SUDDILIVE || SHIVAMOGGA
ವರ್ಗಾವಣೆ ವಿಚಾರದಲ್ಲಿ ಅಧಿಕಾರಿಗಳು ಕಣ್ಣೀರು ಹಾಕುತ್ತಿದ್ದಾರೆ-ಬಿವೈಆರ್ ಆತಂಕ-Officers are shedding tears over transfer issue - BYR concerned
ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದ್ದಾರೆ
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ವಿಶೇಷವಾಗಿ ಗಮನ ಹರಿಸಬೇಕಾಗಿರುವುದು ನಾನು ಒಂದು ಪೇಪರಲ್ಲಿ ನಿನ್ನೆ ನೋಡಿದೆ. ರಾಜ್ಯ ಸರ್ಕಾರ ವರ್ಗಾವಣೆ ದಂಧೆ ಮತ್ತೆ ಕೆಲವು ದಿನಕ್ಕೆ ಎಕ್ಸ್ಟೆಂಶನ್ ಮಾಡಿದ್ದಾರೆ.ಜಿಲ್ಲೆಯಲ್ಲೂ ಕೂಡ ಅಧಿಕಾರಿಗಳು ಕಣ್ಣೀರು ಹಾಕುತ್ತಿದ್ದಾರೆ. ಟೈಮ್ ಲಿಮಿಟ್ ಇಲ್ಲ .ಒಬ್ಬ ಅಧಿಕಾರಿ ಎರಡು ವರ್ಷದ ಒಳಗಡೆ ಟ್ರಾನ್ಸ್ಫರ್ ಮಾಡಬಾರದು ಅಂತ ಇದೆ. ಒಳ್ಳೊಳ್ಳೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ ಗೊತ್ತಿಲ್ಲ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಧಮ್ಕಿ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಧಿಕಾರಿಗಳಿಗೆ ಟೈಮು ಮುಗೀತು ನಿಮಗೆ ಟ್ರಾನ್ಸ್ಫರ್ ಮಾಡಬೇಕಾಗುತ್ತದೆ ಅಂತಿದ್ದಾರೆ. ಅಧಿಕಾರಿಗಳು ಶಾಸಕರುಗಳ ಮನೆಗೆ ನಮ್ಮ ಮನೆಗೆ ಬರುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿಕೊಳ್ಳುತ್ತೇನೆ ನೀವು ಮಾಡುವಂತಹ ಒಳ್ಳೆ ಕೆಲಸಗಳು ನೀರಿನಲ್ಲಿ ಹೋಮ ಮಾಡಿ ಹೋಗುತ್ತಿದೆ.
ಕೆಲವು ಜನ ಕೆಲವು ಮಂತ್ರಿ ಮಹಾದೇಯರು ಕಾಟವನ್ನ ಅಧಿಕಾರಿ ವೃಂದದವರಿಗೆ ಕೊಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ
ಹೀಗಾಗಿ ಪದೇ ಪದೇ ಅಧಿಕಾರಿಗಳಿಗೆ ಈ ರೀತಿಯ ಟ್ರಾನ್ಸ್ಫರ್ ಮುಖಾಂತರ ಹಿಂಸೆ ಕೊಡುವಂತಹ ಪ್ರಯತ್ನವನ್ನು ಬಿಡಬೇಕು ಅಂತ ನಾನು ಈ ಮೂಲಕ ಒತ್ತಾಯವನ್ನ ಮಾಡುತ್ತೇನೆ.
ನಮ್ಮ ಎನ್ ಡಿ ಎ ಸರ್ಕಾರದ ಮೋದಿಜಿ ಅವರ ನೇತೃತ್ವದಲ್ಲಿ ಮೂರನೇ ಅವಧಿಯಲ್ಲಿ ಅಧಿಕಾರವನ್ನು ನಡೆಸುತ್ತಿದ್ದೇವೆ. ಈ ಮೂರನೇ ಅವಧಿಯ ಮೊದಲನೇ ವರ್ಷ ಅಂದರೆ 11 ನೇ ವರ್ಷ ಮೋದಿಜಿ ಅವರ ನೇತೃತ್ವದಲ್ಲಿ ಮಾಡಿರುವಂತಹ ಸಾಧನೆಗಳನ್ನು ಕಾರ್ಯಕ್ರಮಗಳನ್ನು ಸಾಧನೆಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟಿಸಬೇಕೆಂದು ನಮ್ಮ ಸಂಘಟನೆ ವತಿಯಿಂದ ಜನರ ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಎಲ್ಲಾ ಚುನಾಯಿತ ಪ್ರತಿನಿಧಿಗಳು ಗಮನ ಕೊಡುತ್ತಿದ್ದೇವೆ.
ಇಡೀ ರಾಜ್ಯಾದ್ಯಂತ ಮೋದಿಜಿ ಅವರು ಕೊಟ್ಟಂತಹ ಕೊಡುಗೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ದೃಷ್ಟಿಯಿಂದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ನಾಳೆ ಯೋಗ ದಿನಾಚರಣೆ ಇದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರಿಗೆ ಆದ ಸಮಸ್ಯೆಯ ಬಗ್ಗೆ ಅದರ ವಿಚಾರವನ್ನು ಮುಟ್ಟಿಸುವಂತಹ ಕಾರ್ಯ ಆಗುತ್ತಾ ಇದೆ.
ಎಜುಕೇಶನ್ ಸಂಸ್ಥೆಗಳಲ್ಲಿ ಮಾಕ್ ಡ್ರಿಲ್ ಇಂದಿನ ಯುವ ಪೀಳಿಗೆಗೆ ಅಂದಿನ ತುರ್ತು ಪರಿಸ್ಥಿತಿ ಬಿಚ್ಚುಡುತ್ತದೆ. ಜನರಿಗೆ ಮಾಡಿದ ಕರಾಳ ದಿನವನ್ನು ಅದನ್ನು ತಿಳಿಸುವಂತಹ ಕೆಲಸವನ್ನು ಬಿಜೆಪಿ ಈ 11 ವರ್ಷದ ಸಂವಾದದಲ್ಲಿ ಹೇಳುತ್ತೇವೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯುತ್ತಿದ್ದೇವೆ. ಆದರೆ ಎನ್.ಡಿ.ಅರ್ ಎಫ್ ಅ ಡಿಯಲ್ಲಿ( ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ) ಪರಿಹಾರ ಸಿಗುವುದಿಲ್ಲ. ಆದರೆ ಇದರ ಅಡಿಯಲ್ಲಿ ಹೊಲದಲ್ಲಿ ಇದ್ದಂತಹ ಮೆಕ್ಕೆಜೋಳಕ್ಕೆ ಮಾತ್ರ ಪರಿಹಾರ ಸಿಗುತ್ತೆ.
ಕಟ್ ಮಾಡಿದಂತಹ ಮೆಕ್ಕೆಜೋಳ ಹೊಲಕ್ಕೆ ಹಾಕಿದಾಗ ಪರಿಹಾರ ಸಿಗುವುದಿಲ್ಲ ಎಲ್ಲ ಕೊಳೆತು ಜಿಲ್ಲೆಯಲ್ಲಿ ಹಾಳಾಗುತ್ತಿದೆ. ಇದಕ್ಕೆ ಸರ್ಕಾರ ಬೇರೆ ರೂಪದಲ್ಲಿ ಪರಿಹಾರ ಯೋಜನೆ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಸಣ್ಣ ಮಳೆಗೆ ಹೀಗೆ ಆಗಬಾರದು
ಹೊಳೆಹೊನ್ನೂರು ಹೈವೆ ರಸ್ತೆ ಬಿರುಕು ಬಿಟ್ಟಿರುವ ಬಗ್ಗೆ ಮಾತನಾಡಿದ ಸಂಸದರು, ವಿಚಾರದಲ್ಲಿ ಸಣ್ಣ ಮಳೆಗೆ ಈ ರೀತಿ ಆಗಿದೆ ಹೈವೆ ಅಥಾರಿಟಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಹಿಂದೆ ಯಾರೆ ಚುನಾವಣೆಗೆ ಸ್ಪರ್ಧಿಸಿದರೀ ಆಗ ಎಂಪಿ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದರು ಆದರೆ ಈಗ ಚುನಾವಣೆಗೆ ಸ್ಪರ್ಧೆ ಎದುರಾಗಿದೆ. ಜಾತಿ ಜನಗಣತಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಚರ್ಚೆ ಮಾಡಿಕೊಂಡು ಕೂತಿದೆ. ಕಾಲಹರಣ ಮಾಡಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಕೂತಿದೆ.ಆದರೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜಾತಿ ಜನಗಣತಿಗೆ ಮುಂದಾಗಿದೆ ಇದು ನಿಜಕ್ಕೂ ಸ್ವಾಗತ ವಿಚಾರವಾಗಿದೆ ಎಂದರು.
ಮಾಜಿ ಡಿಸಿಎಂ ಈಶ್ವರಪ್ಪನವರ ಶುದ್ಧೀಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ರಾಘವೇಂದ್ತ, ಪಕ್ಷ ಶುಧ್ದವಾಗಿರಬೇಕು ಎಂಬ ಅಭಿಪ್ರಾಯದಂತೆ ಪಕ್ಷ ಶುದ್ಧವಾಗಿದೆ. ಬರುವ ದಿನಗಳಲ್ಲಿ ಸಂಘಟನೆ ನಡೆಯಲಿದೆ ಎಂದರು.
Officers are shedding tears