SUDDILIVE || SORABA
ಕಾರ ಹುಣ್ಣಿಮೆ-ಚಂದ್ರಗುತ್ತಿಯಲ್ಲಿ ವಿಶೇಷ ಪೂಜೆ-Special puja on the day of Kara Hunnime in Chandragutti
ತಾಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಬುಧವಾರ ಶ್ರದ್ಧಾಭಕ್ತಿಯಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕು ಸೇರಿದಂತೆ ಹಿರೇಕೆರೂರು ಬ್ಯಾಡಗಿ ರಾಣೇಬೆನ್ನೂರು ಶಿಕಾರಿಪುರ ಹಾವೇರಿ ಹಾನಗಲ್ ಚಿತ್ರದುರ್ಗ ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವಿ ರೇಣುಕಮ್ಮನ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಪರಿವಾರ ದೇವರಾದ ನಾಗದೇವತೆ ಮಾತಂಗಿ ಕಾಲಭೈರವ ಪರಶುರಾಮ ತ್ರಿಶೂಲ ಭೈರಪ್ಪ ಹಾಗೂ ತೊಟ್ಟಿ ಬಾವಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು ಧಾರ್ಮಿಕ ಪೂಜಾ ವಿಧಿ ವಿಧಾನಗಳಾದ ಪಡ್ಲಿಗೆ ತುಂಬಿಸುವುದು ಕಿವಿ ಚುಚ್ಚಿಸುವುದು ಸೇರಿ ವಿವಿಧ ಸೇವೆಯನ್ನು ನಡೆಸಲಾಯಿತು ಜನ ಹಾಗೂ ವಾಹನಗಳ ದಟ್ಟಣೆಯಿಂದ ಮುಖ್ಯರಸ್ತೆಯಲ್ಲಿ ಕೆಲಸಕ್ಕೆ ತೊಂದರೆ ಉಂಟಾಗಿತ್ತು.
Special puja on the day of Kara Hunnime in Chandragutti