SUDDILIVE || SHIVAMOGGA
ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಖಂಡಿಸಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ-Hindu organization protests against filing of case against Hindu activists
ಗೋ ರಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡು ಅಕ್ರಮವಾಗಿ ಗೋಸಾಗಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ಜಪ್ತಿ ಮಾಡದೆ ಹಿಂದುಗಳ ಭಾವನೆಗೆ ಧಕ್ಕೆ ತಂದು ಕಾನೂನನ್ನು ಉಲ್ಲಂಘಿಸಿರುವ ಪೊಲೀಸರ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇಂದು ಜಯನಗರ ಪೊಲೀಸ್ ಠಾಣೆಯಿಂದ ಡಿಸಿ ಕಚೇರಿಯ ವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿತು
ಜೂನ್ 6 ರಂದು ಬೆಳಗಿನ ಜಾವ ಶಿವಮೊಗ್ಗ ನಗರದ ಮುಖ್ಯ ರಸ್ತೆಯಲ್ಲಿ ಅಕ್ರಮ ವಾಗಿ ಗೋ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ವಿಶ್ವಹಿಂದು ಪರಿಷತ್ ನ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು ಸಹ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ಮೂರು ಗೋವುಗಳನ್ನು ಕೆ ಎ 48 75 97 ಕ್ರಮ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ವಾಹನ ದಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದ ದಿವಸ ಜಪ್ತಿ ಮಾಡದೆ ಹಿಂದೂ ಕಾರ್ಯಕರ್ತರ ವಿರುದ್ಧವೇ ದೂರು ದಾಖಲಾಗಿದೆ ಆರೋಪಿಗಳನ್ನು ರಾಜಕೀಯ ಒತ್ತಡಕ್ಕೆ ಬಿಟ್ಟು ಕಳಿಸಲಾಗಿದೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಿಂದುಗಳ ಭಾವನೆಗಳಿಗೆ ನಿರಂತರ ಧಕ್ಕೆಯಾದರೂ ದಬ್ಬಾಳಿಕೆಯಾದರೂ ಇಲ್ಲಿನ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಸಂಘಟನೆ ಮನವಿಯಲ್ಲಿ ದೂರಿದೆ ರಾಜ್ಯದ ಮೇಲೆ ನಿಗಾ ವಹಿಸಿ ಕಾನೂನು ಸುವ್ಯವಸ್ಥೆಯನ್ನು ಹತೋಟಿ ಗೆ ತರಲು ಶ್ರಮವಹಿಸಿ ನ್ಯಾಯ ಕೊಡಿಸಬೇಕೆಂದು ಭಾರತ ಸರ್ಕಾರದ ಗೃಹ ಸಚಿವ ಹಾಗೂ ರಾಜ್ಯಪಾಲರಿಗೆ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.
ಪ್ರದಿಭಟ್ಟನೆಯಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗಳದ ಪ್ರಾಂತಸಾಮರಸ್ಯ ಪ್ರಮುಖ ರಮೇಶ್ ಬಾಬು ಜಿಲ್ಲಾಧ್ಯಕ್ಷ ವಾಸುದೇವ್, ಜಿಲ್ಲಾ ಕಾರ್ಯದರ್ಶಿ ಆನಂದ್ ರಾವ್ ಭಜರಂಗದಳದ ಸಂಯೋಜಕ ವಡಿವೇಲು ಬಜರಂಗದಳದ ಸಹ ಸಂಯೋಜಕರಾದ ಅಂಕುಶ್ ಸುರೇಶ್ ಬಾಬು ಹಾಗೂ ಮೊದಲಾದವರು ಭಾಗಿಯಾಗಿದ್ದರು
Hindu organization protests