SUDDILIVE || SHIVAMOGGA
ಜೂ.07 ರಂದು ಕಸಾಪ ಕುರಿತಂತೆ ಹಕ್ಕೋತ್ತಾಯ-Hakkottaya regarding kasapa on June 7th
ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಗುತ್ತಿರುವ ಗಂಭೀರ ಬೆಳವಣಿಗೆ ಮತ್ತು ವೈಫಲ್ಯತೆ ಕುರಿತು ಜೂ.7 ರಂದು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಪತ್ರಕರ್ತ ಹೊನ್ನಾಳಿ ಚಂದ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸಾಪದ ಅಧ್ಯಕ್ಷರಿಗೆ ನೀಡಿರುವ ಸಚಿವ ಸಂಪುಟದ ಸ್ಥಾನಮಾನವನ್ನ ಹಿಂಪಡೆಯಬೇಕೆಂದು ಈ ಹಿಂದೆ ಸಮಿತಿ ಆಗ್ರಹಿಸಿತ್ತು. ಈಗ ಅದು ಈಡೇರಿದೆ. ಇತರೆ ವಿಷಯಗಳ ಬಗ್ಗೆ ಜೂ.7 ರಂದು ಆಗ್ರಹಿಸಲಾಗುವುದು. ಸಾಹಿತ್ಯ ಪರಿಷತ್ ಮಾಡುವ ಕೆಲಸವನ್ನ ಬಿಟ್ಟು ಬೇರೆ ಎಲ್ಲಾ ಕೆಲಸವನ್ನ ಮಾಡುತ್ತಿದೆ. ಬೂಕರ್ ಪ್ರಶಸ್ತಿ ಪಡೆದ ಭಾನುಮಸ್ತಾಕ್ ಅವರಿಗೆ ಕರೆದು ಇದುವರೆಗೂ ಸನ್ಮಾನಿಸಿಲ್ಲ ಎಂದರು.
ಕಸಾಪದ ಮೂಲ ಆಶಯ ಮತ್ತು ತಾತ್ವಿಕತೆಗೆ ದಕ್ಕೆ ತರುವ ರೀತಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಯನ್ನ ರದ್ದುಗೊಳಿಸಬೇಕು. ಪ್ರಸ್ತಾವಿತ ಬೈಲಾ ತಿದ್ದುಪಡಿ ತಡೆಹಿಡಿಯಬೇಕು. 30 ದಿನಗಳ ಒಳಗೆ ಕರ್ಚುವೆಚ್ಚದ ಬಗ್ಗೆ ಕಸಾಪ ಅಧ್ಯಕ್ಷರು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಕರ್ಚುವೆಚ್ಚವನ್ನ ಅವರು ಮಂಡಿಸಿಲ್ಲ. ಆರ್ಥಿಕ ಅಶಿಸ್ತನ್ನ ವಿಚಾರಣೆಗೆ ಒಳಪಡಿಸಬೇಕು.
ಪರಿಷತ್ ಘನತೆ ಮತ್ತು ಪರಿಶುದ್ಧತೆಯೊಂದಿಗೆ ನಡೆಸಲು ಕಾಳಜಿ ವಹಿಸಬೇಕು. ಸ್ಮಾರ್ಟ್ ಕಾರ್ಡ್ ಹಂಚುವುದಾಗಿ ಹೇಳಿ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಕಾರ್ಡು ಹಂಚದೆ ಇರುವುದರ ಬಗ್ಗೆಯೂ ತನಿಖೆ ಮಾಡುವಂತೆ ಆಗ್ರಹಿಸಿ 12 ಅಂಶಗಳ ಬಗ್ಗೆ ನಾಡಿದ್ದು ನಡೆಯುವ ಜಾಗೃತಿ ಸಮಾವೇಶದಲ್ಲಿ ಹಕ್ಕೋತ್ತಾಯ ಮಾಡುವುದಾಗಿ ಹೇಳಿದರು.
Hakkottaya regarding kasapa on June 7th