SUDDILIVE || SHIVAMOGGA
ಬಾವಿಗೆ ಬಿದ್ದ ಗೋವಿನ ರಕ್ಷಣೆ-Rescue of a cow that fell into a well
ಹರಿಗೆಯ ಬಾವಿ ಒಂದರಲ್ಲಿ ಗೋವೊಂದು ಬಿದ್ದು ಜೀವ ಸಂಕಟಕದಲ್ಲಿ ಸಿಲುಕಿತ್ತು ಅದನ್ನು ಅಗ್ನಿಶಾಮಕ ದಳದವರು ರಕ್ಷಿಸಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಹರಿಕೆಯ ಟಿಎಸ್ ಡಬ್ಲ್ಯೂ ಕಾಲೋನಿಯಲ್ಲಿ ಚಂದನ್ ಎಂಬುವರ ಹಸು ಒಂದು ಮೇಲು ಹೋಗಿ ಎಂಟು ಅಡಿ ಬಾವಿಯಲ್ಲಿ ಸಿಲುಕಿಕೊಂಡಿತು ಇದನ್ನು ನೋಡಿದ ಮಂಜುನಾಥ್ ಎಂಬುವರು ತಕ್ಷಣವೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದರು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ್ದಾರೆ.
ಈ ಹಿಂದೆ ಟಿ ಎಸ್ ಡಬ್ಲ್ಯೂ ಕಾಲೋನಿಯಲ್ಲಿ ನೀರಿನ ಸಂಪರ್ಕದ ಕೊರತೆಯಿಂದಾಗಿ ಅನೇಕ ಮನೆಗಳಲ್ಲಿ ಬಾವಿಯನ್ನು ತೋಡಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದರು ಆದರೆ ಈಗ ಎಲ್ಲ ಮನೆಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಿರುವುದರಿಂದ ಈ ಬಾವಿ ಹಾಳು ಬಿದ್ದಿತ್ತು ಇಂದು ಮೇಲು ಹೋದ ಗೋವು ಬಾವಿಗೆ ಬಿದ್ದು ಸಿಲುಕಿಕೊಂಡಿತ್ತು.
ಗೋವು ರಕ್ಷಣೆ ಕಾರ್ಯಾಚರಣೆಯಲ್ಲಿ ಡಿಎಫ್ ಒ ಅಶೋಕ್ ಕುಮಾರ್, ಎಎಫ್ಎಸ್ ಟಿಒ ಮುಕ್ತುಮ್ ಉಸೇನ್, ಎಎಫ್ ಚೇತನ್, ಡಿ.ಎಂ.ಗಣೇಶ್, ಶರತ್ ಕುಮಾರ್,ನಿಹಾರ್ ಎರಿ, ಸ್ವಾಮಿ, ಪ್ರಸಾದ್ ನಾಯ್ಕ್ ಯಶಸ್ವಂತ್ ಭಾಗಿಯಾಗಿದ್ದರು.
Rescue of a cow