SUDDILIVE || MANGLORE|| BASAVAKALYANA
ಶಾಸಕ ಶರಣ ಸಲಗರ ಹಾಗೂ ಸರ್ಕಾರದ ವಿರುದ್ಧ ವಿಡಿಯೋ ಹಾಗೂ ಬರಹ ಹಂಚಿಕೊಂಡವನ ವಿರುದ್ಧ ಎಫ್ಐಆರ್-FIR against MLA Sharanu Salagar and the person who shared the video and writing against the government
ಬಸವಕಲ್ಯಾಣದಲ್ಲಿ ಗೋಹತ್ಯೆ ವಿರೋಧದ ವಿಷಯದಲ್ಲಿ ಶಾಸಕ ಶರಣು ಸಲಗರರ ವಿರುದ್ಧ ದೂರು ದಾಖಲಾದರೆ, ಮಂಗಳೂರಿನಲ್ಲಿ ಸರ್ಕಾರದ ವಿರುದ್ದ ವಿಡಿಯೋ ಮತ್ತು ಬರಹ ಹಂಚಿಕೊಂಡವನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ವಾಟ್ಸ್ ಆ್ಯಪ್ನ 'ಪಿರ್ಸ ಎಪ್ಪೋಲುಂ ಇಕ್ಕಟ್ಸ್' ಎಂಬ ಗೂಪ್ನಲ್ಲಿ ವಿಡಿಯೊ ಹಾಗೂ ಬರಹ ಹಂಚಿಕೊಂಡ ಆರೋಪದ ಮೇಲೆ ಅಶ್ರಪ್ ಕಿನಾರ ಕುದ್ರೋಳಿ ಅವರ ವಿರುದ್ಧ ಮಂಗಳೂರಿನ ಉತ್ತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
'ಮಾಹಿತಿದಾರರು ಅದರ ಜೊತೆ 57 ಸೆಕೆಂಡ್ ವಿಡಿಯೊವನ್ನು ಕಳಿಸಿದ್ದಾರೆ. ಅದರಲ್ಲಿ 'ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್. ಅಲಕ್ಕ ಪೋಯಿತಲ್ಲೇ...' ಎಂಬುವುದಾಗಿ ಬರೆಯಲಾಗಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗಳನ್ನು ಎಡಿಟ್ ಮಾಡಿ ಬಳಸಲಾಗಿದೆ. ಕೆಳಗಡೆ ಹಾಡುಗಾರ: ದಸ್ತಕೀರ್, ಸಂಗೀತ: ಸರಾಫ್ ವಿಟ್ಲ ಬರೆಯಲಾಗಿದೆ. ಒಬ್ಬಾತ ವ್ಯಕ್ತಿಯು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಚಿತ್ರವಿದೆ. 'ಬಿಜೆಪಿ ಬರುತ್ತದೆ ಎಂದು ಹೆದರಿಸಿದರು. ಕೇಳಿದರೆ, ಕೈ ತೋರಿಸಿ, ಕಾಂಗ್ರೆಸ್ ಕಾಂಗ್ರೆಸ್ ಎಂದು ಹೇಳುತ್ತೀರಲ್ಲ, ಎಲ್ಲಿ ಉಂಟು ಕಾಂಗ್ರೆಸ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು, ಬ್ಯಾರಿಗಳಿಗೆ ಆದ ಅನ್ಯಾಯವನ್ನು, ಕೇಳಲು ಕಾಂಗ್ರೆಸ್ ಪಕ್ಷ ಇಲ್ಲ. ಅಧಿಕಾರದಲ್ಲಿ ಇದ್ದು ಕೂಡ, ಸಂಘಿಯ ಬಂಧನ ಆಗಿಲ್ಲ. ಬಂಧನ ಮಾಡಲು ಧಮ್ ಇಲ್ಲ. ಏಕೆ ಬೇಕು ಅಧಿಕಾರ ನಿಮಗೆ, ನಾಚಿಕೆ ಆಗಲ್ವಾ, ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ. ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ. ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ. ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ' ಎಂದು ಬ್ಯಾರಿ ಭಾಷೆಯಲ್ಲಿ ಹಾಡಿರುವ ಹಾಡಿನ ಜೊತೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತಿದೆ' ಎಂದು ಪೊಲೀಸರು ತಿಳಿಸಿದಾರೆ.
“ಪಿರ್ಸ ಎಷ್ಟೊಲುಂ ಇಕ್ಕಟ್ಸ್' ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಅಶ್ರಫ್ ಕಿನಾರ ಅವರು 'ಬ್ರೇಕಿಂಗ್..., ಇದೀಗ ಸಜಿಪ ಪಾವೂರ್ ನಲ್ಲಿ ಮತ್ತೆ ಪೊಲೀಸ್ ರೈಡ್..., ಅಲ್ಲಾಹನ ಸಮರ್ಪಣೆಗೆ ತಂದಿಟ್ಟ ಉಲ್ಲಿಯಾ ಕೊಡುವ ಹಸುಗಳನ್ನು ವಶಪಡಿಸುತ್ತಿರುವ ಪೊಲೀಸರು. ಕೇಳಿದರೆ ಸರ್ಕಾರದ ಆದೇಶವಂತೆ. ಮುಸ್ಲಿಮರ ಮತಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರು ಒಟ್ಟಾಗಿ ಬಿಸಿ ಮುಟ್ಟಿಸಬೇಕು' ಎಂದು ಬರೆದುಕೊಂಡಿದ್ದರು. ಅದನ್ನು ಮಾಹಿತಿದಾರರೊಬ್ಬರು ತಮ್ಮ ವಾಟ್ಸ್ಆ್ಯಪ್ಗೆ ಕಳುಹಿಸಿದ್ದರು ಎಂದು ಠಾಣೆಯ ಕಾನ್ಸ್ಟೆಬಲ್ ಸುನಿಲ್ ಕುಮಾರ್ ಎನ್.ಪಿ ದೂರಿನಲ್ಲಿ ತಿಳಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಮಾಹಿತಿದಾರರು ಅದರ ಜೊತೆ 57 ಸೆಕೆಂಡ್ ವಿಡಿಯೊವನ್ನು ಕಳಿಸಿದ್ದಾರೆ. ಅದರಲ್ಲಿ 'ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್. ಅಲಕ್ಕ ಪೋಯಿತಲ್ಲೇ...' ಎಂಬುವುದಾಗಿ ಬರೆಯಲಾಗಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗಳನ್ನು ಎಡಿಟ್ ಮಾಡಿ ಬಳಸಲಾಗಿದೆ. ಕೆಳಗಡೆ ಹಾಡುಗಾರ: ದಸ್ತಕೀರ್, ಸಂಗೀತ: ಸರಾಫ್ ವಿಟ್ಲ ಬರೆಯಲಾಗಿದೆ.
ಶಾಸಕ ಶರಣು ಸಲಗರ ವಿರುದ್ಧ ಎಫ್ ಐಆರ್
ಗೋಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಮುಸ್ಲಿಮರಿಗೆ ಬೆದರಿಕೆ ಹಾಕಿದ ಆರೋಪದಡಿ ಶಾಸಕ ಶರಣು ಸಲಗರ, ಅವರ ವಾಹನ ಚಾಲಕ ಮಂಜು, ಬೆಂಬಲಿಗರಾದ ಕೃಷ್ಣಾ ಗೋಣೆ ಹಾಗೂ ಸಾಗರ್ ಲಾಡೆ ಸೇರಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ಶಾಸಕ ಶರಣು ಸಲಗರ ಅವರು ನಗರದ ಮೆಹಬೂಬ್ನಗರ ಬಡಾವಣೆಯಲ್ಲಿ 25ಕ್ಕೂ ಹೆಚ್ಚು ದನ ಕರುಗಳನ್ನು ಅಕ್ರಮವಾಗಿ ಕಟ್ಟಿ ಹಾಕಿರುವುದನ್ನು ಪತ್ತೆ ಹಚ್ಚಿದ್ದವು. ಅಲ್ಲದೆ ಅವುಗಳನ್ನು ಗೋಶಾಲೆಗೆ ರವಾನಿಸುವಂತೆ ಒತ್ತಾಯಿಸಿ ಯಶಸ್ವಿಯಾಗಿದ್ದರು.
ಈ ವೇಳೆ ಅವರು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಮತ್ತು ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಅವರ ಮನೆಯಂಗಳಕ್ಕೆ ತೆರಳಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರ ಬೆಂಬಲಿಗರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಶರಣು ಸಲಗರ ವಿರುದ್ಧ ದೂರು ದಾಖಲಾದ ಬಗ್ಗೆ ಸರ್ಕಾರದ ಕ್ರಮವನ್ನ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
FIR against MLA Sharanu Salagar