SUDDILIVE || SHIVAMOGGA
ಮಾನವೀಯತೆ ಮೆರೆದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ-KSRTC bus driver shows humanity
ಪ್ರಯಾಣಿಕರೂ ಒಬ್ಬರಿಗೆ ಉಸಿರು ಕಟ್ಟಿದ ಹಾಗೆ ಅನುಭವ ಆದ ಹಿನ್ನೆಲೆಯಲ್ಲಿ KSRTC ಬಸ್ ಚಾಲಕನೋರ್ವ ನೇರವಾಗಿ ಸರ್ಕಾರಿ ಆಸ್ಪತ್ರೆ ಕಡೆಗೆ ಬಸ್ಸನ್ನೇ ತೆಗೆದುಕೊಂಡು ಹೋಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಘಟನೆ ವರದಿಯಾಗಿದೆ
ಸಾಗರದಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದ ಅಶ್ವಮೇಧ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಅಬ್ದುಲ್ ಗಫರ್ ಎನ್ನುವ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಆನಂದಪುರದ ಬಳಿ ಬರುತ್ತಿದ್ದಂತೆ ಅವರಿಗೆ ಉಸಿರು ಕಟ್ಟಿದ ಹಾಗೆ ಅನುಭವವಾಗಿ ಅಸ್ವಸ್ಥಗೊಂಡಿದ್ದರು. ಇದನ್ನು ಮನಗಂಡ KSRTC ಬಸ್ ಚಾಲಕ ನೇರವಾಗಿ ಆನಂದಪುರದ ಸರ್ಕಾರಿ ಆಸ್ಪತ್ರೆ ಕಾಂಪೌಂಡ್ ಒಳಗೆ ಬಸ್ಸನ್ನು ಚಲಾಯಿಸಿ ತುರ್ತು ಪರಿಸ್ಥಿತಿಯಲ್ಲಿದ್ದ ಪ್ರಯಾಣಿಕರಾದ ಅಬ್ದುಲ್ ಗಫರ್ ರವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮಾನವೀಯತೆ ಮೆರೆದ ಚಾಲಕ ರಮೇಶ್ ನ ಕರ್ತವ್ಯದ ಬಗ್ಗೆ ಪ್ರಶಂಸೆಗಳ ಸುರಿಮಳೆ, ಹರಿದು ಬರುತ್ತದೆ.
KSRTC bus driver shows humanity