ಕೂಡ್ಲಿಯಿಂದ ಹೊಳೆಹೊನ್ನೂರಿಗೆ ಹೋಗುವಾಗ ಪೊಲೀಸ್ ದಾಳಿ-37 ಕೆಜಿ ಗೋಮಾಂಸ ಪತ್ತೆ-37 kg of beef found

 SUDDILIVE || BHADRAVATHI

ಕೂಡ್ಲಿಯಿಂದ ಹೊಳೆಹೊನ್ನೂರಿಗೆ ಹೋಗುವಾಗ ಪೊಲೀಸ್ ದಾಳಿ-37 ಕೆಜಿ ಗೋಮಾಂಸ ಪತ್ತೆ-Police raid on way from Kudli to Holehonnuru - 37 kg of beef found

Beef, raid

ಭದ್ರಾವತಿ ತಾಲೂಕಿನ ಕೂಡ್ಲಿ ಗ್ರಾಮದಿಂದ ಹೊಳೆ ಹೊನ್ನೂರು ಹೋಬಳಿಗೆ ಬೈಕ್ ನಲ್ಲಿ ಹೋಗುವಾಗ ಹೊಳೆ ಹೊನ್ನೂರು ಪೊಲೀಸ್ ಠಾಣೆ ಪಿ ಐ ಲಕ್ಷ್ಮಿಪತಿ ಅವರ ಖಡಕ್ ದಾಳಿಯಲ್ಲಿ ಗೋಮಾಂಸ ಪತ್ತೆಯಾಗಿದೆ

ಸೋಹೆಬ್ ಹಾಗೂ ಕಸಬ್ ಎಂಬುವರು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂದೂ ಸಂಘಟನೆಯವರು ಅನುಮಾನ ಬಂದು ಹೊಳೆವನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿಯ ಆಧಾರದ ಮೇಲೆ ಕೆ ಲಕ್ಷ್ಮೀಪತಿ ಹಾಗೂ ಪಿಎಸ್ಐ ರಮೇಶ ಅವರ ತಂಡ ದ್ವಿಚಕ್ರ ವಾಹನ ಸವಾರರನ್ನು ತಪಾಸಣೆ ಗೊಳಪಡಿಸಿದೆ.

ತಪಾಸಣೆಯ ವೇಳೆ 7 ಕೆಜಿ ಗೋಮಾಂಸ ಪತ್ತೆಯಾಗಿದೆ ಎಲ್ಲಿಂದ ತಂದಿರೋದು ಎಂದು ಪರಿಶೀಲಿಸಿದ ಪಿ ಐ ಲಕ್ಷ್ಮಿಪತಿ ಗಳ ತಂಡಕ್ಕೆ ಮತ್ತೊಂದು ಮಾಹಿತಿ ದೊರೆತಿದೆ. ಮಾಂಸವನ್ನು ಸಯಫ್ ಅಲಿ ಖಾನ್ ಮನೆಯಿಂದ ಮಾಂಸ ಖರೀದಿಸಲಾಗಿದೆ ಎಂದು ಶೋಯೆಬ್ ತಪಾಸಣೆ ವೇಳೆ ಪೊಲೀಸರಿಗೆ ಬಾಯಿಬಿಟ್ಟಿದ್ದಾನೆ. 

ಸಯಫ್ ಅಲಿ ಖಾನ್ ಅವರ ಮನೆ ಮೇಲೋ ಪಿಎಸ್ಐ ರಮೇಶ ಅವರ ನೇತೃತ್ವದ ತಂಡ ದಾಳಿ ನಡೆಸಿದೆ ದಾಳಿಯಲ್ಲಿ 30ಕ್ಕೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ ಶೋಯೆಬ್ ಕಸಬ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.

37 kg of beef found

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close