ಹಿಂದುತ್ವ ಉಳಿದರೆ, ಕುರುಬ, ದಲಿತ, ಬ್ರಾಹ್ಮಣ ಮಠ ಮಂದಿರಗಳು ಉಳಿಯಲಿದೆ-ಸು.ರಾಮಣ್ಣ-If Hinduism remains, Kuruba, Dalit, Brahmin monasteries will remain

 SUDDILIVE || SHIVAMOGGA

ಹಿಂದುತ್ವ ಉಳಿದರೆ, ಕುರುಬ, ದಲಿತ, ಬ್ರಾಹ್ಮಣ ಮಠ ಮಂದಿರಗಳು ಉಳಿಯಲಿದೆ-ಸು.ರಾಮಣ್ಣ-If Hinduism remains, Kuruba, Dalit, Brahmin monasteries will remain - Su. Ramanna

Hindusim, kuruba


ಹಿಂದುತ್ವ ಉಳಿದರೆ ಕುರುಬ ದಲಿತ, ಬ್ರಾಹ್ಮಣ, ಮಠಗಳು, ಮಂದಿರಗಳು, ಕುಟುಂಬಗಳು ಉಳಿಯುತ್ತದೆ ಎಂದು ಆರ್ ಎಸ್ ಎಸ್ ನ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಹೇಳಿದರು. 

ವಿನೋಬ ನಗರದ ಶುಭ ಮಂಗಳದಲ್ಲಿ ಕೆ.ಎಸ್. ಈಶ್ವರಪ್ಪನವರ 77 ನೇ ಹುಟ್ಟುಹಬ್ಬ ನಡೆದಿದೆ. ಈ ವೇಳೆ ಹೋಮ ಹವನ ಕಾರ್ಯಕ್ರಮ ನಡೆದಿದೆ.  ಪೂರ್ಣಾಹುತಿ ನಂತರ ಧಾರ್ಮಿಕ ಸಭೆ ನಡೆದಿದೆ. ಈ ವೇಳೆ ಮಾತನಾಡಿದ ಅವರು, ನಮ್ಮ ರಾಜಕೀಯ ಯಾತ್ರೆಯಲ್ಲಿ ನಯಾಪೈಸೆ ಹೊಂದಾಣಿಕೆಯಾಗದೆ. ಮುಂದೆ ಸಾಗಿ ಬಂದವರು ಈಶ್ವರಪ್ಪನವರು. ನಮ್ಮ ಮನೆ ಭಾರತೀಯ ಭಕ್ತಿಯ ಕೇಂದ್ರ ಮತ್ತು ಪಾರ್ವತಿ ಪರಮೇಶ್ವರರಂತೆ ಇರಬೇಕು. ಪಾರ್ವತಿ ಮರ್ತು ಪರಮೇಶ್ವರರಲ್ಲಿ ಸಮಯನ್ವಯವಾಗಲಿದೆ. ಶಿವ ತ್ರಯಾಂಭರ ಪಾರ್ವತಿ ಪೀತಾಂಬರರಾಗಿದ್ದಾರೆ ಎಂದರು.


ಧಾರ್ಮಿಕ ಸಭೆಯಲ್ಲಿ ಆರ್ ಎಸ್ ಎಸ್ ನ ಮುಖ್ಯಸ್ಥ ರಾಮಣ್ಣ ಮಾತನಾಡಿ, ಚುನಾವಣೆಯ ವೇಳೆ ಬರುವ ಹುಟ್ಟುಹಬ್ಬಕ್ಕೆ ಮಹತ್ವವಾಗಿರುತ್ತದೆ. ಆದರೆ ಚುನಾವಣೆಯ ನಂತರ ಹುಟ್ಅಉಹಬ್ಬ ಆಚರಿಸಿಕೊಳ್ಳುವರೆ ನಾಪತ್ತೆಯಾಗುತ್ತಾರೆ. ವ್ಯಕ್ತಿಯ ಸ್ಥುತಿಯಿಲ್ಲ. ವ್ಯಕ್ತಿತ್ವದ ಅನಾವಣವಾಗಿದೆ. ವ್ಯಕ್ತಿತ್ವ ಸಾಧನೆ ಮತ್ತು ಗಳಿಸುವ ಜನಸ್ನೇಹದಿಂದ ಬರುತ್ತದೆ. ಇದಕ್ಕೆ ಸ್ವಪ್ರಯತ್ನಬೇಕು ಎಂದರು. 

ವ್ಯಕ್ತಿ ಮೇಲೆ ಬರಲು ಹಣದ ಬಲದ ಮೇಲೆ ಉಳಿದವರ ಅನುಗ್ರಹದ ಆಧಾರದ ಮೇಲೆ ಮೇಲೆ ಬರುತ್ತಾರೆ. ಇದು ರಾಜಕಾರಣದಲ್ಲಿ ಹೆಚ್ಚಾಗಿ ಕಾಣುತ್ತದೆ. ಜಾತಿ ವ್ಯವಸ್ಥೆ ರಾಜಕೀಯದಲ್ಲಿ ವಿಡಂಬಣೆಯಾಗಿದೆ. ಜಾತಿಯನ್ನ‌ ಈಶ್ವರಪ್ಪ ಮೆಟ್ಟಿಲಾಗಿಸಲಿಲ್ಲ. ಹಿಂದುತ್ವ ಉಳಿದರೆ ಕುರುಬ ದಲಿತ, ಬ್ರಾಹ್ಮಣ, ಮಠಗಳು, ಮಂದಿರಗಳು, ಕುಟುಂಬಗಳು ಉಳಿಯುತ್ತದೆ. ಹಿಂದುತ್ವ ಉಳಿದರೆ ಭಾರತ ಮಾತ ಕಂಗೊಳಿಸುತ್ತದೆ ಎಂದರು. 

ಹುಟ್ಟುಹಬ್ಬ ಇತ್ತೀಚಿನ ದಿನಗಳಲ್ಲಿ ದೀಪ ಆರಿಸುವ ಅಮಂಗಳಕಾರಿಕ ಆಚರಣೆಯನ್ನ ಅನುಸರಿಸಲಾಗುತ್ತಿದೆ. ಈಶ್ವರಪ್ಪ ನವರ ಹುಟ್ಟು ಹಬ್ಬದ ಆಚರಣೆಗೆ ಮನಸ್ಸಿಗೆ ಮದ ನೀಡುತ್ತದೆ. ರಾಜಕೀಯ ಭಾಷಣಗಳಿಲ್ಲದೆ ನಡೆದಿರುವುದು ಸಂತೋಷ ತಂದಿದೆ ಎಂದರು. 

ಗುರುಹಿರಿಯರ ಆಶೀರ್ವಾದದಿಂದ ಹುದುಗಿರುವ ವ್ಯಕ್ತಿತ್ವ ಅರಳಿತ್ತದೆ. ಆರ್ ಎಸ್ ಎಸ್ ನ ಸಂಸ್ಕಾರದಿಂದ ಸ್ವಯಂಸೇವಕರು ಬೆಳೆಸಿಕೊಂಡಿದ್ದಾರೆ. ವ್ಯಕ್ತಿತ್ವನ್ನ ರಾಷ್ಟ್ರದ ದೇವತೆಗೆ ತ್ಯಾಗ ಮಾಡುವ ಬೆಳೆಸಿಕೊಳ್ಳಬೇಕು. ಈ ವೇಳೆ 76 ವರ್ಷದ ಜೀವನ ನಡೆಸಿಕೊಂಡು ಬಂದಿದ್ದಾರೆ. ಈಶ್ವರಪ್ಪನವರು

ಸದ್ಗುಣನನ್ನ ಬದುಕುವರೆಗೆ ಉಳಿಸುವ ಸಂಕಲ್ಪ ಮಾಬೇಕು‌. ಸಂಭ್ರಮ ಇದ್ದೇ ಇರುತ್ತದೆ ಸಂಕಲ್ಪದ ಸಂಸ್ಕಾರ ಇಲ್ಲದಿದ್ದರೆ ಸಾರ್ಥಕತೆ ಇರುವುದಿಲ್ಲ.  ಸಂಕಲ್ಪ ಸಾರ್ಥಕತೆಯ ಮೂಲಕ ಸಂಭ್ರಮ ಆಚರಣೆಯಾಗಬೇಕು. ವ್ಯಕ್ತಿ ಮೇಲೆ ಬರಲು ದುಡ್ಡಿನ ಬಲ ಜೋರಾಗಿರುತ್ತದೆ. ಇಂದಿನ ರಾಜಕಾರಣ ವಿಡಂಬಣೆಯಾಗಿದೆ. 

ಬದಲಾಗುತ್ತಿರವ ಭಾರತ ದಯಾನಿಯ ಸ್ಥಿಯಲ್ಲಿತ್ತು. 10 ವರ್ಷದಲ್ಲಿ ಬದಲಾಗಿದೆ. ವಿಶ್ವ ಒಂದು ಕುಟುಂಬ ಎಂಬ ವಿಯಷನ್ನ ತಲುಪಿಸುವುದರಲ್ಲಿ ಪ್ರಮುಖವಾಗಿ ಬೆಳೆಯುತ್ತಿದೆ. ಪರ್ವಕಾಲಕ್ಕೆ ನಾವುಗಳು ಸಾಕ್ಷಿಗಳಾಗಿವೆ ಎಂದರು. 

ಇದಕ್ಕೂ ಮೊದಲು ಮಾತನಾಡಿದ ಪೇಜಾವರ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಈಶ್ವರಪ್ಪನವರು ಶ್ರೀರಾಮನ ಆದರ್ಶಗಳನ್ನ ಪಾಲಿಸಿಕೊಂಡು ಬಂದವರು ಎಂದು ಹೇಳಿದರು. 

ಬಸವನ ಬಾಗೆ ವಾಡಿ, ಕೂಡಲಸಂಗಮದ ಶ್ರೀಗಳು, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮಿಗಳು, ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು

ಹೊಸದುರ್ಗ ಕಾಗಿನೆಲೆ ಗುರುಪೀಠದ ಈಶ್ವರಾನಂದ ಪುರಿ, ಆದಿ ಚುಂಚನಗಿರಿ ಮಠದ ಸಾಯಿನಾಥ ಮೊದಲಾದವರು ಉಪಸ್ಥಿತರಿದ್ದರು. 

If Hinduism remains, Kuruba, Dalit, Brahmin monasteries will remain

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close