ಜೂ.18 ರಂದು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಉದ್ಘಾಟನೆ- Inauguration ceremony of the Union of Priests

SUDDILIVE || THIRTHAHALLI

ಜೂನ್ 18 ರಂದು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಉದ್ಘಾಟನ ಸಮರಂಭ-Inauguration ceremony of the Union of Priests, Agamikas and Upadhivantas of Muzrai Temples on June 18th

Preist, temple


ತೀರ್ಥಹಳ್ಳಿ ತಾಲೂಕು ಮುಜರಾಯಿ ದೇವಸ್ಥಾನಗಳ ಅರ್ಚಕರ ಅಗತ್ಯತೆಗಳನ್ನು ಆಲಿಸಿ, ಸ್ಪಂದಿಸುವ ಸಲುವಾಗಿ ರಾಜ್ಯ ಸರ್ಕಾರದ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾಗಿದ್ದ  ರಂಗರಾಜನ್ ರವರ ಮಾರ್ಗದರ್ಶನದಲ್ಲಿ  ನೂತನವಾಗಿ "ತೀರ್ಥಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾಧಿವಂತರ" ಒಕ್ಕೂಟದ ರಚನೆ ಮಾಡಲಾಗಿತ್ತು. ರಾಜ್ಯದಲ್ಲಿ ಸುಮಾರು 34,000ಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅತ್ಯಧಿಕ ಸುಮಾರು 185 ಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದೆ. ತಾಲೂಕಿನಲ್ಲಿ  ಮುಜರಾಯಿ ದೇವಾಲಯಗಳ  ಒಕ್ಕೂಟದ ಉದ್ಘಾಟನಾ ಸಮಾರಂಬವು ಜೂನ್ 18ರ ಬುಧವಾರ ಮಧ್ಯಾಹ್ನ 2.30ಕ್ಕೆ ತೀರ್ಥಹಳ್ಳಿಯ ಗಾಯತ್ರೀ ಮಂದಿರದಲ್ಲಿ ನೇರವೇರಲಿದೆ. 

ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ರಾಜ್ಯ ಮುಜುರಾಯಿ ದೇವಾಲಯಗಳ ಒಕ್ಕೂಟ, ಬೆಂಗಳೂರು ಇದರ ಕಾರ್ಯದರ್ಶಿಗಳಾದ ಕೆ.ಎಸ್.ಎನ್ ದೀಕ್ಷಿತರು ಇವರು ಭಾಗವಹಿಸಲಿದ್ದಾರೆ.

ಒಕ್ಕೂಟದ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾಧ್ಯಕ್ಷರು-ಮಿಥುನ್ ಅಯ್ಯಂಗಾರ್, ಶಿವಮೊಗ್ಗ.  ಶಾಸಕರಾದ ಆರಗ ಜ್ಞಾನೇಂದ್ರ, ಜಿಲ್ಲಾ ದಂಡಾಧಿಕಾರಿ ಗುರುದತ್ತ ಹೆಗಡೆ., ತೀರ್ಥಹಳ್ಳಿ ತಹಶೀಲ್ದಾರ ಶ್ರೀ ರಂಜಿತ್ ಎಸ್.,  ಶ್ರೀ ಶ್ಯಾಮಸುಂದರ ದೀಕ್ಷಿತರು, ಬೆಂಗಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್.,  ತಾಲೂಕು ಮುಜುರಾಯಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ ಭಟ್, ಉಪಾಧ್ಯಕ್ಷರಾದ ವಿದ್ಯಾಶಂಕರ ಅಗ್ರಹಾರ,  ಕಾರ್ಯದರ್ಶಿಗಳಾದ ಮೃಗವದೆ ದರ್ಶನ್ ಬಾಯರ್ ಹಾಗೂ ಇನ್ನಿತರ ಪ್ರಮುಖರು ಆಗಮಿಸಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ಎಲ್ಲಾ ದೇವಾಲಯಗಳ ಅರ್ಚಕರು, ಆಗಮಿಕ ಮಿತ್ರರು ಮತ್ತು ಪರಿವಾರದವರು ಆಗಮಿಸಿ ಶುಭ ಕೊರಲು ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Inauguration ceremony of the Union of Priests

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close