SUDDILIVE || SHIVAMOGGA
ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ-Mass prayer on the occasion of Bakrid festival
ತ್ಯಾಗ, ಬಲಿದಾನದ ಸಂಕೇತವೇ ಬಕ್ರಿದ್ ಹಬ್ಬವಾಗಿದ್ದು, ಶಿವಮೊಗ್ಗದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಈದ್ ಮೈದಾನದಲ್ಲಿ ಮುಸ್ಲಿಮರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡಿದ್ದಾರೆ.
ರಂಜಾನ್ ಹಬ್ಬದ ನಂತರ ಬರುವ ಬಕ್ರಿದ್ ಹಬ್ಬ ಮುಸಲ್ಮಾನರಿಗೆ ಅತಿ ಶ್ರೇಷ್ಠವಾಗಿದೆ. 5000ಕ್ಕೂ ಹೆಚ್ಚು ಜನ ಈದ್ ಮೈದಾನದಲ್ಲಿ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಲಾಗಿದೆ. ಇದರಂತೆ ನಗರದ ಹಲವು ಹಲವು ಈದ್ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ.
Mass prayer on the occasion of Bakrid festival