SUDDILIVE || SHIVAMOGGA
ಆದಿಮಲ್ಲಮ್ಮ ದೇವಸ್ಥಾನ ಉದ್ಘಾಟನೆ-Inauguration of Adimallamma Temple
ಇಲ್ಲಿನ ಆಲ್ಕೋಳದ ಮೇಧಾ ಸಮುದಾಯ ಭವನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಆದಿಮಲ್ಲಮ್ಮ ದೇವಿಯ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪತ್ರಿಷ್ಠಾನ ಸಮಾರಂಭವು ಜೂ.೧೯ ಮತ್ತು ೨೦ ರಂದು ನಡೆಯಲಿದೆ.
ಶಿವಮೊಗ್ಗ ನಗರದ ಮೇಧಾ ಸಮುದಾಯ ಸಮಿತಿಯಿಂದ ನಿರ್ಮಿಸಲಾಗಿರುವ ಈ ದೇವಸ್ಥಾನದ ಉದ್ಘಾಟನೆ ಆದಿಮಲ್ಲಮ್ಮ ದೇವಿಯ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜೂ.೧೯ರಂದು ವೇ.ಬ್ರ.ಸಂದೇಶಭಟ್ ಅವರ ನೇತೃತ್ವದಲ್ಲಿ ಆರಂಭವಾಗಲಿದ್ದು, ಮೊದಲ ದಿನ ಬ್ರಹ್ಮ ಕಲಶ ಪ್ರತಿಷ್ಟಾಪನೆ, ಆದಿವಾಸಿ ಬಲಿಪೂಜೆಗಳು ನಡೆಯಲಿವೆ.
ಜೂ೨೦ರಂದು ಬ್ರಹ್ಮ ಕಲಾಶಾಭಿಷೇಕ, ದೇವಸ್ಥಾನ ಉದ್ಘಾಟನೆ ನಡೆಯಲಿದ್ದು, ಕೇತೇಶ್ವರ ಮಹಾಮಠ ಚಿತ್ರದುರ್ಗದ ಪೂಜ್ಯ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾಪೂರ್ಯಾನಾಯ್ಕ್, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ , ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ ಭಾಗವಹಿಸಲಿದ್ದಾರೆ ಎಂದು ಆದಿಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪಿ.ಸಿ.ಈಶ್ವರ ರಾಮ್, ಕಾರ್ಯದರ್ಶಿ ಆರ್. ಶಿವಕುಮಾರ್ ಕೋರಿದ್ದಾರೆ.
Inauguration of Adimallamma Temple