ad

ಗಮನ ಸೆಳೆಯುತ್ತಿರುವ ಶಾಸಕ ಚೆನ್ನಬಸಪ್ಪ-MLA Chennabasappa is attracting attention

 SUDDILIVE || SHIVAMOGGA

ಗಮನ ಸೆಳೆಯುತ್ತಿರುವ ಶಾಸಕ ಚೆನ್ನಬಸಪ್ಪ-MLA Chennabasappa is attracting attention

MLA, channabasappa


ಶಾಸಕರ ಸರಳತೆಗೆ ಶಿವಮೊಗ್ಗದ ಜನ ಫಿದಾ ಆಗಿದ್ದಾರೆ. ಶಾಸಕ ಚೆನ್ನಬಸಪ್ಪ ಒಬ್ಬ ಶಾಸಕನಾಗಿ ಊರಿನ ಸಮಸ್ಯೆ ಇರುವ ಕಡೆ ಸುತ್ತಾಡುವ ಮೂಲಕ ಜನರ ಗಂಭೀರ ವಿಷಯಗಳನ್ನ ಬಗೆಹರಿಸುವ ದೃಷ್ಠಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಜನರಿಗೆ ಸುಲಭವಾಗಿ ಸಿಗುವ ಶಾಸಕ ಎಂಬ ಹೆಗ್ಗಳಿಕೆಗೆ ಚೆನ್ನಬಸಪ್ಪನವರು ಪಾತ್ರರಾಗಿದ್ದಾರೆ. ಶಾಸಕರಾಗಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುವ ಜನರ ಮಧ್ಯೆ ಶಾಸಕರು ಬಡಾವಣೆಗಳಲ್ಲಿ ಬೈಕ್ ನಲ್ಲಿ ಓಡಾಡಿ ಜನರ ಸಮಸ್ಯೆಗೆ ಬಗೆಹರಿಸುವ ನಿಟ್ಟಿನಲ್ಲಿ ಯತ್ನಿಸುತ್ತಿದ್ದಾರೆ.

ಸಮಸ್ಯೆ ಬಗೆಹರಿಯುತ್ತೋ ಬಿಡುತ್ತೋ ಆದರೆ ಜನರ ಮಧ್ಯೆ ಹೋಗಿ ಸಮಸ್ಯೆಯನ್ನ ಆಲೈಸುವ ಮತ್ತು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಿರುವುದು ಗಮನಾರ್ಹವಾಗಿದೆ. ಮೊನ್ನೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 7ರ ಹುಡ್ಕೋ ಕಾಲೋನಿಯ ಸ್ಥಳೀಯರ ಸಮಸ್ಯೆಗಳ ಮಾಹಿತಿ ಪಡೆಯುವ ಉದ್ದೇಶದಿಂದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಂದ ಬಡಾವಣೆಯ ನೀರಿನ ಕೊರತೆ ಹಾಗೂ ಯುಜಿಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವಂತೆ ಸೂಚಿಸಿದರು.

ಇಂದು ಬೆಳಿಗ್ಗೆ ಶಿವಮೊಗ್ಗ ನಗರ ವಾರ್ಡ್ ಸಂಖ್ಯೆ 12ರ ಬಾಪೂಜಿನಗರ ಪ್ರದೇಶಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿದರು. ಅದೂ ದ್ವಿಚಕ್ರವಾಹನದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಹೀಗೆ ಒಂದೊಂದೆ ಬಡಾವಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.  

ಭೇಟಿಯ ವೇಳೆ ಸ್ಥಳೀಯ ನಿವಾಸಿಗಳಿಂದ ಬಡಾವಣೆಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆಯುವುದು. ಸಮಸ್ಯೆಗಳ ತಕ್ಷಣದ ಬಗೆಹರಿಕೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸುತ್ತುರುವುದು ಅವರ ಕಾರ್ಯವೈಖರಿಯನ್ನ ಬಣ್ಣಿಸುತ್ತಿದೆ. 


ಚೆನ್ನಬಸಪ್ಪನವರು ಇತ್ತೀಚೆಗೆ ಪಿಡಬ್ಲೂಡಿ ಸಚಿವರನ್ನ ಭೇಟಿ ಮಾಡಿಬಂದಿದ್ದಾರೆ. ಕಾರಣ ಹೊಳೆ ಬಸ್ ಸ್ಟಾಪ್ ಬಳಿಯಿರುವ ಹಳೆಯ ಸೇತುವೆಯನ್ನ ತೆಗೆಸಿ ಹೊಸ ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿ ಬಂದಿದ್ದಾರೆ. ಒಂದಂತು ನಿಜ ಈ ಹಿಂದೆ ಇದೇ ರೀತಿ ಚುನಾವಣೆ ಸಂದರ್ಭದಲ್ಲಿ ಮಧ್ಯ ಪ್ರದೇಶದಲ್ಲಿ ಪ್ರತಾಪ್ ಸಾರಂಗಿ ಎಂಬ ಸಂಸದರ ಬಗ್ಗೆ ಇಡೀ ದೇಶ ಮೆಚ್ಚಿಕೊಂಡಿತ್ತು. ಅವರನ್ನ ಮೀರಿಸಿ ಬೆಳೆಯುವ ಶಕ್ತಿ ಶಾಸಕರಿದೆ. ಎಂಎಲ್ಎ ಚೆನ್ನಬಸಪ್ಪ ತಮ್ಮ‌ಕ್ಷೇತ್ರದಲ್ಲಿ ಸಖತ್ ಆಕ್ವಿವ್ ಆಗಿ ಸಣ್ಣ ಮಕ್ಕಳನ್ನೂ ಮಾತನಾಡಿಸುವಷ್ಟು ಸರಳತೆ ಹೊಂದಿದ್ದಾರೆ. 

ಯಾವಧರ್ಮವನ್ನೂ ಲೆಕ್ಕಿಸದೆ ಅವರ ಮೊಹಲ್ಲಾಗಳಿಗೆ ತೆರಳಿ ಸಮಸ್ಯೆ ಆಲಿಸುವ ಸೌಜನ್ಯ ಹೊಂದಿದ್ದಾರೆ. ಈಗ ಯಾವ ಚುನಾವಣೆ ಇಲ್ಲ. ಬದಲಿಗೆ ಕೆಲಸದ ಮೂಲಕ ಜನರ ಮನಗೆಲ್ಲುವ ಹಂಬಲ ಮತ್ತು ಕೆಲಸದ ತುಡಿತ ನಿಜವಾಗಿಯೂ ಮೆಚ್ಚುವಂತಹದ್ದು, ಸಧ್ಯಕ್ಕೆ ಸರ್ಕಾರದಿಂದ ಶಾಸಕರಿಗೆ ಅನುದಾನ ಬರುತ್ತಿಲ್ಲ. ಇವೆಲ್ಲಾ ಜನರಿಗೆ ಗೊತ್ತಿರುವಂತಹದ್ದೇ. ಕೆಲಕಡೆ ಕೆಲ ಶಾಸಕರು ಅನುದಾನ ಬರುತ್ತಿಲ್ಲವೆಂದೆ ಬಡಾವಣೆಗೆ ಹೋಗುತ್ತಿಲ್ಲ. ಈ ಎಲ್ಲಾ ಜನರ ನಡುವೆ ಚೆನ್ನಬಸಪ್ಪನವರ ಮಿಂಚಿನ ಓಟ ಗಮನಾರ್ಹವಾದುದ್ದು. 

MLA Chennabasappa is attracting attention

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close