ಮೂರು ದೇವಸ್ಥಾನದ ಚಿನ್ನ ಬೆಳ್ಳಿ ಬಗ್ಗೆ ತನಿಖೆಯಾಗಲಿ-ಶಶಿ ಕುಮಾರ್- investigation into the gold and silver of three temples

 SUDDILIVE || SHIVAMOGGA

ಮೂರು ದೇವಸ್ಥಾನದ ಚಿನ್ನ ಬೆಳ್ಳಿ ಬಗ್ಗೆ ತನಿಖೆಯಾಗಲಿ-ಶಶಿ ಕುಮಾರ್-investigation into the gold and silver of three temples

Temple, investigation


ಭದ್ರಾವತಿಯ ಜನ್ನಾಪುರದ ವಾರ್ಡಿನ ಅಂತರಘಟ್ಟ ದೇವಸ್ಥಾನ,  ಉಡುಸಲಮ್ಮ ದೇವಸ್ಥಾನ, ಮಲ್ಲೇಶ್ವರ ದೇವಸ್ಥಾನದ ಮೂರು ದೇವಸ್ಥಾನ ಸಮಿತಿ ರಚಿಸಿ ಸಾರ್ವಜನಿಕರಿಂದ ಮತ್ತು ಸರ್ಕಾರದಿಂದ ಹಣ ಪಡೆದಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಹೋರಾಟಗಾರ ಶಶಿಕುಮಾರ್ ಆಗ್ರಹಿಸಿದರು. 

ಶುಭ ಸಮಾರಂಭ ನಡೆದರೆ ಬಂಗಾರ ನೀಡಲಾಗುತ್ತಿದೆ. ಸಮಿತಿ ನಿಯಂತ್ರಣ ಙ್ಮ ವ್ಯಾಪ್ತಿಗೆ ಬರೊಲ್ಲ ಎಂದು ಉಪನೋಂದಣ  ಅಧಿಕಾರಿಗಳು ತಿಳಿಸುತ್ತಾರೆ. 1500 ಕ್ಕೂ ಹೆಚ್ಚ್ಉ ಚಿನ್ನ, ಕೆಜಿಗಟ್ಟಲೆ ಬೆಳ್ಳಿ ಇದೆ. ಸಮಿತಿ ವಜಾಗೊಳಿಸಿ ಮುಜರಾಯಿಗೆ ಸೇರಿಸಬೇಕು ಎಂದು ಶಶಿಕುಮಾರ್ ಆಗ್ರಹಿಸಿದರು. 

2016-17 ರಲ್ಲಿ ಸಮಿತಿಯಿ ಸರ್ಕಾರದ ವತಿಯಿಂದ 15 ಲಕ್ಷ ಅನುದಾನ ಬಂದಿದೆ.2019 ರಲ್ಲಿ ಗೋಪುರ ನಿರ್ಮಾಣವಾಗಿದೆ. ಮತ್ತೆ 10 ಲಕ್ಷ ರೂ. ಹಣ ಪಡೆದಿದೆ. ತನಿಖೆಯಾಗಬೇಕು. ಮೂರು ದೇವಸ್ಥಾನದ ಸಮಿತಿಗೆ 30 ವರ್ಷದಿಂದ ಒಬ್ಬರೇ ಅಧ್ಯಕ್ಷರಿದ್ದಾರೆ. ಇದೊಂದಿ ಮಾಫೀಯಾವಾಗಿದೆ. 

ಬೆಳ್ಳಿ ಚಿನ್ನದ ಮಾಹಿತಿಯನ್ನ ಮೂರು ದೇವಸ್ಥಾನಗಳು ಬಹಿರಂಗ ಪಡಿಸಬೇಕು. ಇಲ್ಲಿನ ಸಂಗ್ರಹವಾದ ಹಣಕ್ಕೆ ಲೆಕ್ಕವಿಲ್ಲ. ಪ್ರತಿವರ್ಷ ಸಮಿತಿಯು ನವೀಕರಣವಾಗಬೇಕು. ಆಡಿಟ್ ಇಲ್ಲದೆ ರಿನಿವಲ್ ಆಗಿದೆ.  ಹಾಗಾಗಿ ತನಿಖೆಯಾಗಬೇಕು.  ಸಹಕಾರ ಇಲಾಖೆಗೆ ಪತ್ರ ಬರೆದರೆ ನಮಗೆ ಬರೊಲ್ಲ ಎಂಬ ಮಾಹಿತಿ ನೀಡಲಾಗಿದೆ. 

investigation into the gold and silver of three temples

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close