಂದ್, ಸುಕೇಶ್, ಪ್ರಜ್ಞಾನಂದ್ ಮೊದಲಾದವರು ವಿಶ್ವದಲ್ಲಿ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. ಮಕ್ಕಳೂ ಕೂಡ ಮೊಬೈಲ್ ಟಿವಿ ಸೇರಿದಂತೆ ಹಲವು ದುಶ್ಚಟಗಳಿಗೆ ಬಲಿಯಾಗದೆ, ಕ್ರೀಡೆಯಲ್ಲಿ ಭಾಗಿಯಾಗಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಒಳಿತು ಎಂದು ಸಹ ಈ ವೇಳೆ ನುಡಿದರು. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ ವಿನೋಬನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂತೋಷ್ ಮಾತನಾಡಿ, ಇಲ್ಲಿ ನಡೆದ ಸ್ಪರ್ಧಾರ್ಥಿಗಳು ನೋಡಿದರೆ ಚೆಸ್ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಇರುವ ಆಸಕ್ತಿ ಗೊತ್ತಾಗುತ್ತದೆ.
ಈ ಕ್ರೀಡಾಕೂಟದಲ್ಲಿ ಭಾಗ್ಯದವರಲ್ಲಿ ಯಾರಾದರೂ ಒಬ್ಬರು ವಿಶ್ವ ಮಾನ್ಯವಾಗುವ ಸಾಧ್ಯತೆ ಕೂಡ ಇರಬಹುದು. ಕೆಟ್ಟ ಹವ್ಯಾಸಗಳಲ್ಲಿ ಕಲಿಯುವುದಕ್ಕಿಂತ ಈ ರೀತಿಯ ವ್ಯಕ್ತಿ ವಿಕಾಸನ ಮಾಡುವ ಕ್ರೀಡೆಗಳಿಗೆ ಒತ್ತು ಕೊಡುವುದು ಒಳ್ಳೆಯದು ಎಂದು ಹೇಳಿದರು. ಈ ಸಂದರ್ಭದಲ್ಲಿ ಚಾಣಿಕ್ಯ ಸ್ಕೂಲ್ ಸಂಸ್ಥಾಪಕರಾದ ವಿಲ್ಸನ್ ಅಂದ್ರಾದೆ, ಜೆಸಿಐ ವಲಯ 24ರ ಉಪಾಧ್ಯಕ್ಷ ಜೆಸಿ ಪ್ರಮೋದ್ ಶಾಸ್ತ್ರಿ, ಚಿರಂತನ ಅಧ್ಯಕ್ಷರಾದ ರುದ್ರೇಶ್ ಕೋರಿ, ಜೆ ಸಿ ಐ ಕಾರ್ಯದರ್ಶಿ ವೈಷ್ಣವಿ ಚಂದನ್, ಸಚಿನ್ ಪಿ ಎಸ್ ಹಾಗೂ ತೀರ್ಪುಗಾರರಾದ ಪ್ರಾಣೇಶ್ ಯಾದವ್ ನರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
Chess tournament