SUDDILIVE || SHIVAMOGGA
ಪ್ರಾಮಾಣಿಕತನವನ್ನ ಮೆರೆದ ಯುವಕ-A young man who demonstrated honesty
ಶಿವಮೊಗ್ಗದಲ್ಲಿ ಮನವೀಯತೆ ಕೆಲಸಗಳು ಇನ್ನೂ ಜೀವಂತವಾಗಿವೆ ಎಂಬ ನಂಬಿಕೆಗೆ ಈ ಘಟನೆಗಳು ಸಾಕ್ಷಿಯಾಗಿದೆ. ಬೇರೆಯವರ ಕಾಸನ್ನ ಮುಟ್ಟಬಾರದು ಎಂಬ ನೈತಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಲಕ್ಷ ಗಟ್ಟಲೆ ಹಣ ಸಿಕ್ಕಿದರೆ ನೀವು ಏನು ಮಾಡುತ್ತೀರಿ ಎಂಬ ಪ್ರಶ್ನೆ ಹುಟ್ಟಿದಾಗ ನಾವು ಆ ಹಣವನ್ನ ನೈಜ ಮಾಲೀಕನಿಗೆ ಹಿಂದಿರುಗಿಸುತ್ತೇವೆ ಪ್ರಾಮಾಣಿಕತೆ ಮೆರೆಯುತ್ತೇವೆ ಎಂಬ ಪ್ರಶ್ನೆಗಳಿಗೆ ಈ ಘಟನಾವಳಿ ಉತ್ತರವಾಗಿದೆ.
ಇಷ್ಟೆಲ್ಲ ಪೀಠಿಕೆ ಹಾಕುವ ಅವಶ್ಯಕತೆಯಿದೆ. ಕಾರಣ ಶೋಕಿ ದುನಿಯಾದಲ್ಲಿ ಮಾನವೀಯತೆ, ನೈತಿಕತೆಯ ಪ್ರಶ್ನೆ ಹುಟ್ಟಿದಾಗಲೆಲ್ಲಾ ಅದನ್ನ ಅದುಮಿ ನಮ್ಮ ವಾಂಛೆಗಳನ್ನ ತೆರೆದಿಡುವ ಕೆಲಸ ಮಾಡುತ್ತೇವೆ. ಆದರೆ ಇಲ್ಲೊಬ್ಬ ಯುವಕ ನೈತಿಕತೆಯನ್ನ ಮೆರೆದಿದ್ದಾನೆ. ಲಕ್ಷದ ಹಣದ ಬಂಡಲ್ ನ್ನ ಅಷ್ಟೆ ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ್ದಾನೆ.
ನಿನ್ನೆ ವಿಜಯ್ ಎಂಬುವರು ಪಾರ್ಕ್ ಎಕ್ಸ್ ಟೆನ್ಷನ್ ಬಳಿ ತಮ್ಮಬೈಕ್ ರಿಪೇರಿಗೆ ಬಂದಿದ್ದವರು ಲ್ಯಾಪ್ ಟ್ಯಾಪ್ ಬ್ಯಾಗನ್ನ ಆಕಾಶ್ ಎಂಬುವರ ವಾಹನದ ಬಳಿ ಬಿಟ್ಟು ಹೋಗಿದ್ದರು. ಬೈಕ್ ಬಳಿ ಬಂದ ಆಕಾಶ್ ಬ್ಯಾಗ್ ನ್ನ ತೆಗೆದು ಪರಿಶೀಲಿಸಿದಾಗ ಬ್ಯಾಗ್ ನಲ್ಲಿ ಲ್ಯಾಪ್ ಟ್ಯಾಪ್ ಜೊತೆಗೆಹಣವನ್ನೂ ಸಹ ಪತ್ತೆಯಾಗಿದೆ.
500 ರೂ. ನೋಟಿನ ಕಂತನ್ನ ಎರಡು ಬಂಡಲ್ ಬಿಟ್ಟುಹೋಗಿದ್ದರು. ಅದರಲ್ಲಿ ಅವರ ಐಡಿಕಾರ್ಡ್ ಸಹ ಇದ್ದಿದ್ದರಿಂದ ಅವರನ್ನ ಸಂಪರ್ಕಿಸುವ ಕೆಲಸ ಮಾಡಿ ಆಕಾಶ್ ಲಕ್ಷ ರೂ. ಹಣವಿದ್ದರೂ ಕೇರ್ ಮಾಡದೆ ವಿಜಯ್ ಗೆ ಹಿಂದಿರುಗಿಸಿದ್ದಾರೆ.
A young man who demonstrated integrity