SUDDILIVE || SHIVAMOGGA
ಭದ್ರತೆ ವಿಷಯದಲ್ಲಿ ರಾಜಿಯ ಮಾತೇ ಇಲ್ಲ-ಅಜಿತ್ ಹನುಮಕ್ಕನವರ್-No compromise on security - Ajith Hanumakkanavar
ಭದ್ರತೆ ವಿಷಯದಲ್ಲಿ ರಾಜೀ ಎನ್ನುವುದು ಇರಬಾರದು. ಅಂತಹ ಸುಸ್ಥಿತಿಗೆ ಭಾರತ ಬಂದು ನಿಂತಿರುವುದು ಹೆಮ್ಮೆಯ ಸಂಗತಿ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.
ಅವರು ಕುವೆಂಪು ರಂಗ ಮಂದಿರದಲ್ಲಿ ತುಂಗ ಕಲ್ಚರಲ್ ಮತ್ತು ಸ್ಪೋರ್ಟ್ಸ್ ವತಿಯಿಂದ ನಡೆದ ಸಲ್ಯೂಟ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ಸುಭದ್ರತೆ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಕ್ಕೆ ಭಾರತ ತಿರುಗೇಟು ಕೊಡುವ ಮಟ್ಟಕ್ಕೆ ಬೆಳೆದಿದೆ ಎಂದರು.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಮಾಡಿದ್ದು ದೇಶದ ನಿಜವಾದ ಸೈನಿಕ ಶಕ್ತಿ ಅನಾವರಣಗೊಂಡಿತು. ಈ ಹಿಂದೆ ನಮ್ಮನ್ನು ಆಳಿದವರು ಭಾರತಕ್ಕೆ ಸೈನ್ಯವೇ ಬೇಡ ಎಂದಿದ್ದರು. ಯಾಕೆ ಬೇಕು ಎಂದು ಅಂದು ಹೇಳಿದ್ದ ದೇಶವಿಂದು ಬಲಿಷ್ಠ ಸೈನ್ಯವನ್ನು ಹೊಂದಿದೆ ಬಲಿದಾನದ ಬೆಲೆ ಅರ್ಥವಾಗದ ದೇಶದ ಸ್ಥಿತಿ ಅತ್ಯಂತ ಕರಾಳವಾಗಿರುತ್ತದೆ. ಶಿಕ್ಷಣ ಕೊಡುತ್ತಿದ್ದೇವೆ. ಆದರೆ ರಕ್ತ, ಬಲಿದಾನದ ಬೆಲೆಯನ್ನು ಹೇಳದಿದ್ದರೆ ದೇಶದ ಏಳಿಗೆ ಸಾಧ್ಯವಿಲ್ಲ ಎಂದು ಹೇಳಿದರು.
ಮೂರನೇ ಮಹಾಯುದ್ಧದ ಆತಂಕ ವ್ಯಕ್ತಪಡಿಸಿದ ಸಂಸದ
ಸಂಸದ ರಾಘವೇಂದ್ರ ಮಾತನಾಡಿ, ಪಾಕಿಸ್ತಾನದ ಕುತಂತ್ರ, ದುರ್ಬುದ್ಧಿಗೆ ಪ್ರಧಾನಿ ನರೇಂದ್ರ ಅವರು ಏಟು ಎದಿರೇಟು ಕೊಟ್ಟಿದ್ದಾರೆ. ಮೋದಿ ಅವರು ಪ್ರಚಾರಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಂದು ಯಾರೋ ಒಬ್ಬ ಮಹಾನೀಯ ಹೇಳಿದ್ದರು. ಆದರೆ ಹೆಡ್ ಲೈನ್ ಅಲ್ಲ ಡೆಡ್ ಲೈನ್ ಕೊಡುತ್ತೇನೆಂದು ಮೋದಿ ಆಪರೇಷನ್ ಸಿಂಧೂರದ ಮೂಲಕ ಉತ್ತರ ಕೊಟ್ಟರು ಎಂದರು.
ಮಾತಿಗಿಂತ ಕ್ರಿಯೆ ಮೂಲಕ ದೇಶದ ಸೈನ್ಯದ ಶಕ್ತಿಯನ್ನು ಪಾಕಿಸ್ತಾನಕ್ಕೆ ಮಾತ್ರವಲ್ಲ, ಇಡಿ ಜಗತ್ತಿಗೆ ತೋರಿಸಿದ್ದಾರೆ. ದೇಶ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇರಾಕ್, ಇಸ್ರೇಲ್ ಯುದ್ಧ ನಡೆಯುತ್ತಿದೆ.ಅಮೆರಿಕಾ ಕೂಡ ದಾಳಿ ಮಾಡಿದ್ದು, ಮೂರನೇ ಯುದ್ಧದ ಅನಿಶ್ಚಿತತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿ.ಎಸ್. ಷಡಾಕ್ಷರಿ ಮಾತು
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ದೇಶವನ್ನು ಉಳಿಸಲು ಯೋಧರು ಹಗಲು ರಾತ್ರಿ ಎನ್ನದೇ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶಕ್ಕಾಗಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ದೇಶ ಕಾಯುವ ಸೈನಿಕರಿಗಾಗಿ ಗೌರವ ಸಲ್ಲಿಸಲು ಸೆಲ್ಯೂಟ್ ಕಾರ್ಯಕ್ರಮವನ್ನು ಏಳೆಂಟು ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಎಎಸ್ ಪಿ
ಎಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ನನ್ನ ತನವನ್ನು ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸುವುದು ಮುಖ್ಯ. ಆ ಕೆಲಸವನ್ನು ನಮ್ಮ ಸೈನಿಕರು ಮಾಡುತ್ತಿದ್ದಾರೆ. ಬರೀ ಸನ್ಮಾನ ಸ್ವೀಕರಿಸಿದರೆ ಸಾಲದು. ವ್ಯಕ್ತಿಗತವಾಗಿ ಬೆಳೆಯುವುದಲ್ಲ. ದೇಶಕ್ಕಾಗಿ ದುಡಿಯಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಕಾರ್ಗಿಲ್ ಯುದ್ದದಲ್ಲಿ ಅನೇಕ ಯೋಧರನ್ನು ನಾವು ಕಳೆದುಕೊಂಡಿದ್ದೇವೆ. ಸಾಕಷ್ಟು ಮಂದಿ ಹುತಾತ್ಮರಾಗಿದ್ದಾರೆ. ಗಡಿಗೆ ಹೋದ ಯೋಧರು ವಾಪಸ್ ಬರುತ್ತಾರೋ ಇಲ್ಲವೋ ಎಂಬುದು ಗ್ಯಾರಂಟಿ ಇಲ್ಲ ಎಂದರು.
No compromise on security - Ajith Hanumakkanavar