SUDDILIVE || SHIVAMOGGA
ಕಾಲ್ತುಳಿತದ ಸಾವಿಗೆ ಸರ್ಕಾರ ನೇರ ಕಾರಣ-ಆರಗ ಆರೋಪ-Government directly responsible for stampede deaths - Araga alleges
ಆರ್ ಸಿ ಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತಕ್ಕೆ 11 ಜನ ಬಲಿಯಾಗಿದ್ದು ಸರ್ಕಾರದ ಭದ್ರತಾ ವೈಫಲ್ಯದಿಂದ ಸಾವಾಗಿದ್ದಾರೆ ಎಂದು ಶಾಸಕಆರಗ ಜ್ಞಾನೇಂದ್ರ ಆರೋಪಿಸಿದರು.
ಗೆದ್ದಾಗಲೇ ಜನ ಉನ್ಮಾದಕ್ಕೆ ತಲುಪಿದ್ದರು. ಸಿಎಂ ಡಿಸಿಎಂ ಗೃಹ ಸಚಿವರು ನಮಗೆ ಗೊತ್ತೇ ಆಗಲಿಲ್ಲ ಎಂದು ನುಣಚಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳನ್ನ ಕರೆಯಿಸಿ ಮಾತನಾಡುವ ಸೌಜನ್ಯತೆಯನ್ನ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಪುನಿತ್ ರಾಜ್ ಕುಮಾರ್ ಸಾವಿನ ಸಮಯದಲ್ಲಿ ಮಾಹಿತಿ ತಲುಪಿದ ಕೂಡಲೇ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಹೋಗಿ ಕೇವಲ ಎರಡು ಗಂಟೆಗಳಲ್ಲಿ ಡಾ.ರಾಜ್ ಸಾವಿನ ಸಮಯದಲ್ಲಿ ಗಲಾಟೆಯಾದ ಜಾಗವನ್ನ ಗುರಿತಿಸಿ ಬಿಗಿಭದ್ರತೆ ಮಾಡಿದ್ದೆ. ಅಧಿಕಾರಿ ಜೊತೆ ಮಾತನಾಡಿ ಎಚ್ಚರಿಕೆ ಕೊಟ್ಟರೆ ಈ ಘಟನೆ ನಡೆಯುತ್ತಿರಲಿಲ್ಲ. ಹರಿಬರಿಯಲ್ಲಿ ಆರ್ ಸಿ ಬಿ ಆಟಗಾರರಿಗೆ ಸನ್ಮಾನ ನಡೆದಿತ್ತು.
ಕ್ಯಾಬಿನೆಟ್ ಸಚಿವರು ಎಚ್ಚೆತ್ತುಕೊಳ್ಳದ ಕಾರಣ ವೇದಿಕೆ ಮೇಲೆ ಸಾವಿರ ಜನ ಸೇರಿದ್ದರು. ಅದು ಆಟಗಾರರಿಗೆ ಸನ್ಮಾನವೋ ಅವಮಾನವೋ ಗೊತ್ತಿಲ್ಲ. ಸಚಿವರ ಕುಟುಂಬಸ್ಥರನ್ನ ಕರೆದುಕೊಂಡು ಬಂದು ವೇದಿಕೆ ತುಂಬಿಸಲಾಗಿತ್ತು. ಮಂತ್ರಿಗಳ ಮನೆಯಲ್ಲಿ ಸಾವಾದರೆ ಗೊತ್ತಾಗುತ್ತದೆ. ಬೇರೆಯವರ ಮನೆ ಮಕ್ಕಳು ಸತ್ತಿದ್ದರಿಂದ ನೋವಾಗಿಲ್ಲ.
ಡಿಸಿ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಉಡಾಫೆಯಿಂದ ಸಿಎಂ ಹೇಳುತ್ತಾರೆ. ರಾಜ್ಯದ ಜನತೆಯ ಕ್ಷಮೆ ಕೇಳಬೇಕಿತ್ತು. ಭದ್ರತೆಯ ಲೋಪದಿಂದ ಸಾವಾಗಿದೆ ಎಂದು ಕ್ಷಮೆ ಕೇಳಬೇಕಿತ್ತು. ಪುನಿತ್ ರಾಜ್ ಸಾವನ್ನಪ್ಪಿದಾಗ ಆತನ ತಲೆಯ ಭಾಗದಲ್ಲಿ ನಾನು ಮತ್ತು ಸಿಎಂ ಬೊಮ್ನಾಯಿ ಕುಳಿತಿದ್ವಿ. ಹಾಗೆ ಮುಂಜಾಗ್ರತೆ ವಹಿಸಬೇಕಿತ್ತು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡದೆ ಸತ್ತು ಬಿದ್ದಿದೆ. ಯಾವುದೇ ಕಾನೂನು ಸುವ್ಯವಸ್ಥೆ ನಡೆದಿದೆ. ಪುನೀತ್ ಸಾವಾದಾಗ ಅದೇ ಪೊಲೀಸ್ ಇದ್ದರು. ಪುನೀತ್ ಸತ್ತಾಗ ಸೇರಿದ 20 ಲಕ್ಷವನ್ನ ನಿಭಾಯಿಸಲು ಸಾಧ್ಯವಾಗಿದ್ದರೆ. ನಿನ್ನೆ ಸೇರಿದ್ದ 2 ಲಕ್ಷ ಜನರನ್ನ ನಿಯಂತ್ರಿಸಲಾಗಿಲ್ಲ. ಐಪಿಎಲ್ ಪೂರ್ಲಿ ಕಮರ್ಷಿಯಲ್ ಆಟವಾಗಿದೆ. ಇಡೀ ಟೀಂನಲ್ಲಿ ಇಬ್ಬರು ಕರ್ನಾಟಕದವರು ಆಡಿದ್ದಾರೆ ಅಷ್ಟೆ ಆದರೆ ಭಾವನಾತ್ಮಕವಾಗಿ ಜನ ಯಾಕೆ ಬೀದಿಗಿಳಿದರು ಗೊತ್ತಿಲ್ಲ ಎಂದರು.
ಆಪರೇಷನ್ ಸಿಂಧೂರ ನಡೆದಾಗಲೂ ಈ ಭಾವನಾತ್ಮಕತೆಯನ್ನಜನ ತೋರಿಲ್ಲ ಎಂದ ಆರಗ ಬೆಳಿಗ್ಗೆಯಿಂದ ನಮ್ಮ ಹೋಮ್ ಮಿನಿಸ್ಟರ್ ನಾಪತ್ತೆಯಾಗಿದ್ದಾರೆ. ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಜನ ಸೇರುತ್ತಾರೆ ಎಂದು ಸರ್ಕಾರಕ್ಕೆ ಗೊತ್ತಿತ್ತು. ವ್ಯವಸ್ಥೆಯಾಕೆ ಮಾಡಲಿಲ್ಲ. ಪೆಹಲ್ಗಾಮ್ ಮತ್ತು ಕುಂಭಮೇಳದಲ್ಲಿ ಜನ ಸತ್ತಾಗ ಕಾಂಗ್ರೆಸ್ ಏನು ಅಂತು? ಎಚ್ಎತ್ತುಕೊಳ್ಳಲಿಲ್ಲ ಏಕೆ? ಇದು ರಾಜಕೀಯ ಭಾಗದ ತಂತ್ರವಷ್ಟೆ.
ವಿಶ್ವಕಪ್ ಗೆದ್ದಾಗ ತಂಡವನ್ನ ಕರೆದು ಟೀ ಕೊಟ್ಟರು ಹಾಗೆ ಯಾಕೆ ಮಾಡಲಿಲ್ಲ ಆರಗ ಪ್ರಶ್ನಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳಲಿಲ್ಲ. ಬಂದೋ ಬಸ್ತ್ ಮಾಡಲಿಲ್ಲ ಏಕೆ? ಪೊಲೀಸ್ ಅಧಿಕಾರಿಗಳು ಆಟಗಾರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಪೈಪೋಟಿ ನಡೆಸಿದ್ದಾರೆ. ಸಮೂಹ ಸನ್ನಿಗೆ ಸರ್ಕಾರ ಒಳಗಾಗಿದೆ. ತೀರ್ಥಹಳ್ಳಿಯ ಸಂಬಂಧಿಕರೂ ಆ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಸರ್ಕಾರದ ವೈಫಲ್ಯ ಕಂಡು ಬಂದಿದೆ ಎಂದು ದೂರಿದರು.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಗಾಯಾಳುಗಳನ್ನ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಡಿಸಿ ತನಿಖೆ ಕಣ್ಣು ವರೆಸುವ ತಂತ್ರ ಅಷ್ಟೆ, ಸಿಎಂ ಮತ್ತು ಡಿಸಿಎಂ ನಡುವಿನ ಪೈಪೋಟಿಯಿಂದ ಈ ಘಟನೆ ನಡೆದಿದೆ ಎಂದು ದೂರಿದರು.
ಎಂಎಲ್ ಸಿ ಡಿ.ಎಸ್ ಅರುಣ್ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟು ಜನ ಸೇರುತ್ತಾರೆ, ಯಾವ ಗೇಟ್ ನಲ್ಪಿ ಎಷ್ಟು ಜನ ಸೇರುತ್ತಾರೆ. ಕೆಎಸ್ ಸಿ ಎ ಮೇಲೂ ಎಫ್ಐಆರ್ ಆಗಿದೆ. ಆರ್ ಸಿಬಿ ಮತ್ತು ಕೆಎಸ್ ಸಿಎಯ್ಲೂ ಲೋಪಕಂಡು ಬರುತ್ತಿದೆ. ಗುಪ್ತಚರ ಇಲಾಖೆಯ ವೈಫಲ್ಯತೆಯೂ ಇದೆ. ಐಪಿಎಲ್ ಟ್ರೋಫಿ ಗೆದ್ದಿದ್ದನ್ನ ಸರ್ಕಾರ ಶೋ ಮಾಡಿದ್ದನ್ನ ನೋಡಿರಲಿಲ್ಲ. ಘಟನೆಯಲ್ಲಿ ಸಾವನ್ನಪ್ಪಿದ ನಂತರ ಸನ್ಮಾನ ನಡೆದಿದೆ. ಸಿಎಂ ಮತ್ತು ಡಿಸಿಎಂ ಗೆ ಹೇಳಿದರೆ ಬಿಜೆಪಿ ರಾಜಕಾರಣ ಮಾಡುತ್ತೆ ಎಂದು ದೂರುತ್ತಾರೆ. ಕ್ರಮ ಯಾಕೆ ಕೈಗೊಳ್ಳಲಿಲ್ಲ ಎಂದು ದೂರಿದರು.
ದೊಡ್ಡ ವೈಫಲ್ಯವಿದೆ. ಸಿಎಂ ರಾಜೀನಾಮೆ ನೀಡಿದರೆ ಮಾತ್ರ ಈ ಘಟನಾವಳಿಗೆ ನ್ಯಾಯದೊರುಕುತ್ತದೆ. ಅಲ್ಲು ಅರ್ಜುನ್ ಪ್ರಕರಣದಲ್ಲಿ ಅಲ್ಲಿ ಸರ್ಕಾರ ಅಲ್ಲು ಅರ್ಜುನ್ ಕಾರಣ ಎಂದು ಅರೆಸ್ಟ್ ಮಾಡಿತ್ತು. ಇಲ್ಲಿ ಯಾರ ಲೋಪವಿದೆ? ಎಂದು ಸರ್ಕಾರವನ್ನ ಪರೋಕ್ಷವಾಗಿ ಆರೋಪಿಸಿದರು.
ಕಾರ್ಯಕ್ರಮವನ್ನ ಆರ್ ಸಿಬಿ ನಡೆಸುತ್ತೆ. ಕೆಎಸ್ ಸಿಎ ಜಾಗ ಕೊಟ್ಟಿದೆ. ಸರ್ಕಾರ ಎರಡನ್ನೂ ಕೂರಿಸಿಕೊಂಡು ಭದ್ರತೆ ಬಗ್ಗೆ ಮಾತನಾಡಬೇಕು. ಆರ್ ಸಿಬಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲು ಸರ್ಕಾರವೇ ಕೊಡೋದು. ವಿಶ್ವಕಪ್ ಗೆದ್ದಾಗ ಮುಂಬೈ ನಲ್ಲಿ ಹೇಗೆ ಸಂಭ್ರಮಾಚರಣೆ ನಡೆಸಿದರು. ಆರ್ ಸಿಬಿ, ಕೆಎಸ್ ಸಿಎ ಮತ್ತು ಸರ್ಕಾರ ಮೂರು ಸಂಸ್ಥೆಗಳು 11 ಜನರ ಸಾವಿಗೆ ಕಾರಣ ಎಂದರು.
Government directly responsible for stampede deaths