ರಾಜಕೀಯ ಪಕ್ಷಗಳಿಗೆ ಚುನಾವಣೆಯೇ ಮಾನದಂಡ-ಬಿವೈಆರ್- Elections are the criterion

 SUDDILIVE || SHIVAMOGGA

ರಾಜಕೀಯ ಪಕ್ಷಗಳಿಗೆ ಚುನಾವಣೆಯೇ ಮಾನದಂಡ-ಬಿವೈಆರ್-Elections are the criterion for political parties-BYR

ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11 ವರ್ಷ ಮುಗಿಸಿದ್ದು, ಅನೇಕ ಯೋಜನೆಗಳು ಜಾರಿಯಾಗಿವೆ. ಈ ಹಿನ್ನಲೆಯಲ್ಲಿ ಸರ್ಜಿ ಆಸ್ಪತ್ರೆಯ ಸಭಾಂಗಣದಲ್ಲಿ ಸಂವಾದ  ನಡೆದಿದೆ. ಈ ಸಂವಾದನ್ನ, ಉಜ್ವಲಾ ಯೋಜನೆಯ ಫಲಾನುಭವಿಯಿಂದ ಉದ್ಘಾಟಿಸಿರುವುದು ವಿಶೇಷವಾಗಿತ್ತು. 

ಮುದ್ರಾ, ಉಜ್ವಲಾ, ಜನ್ ಧನ್, ಆಯುಷ್ ಮಾನ್ ಭಾರತ್ ಭೇಟಿ ಬಜಾವ್ಬೇಟಿ ಪಡಾವ್, ದೀನ್ ದಯಾಳ್ ಅಂತ್ಯೋದಯ ಯೋಜನೆ, ಜಲಜೀವನ್ ಮಿಷನ್  ಮೊದಲ ಯೋಜನೆ ಜಾರಿಯಾಗಿದ್ದು, ಇದರಲ್ಲಿ ಐದು ಜನ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು. 

ಗುರುರಾಜ್, ವಿಶ್ವಕರ್ಮ ಯೋಜನೆಯ ಸೋಮಶೇಖರ್, ಉಜ್ವಲ ಯೋಜನೆಯ ಫಲಾನುಭವಿ ಸರೋಜಮ್ಮ ಮೊದಲಾದ ಐದು ಜನರಿಗೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಂಸದ ರಾಘವೇಂದ್ರ, ಜಾತಿ ಜಾತಿಗಳ ನಡುವೆ ಬೆಂಕಿಹಚ್ಚಿಕೊಂಡು ರಾಜಕಾರಣ ಮಾಡುತ್ತಿದ್ದ ಕಾಲಬೇರೆ, ಮಂಡಲ್ ವರದಿ vs  ಮಂದಿರ, ಯುಪಿಎ ಸರ್ಕಾರದ ಭ್ರಷ್ಠಾಚಾರದ ನಂತರ ಬಂದ ಮೋದಿ ಸರ್ಕಾರ 11 ವರ್ಷ ಕಳೆದಿದೆ. 

ಮೋದಿಗೆ ಹೆಜ್ಜೆ ಹೆಜ್ಹೆಗೆ ಸವಾಲುಗಳಿವೆ, ಸುದ್ದಿ ಕ್ಷಣದಲ್ಲಿ ತಲುಪಲಿದೆ. ಮೋದಿಗೆ ಗೌರವ ಕೊಡುವ ಮುಖಾಂತರ, ನವಭಾರತದ ನಿರ್ಮಾಣಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಬೇಕಿದೆ. ಇಡೀ ದೇಶದಲ್ಲಿ ಈ ಸಂವಾದ ನಡೆಯುತ್ತಿದೆ. ಜನಗಣತಿಯ ಸಂಕಲ್ಪವನ್ನ ಕೇಂದ್ರ ಮಾಡಿದೆ. ಒಂದು ಗಣತಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಹೇಗೆ ತೊಡಲಾಳುತ್ತಿದೆ ಎಂಬುದು ರಾಜ್ಯದ ಜನ ನೋಡುತ್ತಿದ್ದಾರೆ ಎಂದು ಜರಿದರು. 

ಬರುವ ಚುನಾವಣೆಗೆ ಹೆಚ್ಚಿನ‌ಗಮನ ಕೊಡಬೇಕು. ಚುನಾವಣೆನೇ ರಾಜಕೀಯ ಪಕ್ಷಕ್ಕೆ ಮಾನದಂಡವಾಗಿದೆ ಎಂದರು.

Elections are the criterion

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close