ad

ಜುಲೈ 3ರಂದು ಸೌಹಾರ್ಧ ನಡಿಗೆ-Peace walk on July 3rd

 SUDDILIVE || SHIVAMOGGA

ಜುಲೈ 3ರಂದು ಸೌಹಾರ್ಧ ನಡಿಗೆ-Peace walk on July 3rd

Peace, walk

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತದ ಇಂದಿನ ಪರಿಸ್ಥಿತಿ ಶೋಚನೆಯಾಗಿದೆ. ದೇಶದುದ್ದಕ್ಕೂ ದ್ವೇಷ ಭಾಷಣಗಳು ಧರ್ಮ ಜಾತಿಗಳ ನಡುವೆ ಕಚ್ಚಾಟ ನಡೆಯುತ್ತಿದ್ದು ಸೌಹಾರ್ದೊತ್ತಿಗೆ ಹೆಸರಾದ ಕರ್ನಾಟಕದಲ್ಲಿ ದಿನೇ ದಿನೇ ಇವುಗಳು ಹೆಚ್ಚಾಗಿ ಯುವಕರು ಕೊಚ್ಚಿ ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಜಿಲ್ಲಾ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(SSF) ವತಿಯಿಂದ ಸುದ್ದಿಗೋಷ್ಠಿ, ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಸಖಘಟನೆಯ ಜಿಲ್ಲಾಧ್ಯಕ್ಷ ಹಸನ್ ಸಖಾಫಿ ತೀರ್ಥಹಳ್ಳಿ ಅವರು,  ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳೇ ದೇಶವನ್ನು ಬೆಚ್ಚಿಬಿಳಿಸಿದೆ. ಇದು ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಸೌಹಾರ್ದತೆ ಮೂಡಿಸಲು ಎಲ್ಲಾ ಧರ್ಮಿಯರ ಜೊತೆ ಪ್ರೀತಿ ವಿಶ್ವಾಸ ಬೆಳೆಸಲು ರಾಜ್ಯದ ಪ್ರಮುಖ 20 ಪಟ್ಟಣಗಳಲ್ಲಿ ಜೂನ್ 22 ರಿಂದ ಜುಲೈ 4ರ ವರೆಗೆ ಸೌಹಾರ್ದನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಜುಲೈ 3ರಂದು ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಯಲಿದೆ. ಸದರಿ ಕಾರ್ಯಕ್ರಮಕ್ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕೊಪ್ಪಳ ಹಾಗೂ ಇತರೆ ಧರ್ಮ ಗುರುಗಳು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದರು.

Peace walk on July 3rd

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close