SUDDILIVE || SIVAMOGGA
ನೀಟ್ ಪರೀಕ್ಷೆಗೆ ಆತಂಕ ಪಡುವ ಅಗತ್ಯವಿಲ್ಲ-ಅವಿನಾಶ್-No need to worry about NEET exam - Avinash
ಈ ವರ್ಷದ ನೀಟ್ ಪರೀಕ್ಷೆ ಕಷ್ಟಕರವಾಗಿತ್ತು. ಆದರೆ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಸೀಟ್ಗಳ ಸಂಖ್ಯೆ ಕಡಿಮೆಯಾಗಿಲ್ಲ. ಗಳಿಸಿರುವ ಅಂಕ ಕಡಿಮೆಯಾಗಿದೆ. ಪೋಷಕರು,ಮಕ್ಕಳು ಸೀಟ್ ಸಿಗುವುದಿಲ್ಲ ಎಂದು ಭಯಪಡುವ ಅಗತ್ಯವಿಲ್ಲ ಎಂದು ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೇಪರ್ನ ಮರ್ಗಸೂಚಿಯನ್ನು ಕಠಿಣ ಮಾಡಲಾಗಿದೆ. ೫೧೦ ಅಂಕ ಗಳಿಸಿದರೂ ಸೀಟ್ ಸಿಗಲಿದೆ. ೨೦೧೭ರಲ್ಲಿ ಈ ಪರೀಕ್ಷೆ ಕ್ಲಿಷ್ಟಕರವಾಗಿತ್ತು. ಆನಂತರ ಈಗ ೨೦೨೫ರಲ್ಲಿ ಮತ್ತೆ ಪರೀಕ್ಷೆ ಕಠಿಣ ನೀಡಲಾಗಿತ್ತು. ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಆತಂಕಕ್ಕೆ ಒಳಗಾಗಿದ್ದರು. ಕಠಿಣತೆಯ ಮಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ವೈದ್ಯಕೀಯ ಪ್ರವೇಶಕ್ಕೆ ಅವರನ್ನು ಸಿದ್ದ ಮಾಡಲಾಗುವುದು. ಬಡವರಿಗೆ ಹಾಸ್ಟೆಲ್ ಶುಲ್ಕದಲ್ಲಿ ಶೇ.೫೦ ರಿಯಾಯಿತಿ ನೀಡಲಾಗುವುದು ಎಂದರು.
೧೩೫ರಲ್ಲಿ ೯೦ ಜನ ಕ್ವಾಲಿಫೈ ಆಗಿದ್ದಾರೆ. ೪೨ ಜನರಿಗೆ ಸರಕಾರಿ ಸೀಟ್ ಸಿಗಲಿದೆ ಎಂದು ವಿವರಿಸಿದರು.
ದಿಶಿಲ್.ಡಿ.ಕೆ. ೪೫೦ ಅಂಕ.
ಡಾಕ್ಟರ್ ಆಗಬೇಕು ಎಂಬ ಕನಸನ್ನು ನನ್ನ ತಂದೆ ಹೊಂದಿದ್ದರು. ಇದಕ್ಕೂ ಮೊದಲು ಬೇರೊಂದು ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದೆ. ಅಪ್ಪಾಜಿ ಆಟೋ ಡ್ರೈವರ್ ಆಗಿದ್ದು, ನಿರೀಕ್ಷಿತ ಅಂಕ ಪಡೆಯಲು ಸಾಧ್ಯವಾಗಲಿಲ್ಲ. ನಂತರ ದೇಶ ಅಕಾಡೆಮಿಗೆ ಸೇರಿದೆ. ಸಿಂಗಲ್ ಪೇರೆಂಟ್ಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ಬಡವರಿಗೆ ಅತೀ ಕಡಿಮೆ ದರದಲ್ಲಿ ತರಬೇತಿ ನೀಡಿದ್ದಾರೆ. ಪರೀಕ್ಷೆ ಕ್ಲಿಷ್ಟಕರವಾಗಿತ್ತು. ೭ ಸಾವಿರ ರ್ಯಾಂಕ್ ಬಂದಿದೆ. ಸೀಟ್ ಸಿಗುವುದು ನನಸಾಯಿತು ಎಂದು ತಿಳಿಸಿದರು.