SUDDILIVE || SHIRALKOPPA
ಮನೆ ನಿರ್ಮಾಣದ ವಿಚಾರದಲ್ಪಿ ಮಾರಾಣಾಂತಿಕ ಹಲ್ಲೆ-Fatal attack over house construction
ಶಿರಾಳಕೊಪ್ಪದ ಮಳವಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣದ ವಿಚಾರದಲ್ಲಿ ಪಕ್ಕದ ಮನೆಯವರೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ವ್ಯಕ್ತಿಯನ್ನ ಶಿವಮೊಗ್ಗಕ್ಕೆ ತಂದು ದಾಖಲಿಸಲಾಗಿದೆ ನೆತ್ತಿಯ ಮೇಲೆ ಮಚ್ಚು ಬಿಸಿ ಇರುವ ಶಂಕೆ ವ್ಯಕ್ತವಾಗಿದೆ
ಈ ಪ್ರಕರಣದಲ್ಲಿ ದೂರು ಪ್ರತಿ ದೂರು ದಾಖಲಾಗುವ ಸಾಧ್ಯತೆ ಇದೆ ಎದುರಾಳಿಯು ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಶಿರಾಳಕೊಪ್ಪದ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿವಕುಮಾರ ಹಿರೇಮಠ ಎಂಬುವರ ಮೇಲೆ ಪಕ್ಕದ ಮನೆಯವರಾದ ವಿಜಯ ಸ್ವಾಮಿ, ಷಡಾಕ್ಷರಿ ಸ್ವಾಮಿ, ವಿರೇಶ್ ಮತ್ತು ನಾಗರಾಜ್ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಎದುರಾಳಿಗಳು ಸಹ ಶಿವಕುಮಾರ್ ಹಿರೇಮಠ ಎಂಬುವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಶಿರಾಳಕೊಪ್ಪದ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. ಶಿರಾಳಕೊಪ್ಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕಿದೆ.
Fatal attack