SUDDILIVE || BHADRAVATHI
ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡಿ ತೀರ್ಪು-Sentenced to death for murder accused
ಕೊಲೆ ಆರೋಪಿಗಳಿಗೆ ಭದ್ರಾವತಿ ನ್ಯಾಯಾಲಯವು ದಂಡ ವಿಧಿಸಿ ಶಿಕ್ಷೆಯ ತೀರ್ಪು ನೀಡಿದೆ. ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಓರ್ವನ ಹತ್ಯೆಯಾಗಿದ್ದು ಹತ್ತು ಜನರ ವಿರುದ್ಧ ಹೊಳೆ ಹೊನ್ನೂರು ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿತ್ತು. ಈ ವಿಚಾರದಲ್ಲಿ ಇಬ್ಬರನ್ನು ನ್ಯಾಯಾಲಯ ನಿರ್ದೋಷಿಗಳೆಂದು ತೀರ್ಮಾನಿಸಿ ಆದೇಶಿಸಿದರೆ, ಉಳಿದ ಏಳು ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ
ಆರೋಪಿಯು 1 ಪರಮೇಶ, ಆರೋಪಿ 2 ಜಗದೀಶ, ಆರೋಪಿ 3 ರಮೇಶ, ಆರೋಪಿ 5 ಗೌತಮ್, ಆರೋಪಿ 6 ಅಭಿಷೇಕ್ ಆರೋಪಿ 8 ವಿಕ್ರಂ, ಆರೋಪಿ 9 ಸಂಜಯ್ ಇವರುಗಳಿಗೆ ಐಪಿಸಿ ಕಲಂ 143 ರ ಅಡಿಯಲ್ಲಿ ಆರು ತಿಂಗಳ ಕಾರ್ ವಾಸ ಕಲಂ 147 ಅಡಿಯಲ್ಲಿ ಎರಡು ವರ್ಷ ಕಾರವಾಸ ಹತ್ತು ಸಾವಿರದಂಡ ಕಲಂ 148 ಐಪಿಸಿ ಅಡಿಯಲ್ಲಿ ಮೂರು ವರ್ಷ ಕಾರವಾಸ ಹದಿನೈದು ಸಾವಿರದಂಡ ಕಲಂ 54 ಐಪಿಸಿ 2 ವರ್ಷ ಕಾರವಾಸ ಹತ್ತು ಸಾವಿರ ರೂಪಾಯಿ ತಂಡ ಕಲ 341 ತಿಂಗ್ಳು ಕಾರವಾಸ ಐನೂರು ದಂಡ ಸಲಾಂ 323 ಐಪಿಸಿ ಅಡಿಯಲ್ಲಿ ಒಂದು ವರ್ಷ ಕಾರವಾಸ ಸಾವಿರರೂ ದಂಡ ಕಲಂ 324 ಐಪಿಸಿ ಅಡಿಯಲ್ಲಿ ಮೂರು ವರ್ಷ ಕಾರವಾಸ ಹದಿನೈದು ಸಾವಿರ ರೂಪಾಯಿ ದಂಡ, ಕಲಾಂ 37 ಐಪಿಸಿ ಅಡಿಯಲ್ಲಿ ಹತ್ತು ವರ್ಷ ಕಾರವಾಸ 20,000 ತಂಡ ಕಲಂ 32 ಐಪಿಸಿ ಅಡಿಯಲ್ಲಿ ಅಜೀವ ಕಾರವಾಸ 50,000 ತಂಡ ಕಲಂ 56 ಐಪಿಸಿ ಸೆಕ್ಷನ್ ಅಡಿಯಲ್ಲಿ ಎರಡು ವರ್ಷ ಕಾರವಾಸ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲವು ತೀರ್ಪು ನೀಡಿದೆ.
ಆರೋಪಿ4 ಮಂಜಪ್ಪ ಮತ್ತೋರ್ವ ಶರತ್ ರವರಿಗೆ ನ್ಯಾಯಾಲಯವು ಬಿಡುಗಡೆ ಮಾಡಿದೆ. ಜಮೀನು ವಿಚಾರದಲ್ಲಿ ನಡೆದ ಕೊಲೆಯಲ್ಲಿ ಹತ್ಯೆಗೊಳಗಾದ ಸಂತ್ರಸ್ತ ಕರಿಯಪ್ಪನವರ ಪತ್ನಿ ಗಂಗಮ್ಮನವರಿಗೆ 3 ಲಕ್ಷ ರೂಪಾಯಿ ಪರಿಹಾರ ಹಾಗೂ ಸಾಕ್ಷಿ ಒಂದು, 1 ರಿಂದ 5 ರವರೆಗೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿದೆ
ಭದ್ರಾಪುರದಲ್ಲಿ ಮಾದಾಳಪ್ಪ, ಹಾಲಪ್ಪ ಹಾಗೂ ನಾಗಪ್ಪ ಎಂಬುದರ ಜಂಟಿ ಖಾತೆಯಲ್ಲಿ 193 ಸರ್ವೆ ನಂಬರ್ ನಲ್ಲಿ 13 ಎಕರೆ 27 ಗುಂಟೆ ಜಮೀನು ಇದ್ದು ಈ ಜಮೀನನ್ನು ಮೂರು ಜನರು ಸಮಪಾಲಾಗಿ ಹಂಚಿಕೊಂಡಿದ್ದರು. ಭತ್ತದ ಗದ್ದೆಗೆ ನೀರು ಹಾಯಿಸುವ ವಿಚಾರದಲ್ಲಿ ಹಾಲಪ್ಪನ ಮಕ್ಕಳಾದ ಬಡ್ಡಿ ಪರಮೇಶ ರಮೇಶ ಮಂಜಪ್ಪ ಜಗದೀಶ ರವರ ಮಧ್ಯೆ ತಕರಾರು ಇತ್ತು. ಮಾಡಳಪ್ಪನವರ ಮಕ್ಕಳಾದ ಕರಿಯಪ್ಪ ಮಗ ನಾಗರಾಜ್ ಇವರ ಜಮೀನಿಗೆ ನೀರು ಹಾಕುವ ತಾನೇ ಮುಚ್ಚಿದ್ದರು.
ಜಮೀನಿಗೆ ಹೋಗುವಾಗ ಕರಿಯಪ್ಪನವರ ಮಗ ನಾಗರಾಜ ರನ್ನು ಬಡ್ಡಿ ಪರಮೇಶ ಜಗದೀಶ್ ರಮೇಶ್, ಗೌತಮ್, ಅಭಿಷೇಕ್, ವಿಕ್ರಂ, ಸಂಜಯ್, ಕೃತಿಕ್, ಅಡ್ಡ ಹಾಕಿ ಹಲ್ಲೆ ನಡೆಸಿದರು ಇದನ್ನು ಬಿಡಿಸಲು ಬಂದಿದ್ದ ಕರಿಯಪ್ಪನವರನ್ನು ಮೇಲಿನ ಆರೋಪಿಗಳು ಕೊಲೆ ಮಾಡಿದ್ದರು.
ಘಟನೆಗೆ ಕುರಿತಂತೆ ತನಿಖಾ ಅಧಿಕಾರಿಗಳಾದ ಇವ ಮಂಜುನಾಥ್ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ಆರ್ ಎಲ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ರತ್ನಮ್ಮ ಪಿ ರವರು ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಮಾನ್ಯನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರದ ಶ್ರೀಮತಿ ಇಂದಿರಾ ಮೈಲಾಸ್ವಾಮಿ ಸ್ವಾಮಿ ಚಟ್ಟಿಯಾರ್ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
Sentenced to death for murder accused