SUDDILIVE || SHIVAMOGGA
ಇದು ಟ್ರೈಲರ್ ಅಷ್ಟೆ ಪಿಚ್ಚರ್ ಅಭಿ ಬಾಕಿ ಹೈ-ಈಶ್ವರಪ್ಪ-If you say you will join BJP as soon as you go to Health and Safety, you are a fool - Eshwarappa
ಶಿವಮೊಗ್ಗದಲ್ಲಿ ಪಕ್ಷ ಸೇರ್ಪಡೆಯ ಪರ್ವ ಮುಂದುವರೆದಿದೆ. ಮೊನ್ನೆ ರಾಷ್ಟ್ರಭಕ್ತರ ಬಳಗದ ಶಂಕರ್ ಗನ್ನಿ ಸೇರಿ ಸುಮಾರು 40 ಜನರು ಬಿಜೆಪಿಗೆ ಸೇರ್ಪಡೆಯಾದರೆ, ಇಂದು ಬಿಜೆಪಿಯಿಂದ ಸುಮಾರು 60 ಜನರು ರಾಷ್ಟ್ರಭಕ್ತರ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪನವರ ಮನೆಯಲ್ಲಿ ಇಂದು ರಾಷ್ಟ್ರಭಕ್ತರ ಬಳಕ್ಕೆ ಸಂಗೀತಾ ನಾಗರಾಜ್ ವಾರ್ಡ್ ನಂಬರ್ 35, ಸಂಧ್ಯ, ಹರ್ಷ ಮಂಡ್ಲಿ, 17 ವಾರ್ಡಿನ ವಾರ್ಡ್ 19 ರಮೇಶ್ ಪ್ರಕಾಶ್ ಶೇಖರ್ , ಗಾಡಿಕೊಪ್ಪದ ಮೂರ್ತಿ, ಗುಲಾಬಿ ಮೂರ್ತಿ, ತಿರುಮಲ ಟ್ಯಾಕ್ಸಿ ಸಂಸ್ಥೆಯ ಶೇಖರ್, ಜಯಮ್ಮ, ಗೀತಮ್ಮ, ಮಾಲಾ ಶೆಟ್ಟಿ, ಪುರಲೆ ಗೋಪಿ, ಬಾಬು ಪ್ರಸಾದ್, ಕರಿಬಸಪ್ಪ, ರೇಣುಕಮ್ಮ, ಭಾರತೀ ಕಾಲೋನಿ, ಅರುಣ್ ಮುರುಗೇಶ್ ಜೆಡಿಎಸ್ ನ ಮೂರನೇ ವಾರ್ಡ್ ಅಧ್ಯಕ್ಷರು, ಕೇಬಲ್ ಮಧು ಸೇರಿದಂತೆ 60 ಕ್ಕೂ ಹೆಚ್ಚು ಜನ ಸೇರ್ಪಡೆಯಾದರು.
ನಂತರ ಮಾತನಾಡಿದ ಮಾಜಿ ಡಿಸಿಎಂ, ಮೂರು ಪಕ್ಷದ ಕಾರ್ಯಕರ್ತರು ಹೊರತು ಪಡಿಸಿ ಸಾಮಾಜಿಕ ಹೋರಾಟಗಾರರು ಪಕ್ಷ ಸೇರ್ಪಡೆಯಾಗಿದ್ದಾರೆ. ರಾಷ್ಟ್ರಭಕ್ತರ ಬಳಗದ ಮೂರು ಸದಸ್ಯರನ್ನ ಕರೆದುಕೊಂಡು ಹೋಗಿ ಪಕ್ಷವನ್ನೇ ಮುಳುಗಿಸಿ ಬಿಡುವ ಹುನ್ನಾರ ನಡೆದಿದೆ. ಇದು ಟ್ರೈಲರ್ ಪಿಚರ್ ಅಬಿ ಬಾಕಿ ಹೈ ಎಂದು ಗುಡುಗಿದರು.
ಮುಂದಿನ ತಿಂಗಳು ಪ್ರಮುಖರು ಬಳಗಕ್ಕೆ ಬರಲಿದ್ದಾರೆ. ಯಾವುತ್ತೇ ಚುನಾವಣೆ ನಡೆದರೂ 35 ಸ್ಥಾನಕ್ಕೆ ಸ್ಪರ್ಧಿಸಿ ಅಷ್ಟು ಸೀಟ್ ಗೆಲ್ತೇವೆ ಎಂದೀ ಈಶ್ವರಪ್ಪ ಮೊನ್ನ ಸಂಸದರ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹೋದಾಗ ಮಾಧ್ಯಮಗಳು ಬಿಎಸ್ವೈ ಮತ್ತು ನನ್ನ ಬಗ್ಗೆ ಹೊಂದಾಣಿಕೆ ಆಗಿದೆ. ಈಶ್ವರಪ್ಪ ಬಿಜೆಪಿಗೆ ಹೋದ್ರು ಎಂದು ಬಿಂಬಿಸಿದರು.
ಸ್ನೇಹ ಬೇರೆ ವಿಶ್ವಾಸ ಬೇರೆ ರಾಜಕಾರಣ ಬೇರೆ, ಬಿಎಸ್ ವೈ ನನ್ನ ಅಣ್ಣ ಇದ್ದ ಹಾಗೆ. ಹುಟ್ಟುಹಬ್ಬ ಮತ್ತು ನನ್ನ ಆರೋಗ್ಯ ವಿಚಾರಿಸಿದ ಸಂಸದರು, ಬಿಎಸ್ ವೈ ಅವರು ಕರೆ ಮಾಡಿದ್ದರು. ಆದರೆ ಇದನ್ನ ರಾಜಕೀಯವಾಗಿ ತಳಕು ಹಾಕಿದರೆ ಮೂರ್ಖತನವಾಗುತ್ತದೆ ಎಂದರು.
ನಾನು ಹಿಂದುತ್ವ, ಕುಟುಂಬದ ರಾಜಕಾರಣದ ಬಗ್ಗೆ ಚರ್ಚೆ ಆದ ನಂತರ ಬಿಜೆಪಿಗೆ ಹೋಗುವೆ. ನಮ್ಮ ಹಳೆ ಕಾರ್ಯಕರ್ತರು ಗೊಳೋ ಎನ್ನುತ್ತಿದ್ದಾರೆ. ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಯಾವಾಗ ಬರ್ತೀರಿ ಎಂದು ಕೇಳುತ್ತಿದ್ದಾರೆ. ಯಡಿಯೂರಪ್ಪ ಈಶ್ವರಪ್ಪ ಅನಂತ ಕುಮಾರ್ ಮೂವರೇ ಕಟ್ಟಿಲ್ಲ. ಈ ಬಿಜೆಪಿಯನ್ನ ಅನೇಕ ನಾಯಕರು ಕಟ್ಟಿದ್ದಾರೆ. ಶುದ್ಧೀಕರಣ ಆಗೇ ಆಗುತ್ತೆ ಎಂದು ಮತ್ತೊಮ್ಮೆ ಈಶ್ವರಪ್ಪ ಗುಡುಗಿದರು.
ಬಿಜೆಪಿಯ ಶುದ್ದೀಕರಣ ಆಗುವ ವರೆಗೆ ಬಿಡಲ್ಲ. ರಾಷ್ಟ್ರಭಕ್ತರ ಬಳಗಕ್ಕೆ ಸೇರಿದ ಬಿಜೆಪಿ ಕಾರ್ಯಕರ್ತರು ಬಂದಿದ್ದೇಕೆ? ಕೆಲವರು ಸ್ಥಳೀಯ ಸಂಸ್ಥೆಯ ಚುನಾವಣೆಗೆ ಬಿಜೆಪಿಯಲ್ಲಿ ಟಿಕೇಟ್ ಸಿಗದಿದ್ದರೆ ರಾಷ್ಟ್ರಭಕ್ತ ಬಳಗಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಎರಡನೇ ಹಂತದಲ್ಲಿ ಬರುವವರಿ್ಎ ನೆಕ್ಸ್ಟ್ ವಿಚಾರ ಮಾಡೋಣ ಎಂದರು.
ಶಿವಮೊಗ್ಗದ ನಗರದ ಕಥೆ ಏನಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ಬಾಣ ನಡೆಸಿದ ಈಶ್ವರಪ್ಪ, ಬಿಜೆಪಿಯಲ್ಲಿ ಮಂತ್ರಿಯಾಗಿದ್ದಾಗ ಎಲ್ಲಾ ಸಮುದಾಯಕ್ಕೆ ಹಣ ನೀಡಿದ್ವಿ ಆದರೆ ಕಾಂಗ್ರೆಸ್ ಒಂದು ರೂ.ಗಳನ್ನಎರಡು ವರ್ಷ ಆದರೂ ಅಭಿವೃದ್ಧಿ ಮಾಡಿಲ್ಲ ಎಂದರು.
600 ಜನರಿಗೆ ನಮ್ಮ ಹೋರಾಟದಿಂದ ಕೊಡಿಸಲಾಗಿದೆ. ಯಾವ ವಾರ್ಡ್ ನಲ್ಲಿ ಕೆಲಸ ವಾಗುತ್ತಿಲ್ಲ. ಪ್ರತಿವಾರ್ಡ್ ನಲ್ಲಿ ರಾಷ್ಡ್ರಭಕ್ತರಬಳಗ ಹೋರಾಟದ ಮೂಲಕ ಬಿಸಿಮುಟ್ಟಿಸಿ ಕೆಲಸ ಮಾಡುತ್ತೇವೆ ಎಂದ ಈಶ್ವರಪ್ಪ 600 ಮನೆಗೆ 12 ಕೋಟಿ ಕೊಡುವುದಾಗಿ ಹೇಳಿದ ಜಿಲ್ಲಾ ಉಸ್ತುಚಾರಿ ಸಚಿವರು ಒಂದು ರೂ ಬಿಡುಗಡೆ ಆಗಲಿಲ್ಲ. ಸಚಿವ ಜಮೀರ್ ಅಹ್ಮದ್ ಸಹ ವೇದಿಕೆ ಮೇಲೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಇದುರೆಗೂ ಬರಲಿಲ್ಲ ಎಂದು ಆರೋಪಿಸಿದರು.
ಹಿಂದುತ್ವದ ಕಾರಗಯ್ರಮಗಳಿಗೆ ರಾಜ್ಯಾದ್ಯಂತ ಬುಲಾವ್ ಬರ್ತಾಯಿದೆ. ಸ್ವಾಮೀಜಿಗಳು ಹಿಂದುತ್ವದ ಬಗ್ಗೆ ನನ್ನ ಬೆನ್ನುತಟ್ಟುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಬರಲಿದ್ದು ನನಗೆ ಮುಂಚೂಣಿ ವಹಿಸಲು ಹೇಳುತ್ತಿದ್ದಾರೆ. ಮುಸ್ಲೀಂ ಪರದ ಸರ್ಕಾರ ಬರ್ತಿದೆ ವಿನಃ ಹಿಂದುತ್ವದ ಸರ್ಕಾರ ಬರ್ತಿಲ್ಲ. ಕೋಮು ಸೌಹಾರ್ಧದ ಸ್ಥಾಪನೆ ಬಗ್ಗೆ ಸಭಾಧ್ಯಕ್ಷ ಯುಟಿ ಖಾದರ್ ಮಾತನಾಡುತ್ತಾರೆ. ಒಬ್ಬ ಮುಸ್ಲೀಂ ಸತ್ತಾಗ ಇವರಿಗೆ ಸೌಹಾರ್ಧದ ಬಗ್ಗೆ ಮಾತನಾಡುವ ಸಭಾಧ್ಯಕ್ಷರಿಗೆ ಹಿಂದು ಸತ್ತು ಹೋದಾಗ ಸೌಹಾರ್ಧದ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ಪುತ್ರ ಕಾಂತೇಶ್ ಮತ್ತು ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು.
you are a fool - Eshwarappa