SUDDILIVE || SHIVAMOGGA
ಜಾತಿ ಜನಗಣತಿ ಬಗ್ಗೆ ಸಿಎಂಗೆ ಈಶ್ವರಪ್ಪ ಬಹಿರಂಗ ಪತ್ರ-Eshwarappa's open letter to CM regarding caste, census
ಸಿಎಂಗೆ ಜಾತಿ ಜನಗಣತಿ ವರದಿಯನ್ನಜಾರಿಗೆ ತನ್ನಿಇಲ್ಲ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಸವಾಲು ಎಸೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂತರಾಜು ವರದಿಯನ್ನ ತಂದೇ ತರುವುದಾಗಿ ಮೊದಲನೇ ಬಾರಿ ಸಿಎಂ ಆಗಿದ್ದ ಮುಖ್ಯಮಂತ್ರಿಗಳು ಟೇಬಲ್ ಕುಟ್ಟಿ ಹೇಳಿದರು. ಕಾಂತರಾಜು ನಿವೃತ್ತಿಯಾಗುವವರೆಗೂ ವರದಿ ಜಾರಿಯಾಗಲಿಲ್ಲ. ನಂತರ ಜಯಪ್ರಕಾಶ್ ಹೆಗಡೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಮತ್ತೆ ತರುವುದಾಗಿ ಹೇಳಿದರು. ಆಗ ವರದಿಗೆ ಅಧ್ಯಕ್ಷರ ಸಹಿಯೇ ಇರಲಿಲ್ಲ. ಮತ್ತೆ ವರದಿ ತರುವುದಾಗಿ ಮತ್ತೆ ಮಾತನಾಡಲು ಆರಂಭಿಸಿದರು.
ಸಿದ್ದರಾಮಯ್ಯ ಅವರ ಪುತ್ರ ಮೇಲ್ವರ್ಗದ ಒತ್ತಡದಿಂದ ಜಾತಿಜನಗಣತಿ ಜಾರಿ ತರಲು ಆಗಲಿಲ್ಲ ಎಂದರು. ನಂತರ ಸಿದ್ದರಾಮಯ್ಯ ದೆಹಲಿಗೆ ಹೋಗಿ ಹೊಸದಾಗಿ ಸರ್ವೆ ಮಾಡುವುದಾಗಿ ಹೈಕಮಾಂಡ್ ಸೂಚಿಸಿದ್ದಾರೆ ಎಂದು ಒಪ್ಪಿಕೊಂಡು ಬಂದರು. ಒಂಬತ್ತು ವರ್ಷದಿಂದ ಜಾರಿಗೆ ತರಲು ಆಗದ ನಿಮಗೆ ತೊಂಬತ್ತು ದಿನಗಳಲ್ಲಿ ವರದಿ ಜಾರಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿಗೊಳಿಸುವುದಾಗಿ ಘೋಷಿಸಿ ಇಲ್ಲ ರಾಜೀನಾಮೆಕೊಡಿ. ಸಿದ್ದರಾಮಯ್ಯರಿಗೆ ದಲಿತರು ಮತ್ತು ಹಿಂದುಳಿದವರ ಬಗ್ಗೆ ಕಾಳಜಿಯಿಲ್ಲ. ಸಿದ್ದವಿರುವ ವರದಿಯನ್ನ ಯಾಕೆ ಜಾರಿ ಮಾಡುತ್ತಿಲ್ಲ. ಚರ್ಚೆಯಾಗಿ ವರದಿ ಜಾರಿಯಾಗಲಿ.
ಅನ್ಯಾಯವಾದವರಿಗೆ ನ್ಯಾಯಸಿಗಲಿ. ಇಲ್ಲವಾದಲ್ಲಿ ಹಿಂದುಓಇದ ಮತ್ತು ದಲಿತರಿಗೆ ಮಾಡುತ್ತಿರುವ ದ್ರೋಹ ಇದು ಎಂದು ಗುಡುಗಿದರು.
ಈಗಾಗಲೇ ಕೇಂದ್ರ ಸರ್ಕಾರ 2027 ರಿಂದ ಜಾತಿ ಮತ್ತು ಜಾತಿ ಗಣತಿ ಮಾಡುವುದಾಗಿ ಘೋಷಿಸಿದೆ. ನಮ್ಮದೇನು, ಹಣದ ವ್ಯರ್ತ, ಶಿಕ್ಷಕರನ್ನ ಮತ್ತೆ ಸರ್ವೆಗೆ ಹೇಗೆ ನಿಯುಕ್ತಿಗೊಳಿಸುತ್ತೀರಿ. ಎಲ್ಲಾ ದ್ರೋಹದ ಕೆಲಸ ಮಾಡಬೇಡಿ. ಜಾರಿಯಾಗದಿದ್ದರೆ ಹಿಂದುಳಿದ ವರ್ಗ ಮತ್ತು ದಲಿತರ ಶಾಪ ತಟ್ಟುತ್ತೆ ಎಂದು ಗುಡುಗಿದರು.
ಆಂಜನೇಯ ಸ್ಥಿತಿ ಸಿದ್ದರಾಮಯ್ಯರಿಗೂ ಬರಲಿದೆ. ಪ್ರಬಲ ಜಾತಿಗಳ ಒತ್ತಡಕ್ಕೆ ಜಾರಿತರಲು ಆಗಲಿಲ್ಲ ಎಂದು ಯತೀಂದ್ರ ಹೇಳಿದ್ದರು. ದಲಿತ ಮತ್ತು ಹಿಂದುಳಿದ ವರ್ಗದವರನ್ನ ಪಕ್ಕಕ್ಕೆ ಸರಿಸಿ ಈಗ ಯೂ ಟರ್ನ್ ಹೊಡೆದಿದ್ದಾರೆ. ಸ್ವಾರ್ಥದ ಮತ್ತು ಅಧಿಕಾರದ ಲಾಲಸೆಗೆ ಈ ವರ್ಗಗಳನ್ನ ಬಲಿಕೊಡಲಾಗುತ್ತಿದೆ.
ಕುತ್ತಿಗೆ ಕೊಯ್ದರು ಹಿಂದುತ್ವ ಬಿಟ್ಠು ಹೋಗಲ್ಲ. ಬಿಜೆಪಿ ಬಿಟ್ಟರೆ ಎಲ್ಲಿಗೆ ಹೋಗೋಣ, ಆದರೆ ಸಧ್ಯಕ್ಕೆ ಬಿಜೆಪಿಯಲ್ಲಿ ಅಶುದ್ದೀಕರಣ ವಾಗುವವರೆಗೂ ನಾನು ಹೋಗಲ್ಲ. ಅಧಿಕಾರದ ಲಲಾಸೆಗೆ ಬಿಜೆಪಿಗೆ ಹೋಗಲ್ಲ. ಬಿಜೆಪಿ ಬಿಟ್ಟರೆ ಬೇರೆ ಪಕ್ಷಕೆ ಹೋಗಲ್ಲ. ಸ್ವಾಮೀಜಿಗಳು ಹಿಂದುತ್ವದ ಬಗ್ಗೆ ಆಶೀರ್ವದಿಸಿದ್ದಾರೆ. ಅವರು ಹೇಳಿದ ದಾರಿಯಲ್ಲಿ ಸಾಗುವೆ ಎಂದರು.
ಶುದ್ಧೀಕರಣ ಯಾವಾಗ ಎಂದಾಗ ತಪಸ್ಸಿಗೆ ಕೂರಲಾಗಿದೆ. ತಪಸ್ಸು ನಾಳೆನೇ ಫಲಿಸಲಿದೆ ಎಂದು ಆಗಿದ್ದರೆ ಎಲ್ಲರೂ ತಪಸ್ಸಿಗೆ ಕೂರುತ್ತಿದ್ದರು. ಅಯೋಧ್ಯ ಮತ್ತು ಕಾಶಿಯಲ್ಲಿನ ಮಂದಿರ ಹಿಂದುಗಳ ಕೈಗೆ ಸೇರಿತು. ಅದು ಸಹ ತಪಸ್ಸಿನಫಲವಾಗಿದೆ. ಇದು ಅನೇಕ ವರ್ಷದ ತಪಸ್ಸಾಗಿದೆ. ಹಿಂದೂಗಳ ಕಾರ್ಯಕರ್ತರ ಜೊತೆ ಚರ್ಚಿಸಿ ನಂತರ ಬಿಜೆಪಿಗೆ ಹೋಗುವೆ ಎಂದರು.
ಒಂದು ಸಮಾಜ ಈಶ್ವರಪ್ಪ ಕೆಲಸ ಮಾಡಿಕೊಡಲಿಲ್ಲ ಎಂದು ಹೇಳಿದರೆ ನಾಳೆನೇ ರಾಜಕೀಯ ನಿವೃತ್ತಿ ಘೋಷಿಸುವೆ ಎಂದರು.
Eshwarappa's open letter to CM