ತುಮರಿ ಭಾಗದಲ್ಲಿ ನಡೆದ ಘಟನೆಗೆ ತಿರುವು, ಹೋರಾಟಗಾರಿಂದ ತೀವ್ರ ವಿರೋಧ-The incident in Tumari area took a turn

 SUDDILIVE || SHIVAMOGGA

ತುಮರಿ ಭಾಗದಲ್ಲಿ ನಡೆದ ಘಟನೆಗೆ ತಿರುವು, ಹೋರಾಟಗಾರಿಂದ ತೀವ್ರ ವಿರೋಧ-The incident in Tumari area took a turn, with strong opposition from activists

Tumari, turn


ತುಮರಿ ವನ್ಯಜೀವಿ ಅರಣ್ಯದಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವನ್ಯಜೀವಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಆರೋಪದ ಅಡಿ ಬಂಧಿಸಿರುವ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಅರಣ್ಯ ಡಿಆರ್ ಎಫ್ ಮತ್ತು ಇಬ್ಬರು ಗಾರ್ಡ್ ಗಳ ವಿರುದ್ಧವೇ ಆರೋಪಿಗಳ ಮೆಡಿಕಲ್ ರಿಪೋರ್ಟ್ ಮೇಲೆ ದೂರು ದಾಖಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ಇಂದು ದೂರು ದಾಖಲಾಗಿದೆ. 

ಮೇ 31 ರಂದು ಶರಾವತಿ ಸಿಂಘಳಿಕ ಅಭಯಾರಣ್ಯದ ವ್ಯಾಪ್ತಿಯಲ್ಲಿ ಏಕ ನಳಿಕ 2 ಬಂದೂಕಿನೊಂದಿಗೆ ವಳಗೆರೆ ಗ್ರಾಮದ ಸರ್ವೆ ನಂಬರ್ 436 ರಲ್ಲಿ ವನ್ಯ ಜೀವಿ ಪ್ರಾಣಿಗಳನ್ನ‌ ಭೇಟೆ ಆಡಲು ಪತ್ನಿಸಿದ ಆರೋಪದ ಅಡಿ ಮೂವರು ವ್ಯಕ್ತಿಗಳನ್ನ ಅರಣ್ಯ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿತ್ತು. 

ಇವರಿಂದ ಎರಡು ನಳಿಕೆ, ಮಸಿ ಚೀಲ, ಸೀಸದ ಬಾಲ್ಸ್, ಲೆಡ್ ಪೌಡರ್ ಬಾಟಲ್, ಕತ್ತಿ, ಕೇಪ್ ಬಾಟೆಲ್, ಕಪ್ಪು ಬಣ್ಣದ ಹೆಡ್ ಟಾರ್ಚ್ ಮತ್ತು ಎರಡು ಬೈಕ್ ಗಳನ್ನ ವಶಕ್ಕೆ ಪಡೆದು ಅವರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸಾಗರ ತಾಲೂಕಿನ ಕೆರೂರು ಗ್ರಾಮದ ಮಂಜುನಾಥ್, ರಾಮು ಬಿನ್ನ ಮಂಜು ಪೂಜಾರಿ ಮತ್ತು ಘಟನೆಯಲ್ಲಿ ಆದಿ ಬಿನ್ ಅಶೋಕ ಎಂಬಾತನು ತಪ್ಪಿಸಿಕೊಂಡಿದ್ದ.  

ಬಂಧಿಸಲ್ಪಟ್ಟ ಇಬ್ಬರು ಆರೋಪಿಗಳಿಗೆ ಜೂ.1 ರಿಂದ ಜೂ.15 ರವರೆಗೆ ಇವರನ್ನ‌ ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿತ್ತು. ನ್ಯಾಯಾಂಗ ಬಂಧನ ಮುಕ್ತಾಯಗೊಂಡ ನಂತರ ಜಾಮೀನುಪಡೆದುಕೊಂಡು ಆರೋಪಿಗಳು ಹೊರ ಬಂದಿದ್ದಾರೆ. ಹೊರ ಬಂದ ವ್ಯಕ್ತಿಗಳಿಗೆ  ದಿಡೀರ್ ಎಂದು ನೋವು ಕಾಣಿಸಿಕೊಂಡಿದ್ದು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿದ್ದು ಇದಕ್ಕೆ ಅರಣ್ಯ ಡಿಆರ್ ಎಫ್ ಮತ್ತು ಇಬ್ಬರು ಗಾರ್ಡ್ ಗಳಿಂದ ಈ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿ ಕಾರ್ಗಿಲ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಈಗ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿತ್ತು. ಈಗ ಅದು ದೂರು ದಾಖಲಾಗದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಹೋರಾಟಗಾರ ಜೋಸೆಫ್ ಹೂವರ್ ಈ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಕಳ್ಳನೇ ಪೊಲೀಸರ ವಿರುದ್ಧ ದೂರು ಕೊಡುವ ವ್ಯವಸ್ಥೆ ಬದಲಾಗಬೇಕಿದೆ. ಈ ದೂರು ಅರಣ್ಯ ಅಧಿಕಾರಿಗಳ ಮನೋಬಲವನ್ನ ಕುಗ್ಗಿಸುವಂತಾಗಿದೆ. 15 ದಿನಗಳ ನಂತರ ಕಾಣಿಸಿಕೊಂಡ ಉಸಿರಾಟದ ತೊಂದರೆಗೆ ಅರಣ್ಯ ಅಧಿಕಾರಿಗಳು ಹೇಗೆ ಕಾರಣವಾಗುತ್ತದೆ ಎಂದು ಪ್ರಸ್ನಿಸಿದ್ದಾರೆ. 


The incident in Tumari area took a turn


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close