SUDDILIVE || SHIVAMOGGA
ಎಡಗೈಯೆ ಅಪಘಾತಕ್ಕೆ ಕಾರಣ ಚಿತ್ರ ತಂಡ ಶಿವಮೊಗ್ಗಕ್ಕೆ-Left-handedness causes accident, film crew goes to Shivamogga
ಜೂ. 13ರಂದು ಬಿಡುಗಡೆ. ಉತ್ತಮ ಪ್ರದರ್ಶನ ಕಾಣುತ್ತಿದೆ. ಸಮರ್ಥ್ ಕಡಕೋಳ್ ಉತ್ತಮ ನಿರ್ದೇಶನ ನೀಡಿದ್ದಾರೆ. ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ನಟ ದಿಗಂತ್ ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ನಮ್ಮ ಚಿತ್ರವನ್ನು ರವಿಚಂದ್ರ ವಿತರಿಸಿದ್ದಾರೆ. ಧನು ಮತ್ತು ಹರ್ಷ ಮೊದಲ ಚಿತ್ರದಲ್ಲೆ ಎಲ್ಲರ ಗಮನ ಸೆಳೆಯುವಂತೆ ನಟಿಸಿದ್ದಾರೆ ಎಂದು ರಾಜೇಶ್ ಕೀಳಂಬಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 150 ಶೋ ಮಾಡಬೇಕು ಎಂದುಕೊಂಡಿದ್ದೆವು. ಚಿತ್ರಮಂದಿರದವರೆ ಮುಂದೆ ಬಂದು 300ಕ್ಕೂ ಹೆಚ್ಚು ಪ್ರದರ್ಶನದ ಜತೆ ಪ್ರಾರಂಭವಾಯಿತು. ಜನರಿಂದ ಜನರಿಗೆ ತಿಳಿದು ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಮಲ್ಲಿಕಾರ್ಜುನ, ಭಾರತ್ ಸಿನಿಮಾಸ್ ನಲ್ಲಿ ಪ್ರದರ್ಶನ ಇದೆ. ಶಿವಮೊಗ್ಗ ಚಲನಚಿತ್ರದ ಹಬ್ ಆಗುವಂತೆ ಎಲ್ಲರೂ ಸಹಕರಿಸಬೇಕು ಎಂದರು.
ನಟ ದಿಗಂತ್ ಮಂಚಾಲೆ ಮಾತನಾಡಿ ಶಿವಮೊಗ್ಗದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾಗೆ ಗೆಲ್ಲುವ ಎಲ್ಲ ಲಕ್ಷಣಗಳಿವೆ. ಸಿನಿಮಾ ನೋಡುವಂತೆ ಜನರೆ ಹೇಳುತ್ತಿದ್ದಾರೆ ಎಂದರು.
ನಟ ಸಮರ್ಥ್ ಕಡಕೋಳ್ ಮಾತನಾಡಿ ಮೊದಲ ಸಿನಿಮಾದಲ್ಲಿಯೆ ಹೆಚ್ವು ಜವಾಬ್ದಾರಿ ತೆಗೆದುಕೊಂಡಿದ್ದೇನೆ. ರಾಜ್ಯದಲ್ಲಿ ಉತ್ತಮ ಚಿತ್ರ ನಿರ್ದೇಶಕರಿದ್ದಾರೆ. ಸಹಕಾರ ನೀಡಿ. ಚಿತ್ರ ಎಡಗೈ ಬಳಕೆದಾರರ ಕುರಿತು ಕಥೆ ಹೇಳುತ್ತದೆ ಎಂದು ತಿಳಿಸಿದರು.
ನಟಿ ನಿಧಿ ಸುಬ್ಬಯ್ಯ ಮಾತನಾಡಿ, ಮೈಸೂರಿನಲ್ಲಿ ಚಲನಚಿತ್ರ ಮಂದಿಕ್ಕೆ ಹೋಗಿದ್ದ ಚಲನಚಿತ್ರ 60% ಫುಲ್ ಆಗಿತ್ತು. ಚಿತ್ರ ಮುಗಿಯುವ ವರೆಗೆ ಪ್ರೇಕ್ಷಕರು ಮೊಬೈಲ್ ನೋಡಿಲ್ಲ. ಆ ಮಟ್ಟಿಗೆ ಚಿತ್ರ ಹಿಡಿದಿಟ್ಟುಕೊಂಡಿತ್ತು ಎಂದು ತಿಳಿಸಿದರು.