ಜೂನ್ 21ರಂದು ಡಿ.ಆರ್ ಸಭಾಭವನದಲ್ಲಿ ನೈಟ್ಸ್ ಇನ್ ಖಾಕಿ- ಸತ್ಯಮೇವ ಜಯತೆ- Knights in Khaki - Satyameva Jayate

SUDDILIVE || SHIVAMOGGA 

ಜೂನ್ 21ರಂದು ಡಿ.ಆರ್ ಸಭಾಭವನದಲ್ಲಿ ನೈಟ್ಸ್ ಇನ್ ಖಾಕಿ- ಸತ್ಯಮೇವ ಜಯತೆ-Knights in Khaki - Satyameva Jayate at D.R. Sabha Bhavan on June 21

Knights, khaki

 

ಶಿವಮೊಗ್ಗ ರೌಂಡ್ ಟೇಬಲ್ 166,  ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ 266,  ಮಲ್ನಾಡ್ ಮಾಸ್ಟರ್ಸ್ 212, ಇವರ ಸಂಯುಕ್ತಾಶ್ರಯದಲ್ಲಿ  ಶನಿವಾರ ಜೂನ್ 21 ರಂದು ಸಂಜೆ 5:30ಕೆ ಶಿವಮೊಗ್ಗ ನಗರದ ಡಿ.ಎ.ಆರ್ ಮೈದಾನದ ಬಳಿ ಇರುವ ಡಿ.ಆರ್ ಸಭಾಭವನದಲ್ಲಿ ನೈಟ್ಸ್ ಇನ್ ಖಾಕಿ- ಸತ್ಯಮೇವ ಜಯತೆ ಎನ್ನುವ ಶೀರ್ಷಿಕೆಯೊಂದಿಗೆ ಹಗಲಿರುಳೆನ್ನದೆ ನಮ್ಮನ್ನು ರಕ್ಷಣೆ ಮಾಡುವ ವಿಶೇಷ ಸಾಧನೆಯನ್ನು ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ 12 ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರೌಂಡ್ ಟೇಬಲ್ ನ ವತಿಯಿಂದ ಸನ್ಮಾನವನ್ನು ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ವಿಧಾನಪರಿಷತ್ತಿನ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರು ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಮಿಥುನ್ ಕುಮಾರ್ ಅವರು ಆಗಮಿಸುತ್ತಿದ್ದಾರೆ. ಇವರೊಂದಿಗೆ ಶ್ರೀಯುತ ಶುಶ್ರುತ್ ಬೆಳಗೂರು, ಶ್ರೀಯುತ ಪ್ರಶಾಂತ್ ಕೆ, ಶ್ರೀಯುತ ಆದಿತ್ಯ ಆಚಾರ್ಯ,  ಶ್ರೀಯುತ ರೋಹನ್ ಎ ಎಸ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

Knights in Khaki - Satyameva Jayate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close