SUDDILIVE || BHADRAVATHI
ಸ್ಪಿಲ್ ವೇ ಮೂಲಕ ನೀರು ಹರಿಸಲು ತೀರ್ಮಾನ-Deside to release water through spill way gate
ಭದ್ರಾವತಿಯ ಬಿಆರ್ ಪಿ ಯಲ್ಲಿರುವ ಭದ್ರ ಜಲಾಶಯಕ್ಕೆ ನಿನ್ನೆ ಒಳಹರಿವು ಹೆಚ್ಚಾಗಿದ್ದು, ಅದರಲ್ಲೂ ಜೂನ್ ತಿಂಗಳಲ್ಲೇ ಜಲಾಶಯ ಭರ್ತಿ ಹಂತಕ್ಕೆ ಬಂದು ತಲುಪಿದ ಬೆನ್ನಲ್ಲೇ ಭದ್ರಜಲಾಶಯದ ಅಧಿಕಾರಿಗಳು ನೀರು ಬಿಡುಗಡೆಗೆ ನೋಟಿಫಿಕೇಷನ್ ಬಿಡುಗಡೆ ಮಾಡಿದ್ದಾರೆ.
ನೋಟಿಫಿಕೇಷನ್ ಬೆನ್ನಲ್ಲೇ ನಾಳೆ ಅಥವಾ ನಾಡಿದ್ದು ಅಥವಾ ಒಂದು ವೇಳೆ ಜಲಾಶಯಕ್ಕೆ ಒಳಹರಿವು ಹೆಚ್ಚಾದಲ್ಲಿ ಸ್ಪಿಲ್ ವೇ ಗೇಟ್ ಮೂಲಕ ನದಿಗೆ ನೀರು ಬಿಡುಗಡೆಯ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.
ನಿನ್ನೆ ಬೆಳಿಗ್ಗೆ ಜಲಾಶಯಕ್ಕೆ 26000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಬೆನ್ನಲ್ಲೇ ಜಲಾಶಯ ಇಂದು 162 ಅಡಿಗೆ ಜಲಾಶಯ ಭರ್ತಿಯಾಗಿದೆ. ಆದರೆ ಇಂದು ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. 21 ಸಾವಿರ ಕ್ಯೂಸೆಕ್ ಗೆ ಇಳಿದು ಇಂದು ಸಂಜೆಗೆ ಮಳೆಯ ಕೊರತೆಯಿಂದ ಮತ್ತಷ್ಟು ಒಳಹರಿವಿನಲ್ಲಿ ಕಡಿಮೆಯಾಗಿದೆ.
186 ಅಡಿ ಜಲಾಶಯದಲ್ಲಿ 71. ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈಗ 42 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ 162 ಅಡಿಯಷ್ಟು ಜಲಾಶಯದ ನೀರು ಸಂಗ್ರಹವಾಗಿದೆ. ಜಲಾಶಯದ ಭರ್ತಿಗೆ 24 ಅಡಿ ಅಷ್ಟೆ ಬಾಕಿಯಿದ್ದು ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ಅಧಿಕ ನೀರು ಸಂಗ್ರಹವಾಗಿದೆ. ಕಾರಣ ಶೀಘ್ರದಲ್ಲಿಯೇ ಸ್ಪಿಲ್ ವೇ ಮೂಲಕ ನೀರು ಹರಿಸಲು ಜಲಾಶಯದ ಅಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ.
ಕಾರಣ ಜಲಾಶಯಕ್ಕೆ ಜಾನುವಾರುಗಳನ್ನ ಮತ್ತು ಸಾರ್ವಜನಿಕರು ಓಡಾಡದಂತೆ ಸೂಚನೆ ನೀಡಲಾಗಿದೆ.
Deside to release water through spill way gate