SUDDILIVE || SHIVAMOGGA
ನನ್ನನ್ನ ಟೀಕಿಸುವವರಿಗೆ ನಮ್ಮಮಕ್ಕಳು ಉತ್ತರ ನೀಡಿದ್ದಾರೆ-ಮಧು ಬಂಗಾರಪ್ಪ-Our children have given an answer to those who criticize me - Madhu Bangarappa
ಎರಡು ವರ್ಷ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದು, ಫೋಕಸ್ ಇಟ್ಟುಕೊಂಡು ಕೆಲಸ ಮಾಡಲಾಗಿತ್ತು. ಬೀಜ ಬಿತ್ತನೆಯಾಗಿ ಗೊಬ್ಬರ ಹಾಕಿದ ಮೇಲೆ ಫಲ ಸಿಗುವ ಇಲಾಖೆಯಾಗಿರುವುದರಿಂದ ತಕ್ಷಣಕ್ಕೆ ಫಲ ಕೊಡುವ ಇಲಾಖೆಯಲ್ಲ ನನ್ನದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ಸಿಎಂ ಡಿಸಿಎಂ ಕೆಲಸ ಮಾಡಲು ಹೇಳಿದ್ದಾರೆ. ಸಂವಿಧಾನ ಪೀಠಿಕೆ, ಫ್ರೀ ಎಕ್ಸಾಮ್, ವೆಬ್ ಕಾಸ್ಟಿಂಗ್ ಇವೆಲ್ಲಾ ಮಾಡಿದಾಗ ಟೀಕೆ ಟಿಪ್ಪಣಿ ಬಂದಿತ್ತು. ಗ್ರೇಸ್ ಮಾರ್ಕ್ ನೀಡುವ ವಿಚಾರದಲ್ಲಿ ಟೀಕಾಟಿಪ್ಪಣಿ ಬಂದಿತ್ತು. ಎರಡನೇ ಪರೀಕ್ಷೆಯಲ್ಲಿ 70% ಪಾಸ್ ಆಗೊದ್ದಾರೆ. ಪರೀಕ್ಷೆಯ ಶುಲ್ಕ ಪಡೆದಿರಲಿಲ್ಲ. ದೇಶದಲ್ಲಿ ಫ್ರೀ ಎಕ್ಸಾಂ ಪಾಲಿಸಿ ಮಾಡಿರುವುದು ನಾವು ಒಬ್ಬರೇ ಎಂದರು.
ಟೀಕೆ ಮಾಡುವವರಿಗೆ ನಮ್ಮಮಕ್ಕಳು ಉತ್ತರ ನೀಡಿದ್ದಾರೆ.
ಟೀಕಾಟಿಪ್ಪಣಿ ಮಾಡಿದವರಿಗೆ ನನ್ನ ಕೆಲಸ ಉತ್ತರ ನೀಡಿದೆ. ನನ್ನ ಹೇರ್ ಸ್ಟೈಲು, ಭಾಷೆಗಳ ಬಗ್ಗೆ ಹಗೂರವಾಗಿ ಮಾತನಾಡಲಾಗಿತ್ತು. ಟೀಕೆ ಮಾಡಿದವರಿಗೆ ಉತ್ತರ ನಾನು ಕೊಟ್ತಾಯಿಲ್ಲ. ಮಕ್ಕಳು ಉತ್ತರ ಕೊಟ್ಟಿದ್ದಾರೆ. ಪ್ರಸ್ತುತ ವರ್ಷದಲ್ಲಿ 84 ಸಾವಿರ ಮಕ್ಕಳು ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂದರು.
SSLC ಪರೀಕ್ಷೆಯಲ್ಲಿ 36% ಸರ್ಕಾರಿ ಶಾಲೆ ಮಕ್ಕಳು ಎರಡನೇ ಪರೀಕ್ಷೆಯಲ್ಲಿ ಪಾಸ್ ಆಹಿದ್ದಾರೆ ತಲಾ 28% ಖಾಸಗಿ ಮತ್ತು ಅನುದಾನಿತ ಶಾಲೆ ಮಕ್ಕಳು ಪಾಸ್ ಆಗಿದ್ದಾರೆ. ಮಕ್ಕಳನ್ನ ಶಾಲೆಗೆ ಸೇರಿಸುವುದು ಸಾಧನೆಯಲ್ಲ. ದಿನ ಶಾಲೆಗೆ ಕಳುಹಿಸುವುದು ಸವಾಲು ಎಂದರು.
ಕ್ಯಾನ್ಸರ್ ಮಕ್ಕಳಿಗೆ ಶಿಕ್ಷಣ
ಕ್ಯಾನ್ಸರ್ ರೆಸಿಡೆನ್ಷಿಲ್ ಶಾಲೆ ಆರಂಭಿಸುವ ಯೋಜನೆಯಿದೆ. 3500 ಜನ ಮಕ್ಕಳಲ್ಲಿ ಕ್ಯಾನ್ಸರ್ ಇರುವುದಾಗಿ ಅಂದಾಜಿರುತ್ತದೆ. ಕ್ಯಾನ್ಸರ್ಕ್ಯೂರಬಲ್ ಆಗಿರುವುದರಿಂದ ಚಿಕಿತ್ಸೆಯ ಜೊತೆಗೆ ಶಿಕ್ಷಣ ನೀಡಲಾಗುತ್ತಿದೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಬಳಿ ಆರಂಭಿಸುವ ಯೋಚಿಸಲಾಗುತ್ತಿದೆ. ಎನ್ ಜಿಒ ಅವರ ಜೊತೆ ಇದನ್ನ ಮಾಡಲಾಗುತ್ತಿದೆ. 1500 ಮಕ್ಕಳಿಗೆ ಕ್ಯಾನ್ಸರ್ ಮಕ್ಕಳಿಗೆ ಶಾಲೆ ಆರಂಭಿಸಕಾಗುತ್ತಿದೆ. ಮಿನಿ ಬಸ್ ಮತ್ತು ಕಾರಿನಲ್ಲಿ ಬರುತ್ತಾರೆ. ಪ್ರೈಮರಿಯಿಂದ SSLCಯ ವರೆಗೆ ತರಗತಿಗಳಿರುತ್ತದೆ. ಕಟ್ಟಡ ಸಿಕ್ಕರೆ ಈ ಜುಲೈನಲ್ಲೇ ಆರಂಭಿಸುವ ಯೋಚನೆಯಿದೆ ಎಂದು ತಿಳಿಸಿದರು.
ಡಯಟ್ ಶಿಕ್ಷಕರಿಗೆ ಸೂಚನೆ
ಇನ್ ಫೋಸಿಸ್ ನಿಂದ 200 ಕೋಟಿ ಬಂಡವಾಳ ಹೂಡಲು ಮುಂದಾಗಿದ್ದಾರೆ. ಡಾಯಟ್ ನ ಶಿಕ್ಷಕರಿಗೆ ಜಿಲ್ಲೆಯ ವರ್ಸ್ಟ್ ಶಾಲೆಯನ್ನ ಅಭಿವೃದ್ದಿ ಪಡಿಸುವ ಗುರಿಯನ್ನ ನೀಡಾಗುತ್ತಿದೆ. ಇಲ್ಲವೆಂದರೆ ಆ ಶಿಕ್ಷಕರು ಡಯಟ್ ನಿಂದ ಹೊರ ಹೋಗಲಿದ್ದಾರೆ. ಕೆಲ ಶಾಲೆಯಲ್ಲಿ ಸ್ಟ್ಯೂಡಿಯೋವನ್ನ ಆರಂಭಿಸಲಾಗುತ್ತಿದೆ. ಅಜೀಜ್ ಪ್ರೇಂಜಿ ಮತ್ತು ಇನ್ ಫೋಸಿಸ್ ನ ಜೊತೆ 15 ಸಾವಿರ ಶಿಕ್ಷಣ ತರಬೇತಿ ನೀಡಲಾಗುತ್ತಿದೆ ಎಂದ ಸಚಿವರಿಗೆ ಮಾಧ್ಯಮದವರು ಡಯಟ್ ನವರು ನಮಗೆ ಸಹಾಯ ಮಾಡುತ್ತಿಲ್ಲ ಎಂಬ ದೂರಿದೆ ಎಂಬ ಪ್ರಶ್ನೆಗೆ ನನ್ನ ಗಮನಕ್ಕೆ ಬಂದಿಲ್ಲ ಕ್ರಮ ಜರುಗಿಸುವೆ ಎಂದರು.
ದ್ವಿಭಾಷ ಶಿಕ್ಷಣಕ್ಕೆ ಹೆಚ್ಚು
ಕೆಲ ಶಾಲೆಗಳು ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೆಲ ಶಾಲೆಗಳ ಕೊರತೆಯಿತ್ತು. ಅದನ್ನ ಆರಂಭಿಸಲಾಗುತ್ತಿದೆ. ದ್ವಿಭಾಷ ವಿದ್ಯಾಭ್ಯಾಸ ಮಾಡಲು ಯೋಚಿಸಲಾಗುತ್ತಿದೆ. ಇದರಿಂದ ಮಕ್ಕಳು ಬೇರೆಡೆ ಹೋಗುತ್ತಿದ್ದರು. ಇದು ವೇಗವಾಗಿ ಹೋಗ್ತಾಯಿದೆ. ಈ ವರ್ಷನೇ ಬ್ರೇಕ್ ಬೀಳುವ ಬಗ್ಗೆ ಗ್ಯಾರೆಂಟಿಯಾಗಿ ಹೇಳಲಾಗುವುದಿಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಆಸ್ಪತ್ರೆ ಪ್ರತ್ಯೇಕಿಸಲಾಗವುದು.
ಜಿಲ್ಲಾ ಆಸ್ಪತ್ರೆ ಮೆಡಿಕಲ್ ಶಿಕ್ಷಣದ ವ್ಯವಸ್ಥೆಯೊಂದಿಗೆ ಆಸ್ಪತ್ರೆ ನಡೆಯುತ್ತಿದೆ. ಮೆಗ್ಗಾನ್ ಆಸ್ಪತ್ರೆಯನ್ನ ಪ್ರತ್ಯೇಕಿಸಿ ಎಂದಿರುವೆ. ಇಲ್ಲವೆಂದರೆ ಸಿಟಿಯಲ್ಲೇ ಮತ್ತೊಂದು ಜಿಲ್ಲಾ ಆಸ್ಪತ್ರೆ ಆರಂಭಿಸಲಾಗುವುದು. ಜಿಲ್ಲಾಡಳಿತ ಮತ್ತು ಜಿಲ್ಲಾ ಆಸ್ಪತ್ರೆಯನ್ನ ಪ್ರತ್ಯೇಕಿಸಲಾಗುವುದು ಎಂದರು
Our children have given an answer