SUDDILIVE || HOLEHONNURU
ರಸ್ತೆ ಗುಂಡಿಯನ್ನ ಮುಚ್ಚಿದ ಗ್ರಾಮಸ್ಥರು-The villagers covered the pothole
ಸಮೀಪದ ಇಟ್ಟಿಗೆಹಳ್ಳಿಯ ರಸ್ತೆಯ ಗುಂಡಿಗಳನ್ನು ಮಂಗಳವಾರ ಗ್ರಾಮಸ್ಥರೆ ಮುಚ್ಚಿಕೊಂಡು ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.
ಇಟ್ಟಿಗೆಹಳ್ಳಿ – ಆನವೇರಿ ರಸ್ತೆ ಗುಂಡಿ ಬಿದ್ದು ಓಡಾಟಕ್ಕೆ ಬಾರದಾಗಿತ್ತು. ರಸ್ತೆ ದುರಸ್ತಿ ಮಾಡುವಂತೆ ಕಳೆದೊಂದು ವರ್ಷದಿಂದ ಹತ್ತಾರು ಬಾರಿ ಲೋಕೊಪಯೋಗಿ ಇಲಾಖೆ ಸೇರಿದಂತೆ ಸಂಬAದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿದರೆ ಮತ್ಯಾವ ವಾಹನಗಳು ಸಲೀಸಾಗಿ ಓಡಾಡದಷ್ಟು ರಸ್ತೆ ದುಸ್ಥರವಾಗಿತ್ತು. ರಸ್ತೆ ಗುಂಡಿಯಲ್ಲಿ ಶಾಲಾ ವಾಹನವೊಂದು ಸಿಲುಕಿದು ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು.
ನಿತ್ಯ ಗ್ರಾಮಕ್ಕೆ ಬರುವ ಶಾಲಾ ಬಸ್ಗಳು ಸೇರಿದಂತೆ ವಾಹನಗಳ ಓಡಾಟ ಸಮಸ್ಯೆಯನ್ನು ಮನಗಂಡ ಕೆಲ ಯುವಕರು. ಇಟ್ಟಿಗೆಹಳ್ಳಿ ಗ್ರಾಮದ ತಮ್ಮೂರಿನ ಗ್ರಾಪಂ ಸದಸ್ಯರಾದ ತಿಪ್ಪೇಶ್ ಹಾಗೂ ಪ್ರಭು ಮಮತ ಸಹಯೋಗದಲ್ಲಿ ಹಣ ಹೊಂದಿಸಿಕೊAಡು ಕಳೆದ ಎರಡು ದಿನಗಳಿಂದ ಜಿಸಿಬಿ ಯಂತ್ರ ಬಳಸಿ ರಸ್ತೆ ಬದಿ ತ್ಯಾಜ್ಯಾವನ್ನು ಹಿಂದಕ್ಕೆ ತಳ್ಳಿಸಿದ್ದಾರೆ. ತಾವೇ ಗುದ್ದಲಿ ಹಿಡಿದು ರಸ್ತೆಯ ಗುಂಡಿಗಳಲ್ಲಿ ನಿಂತೊದ ನೀರನ್ನು ಬಸಿದಿದ್ದಾರೆ. ಗ್ರಾಮಸ್ಥರೆ ಪುಟ್ಟಿಯಲ್ಲಿ ಜಲ್ಲಿ ಕಲ್ಲು ಮಿಶ್ರಣ ಹೊತ್ತು ಗುಂಡಿಗಳಿಗೆ ಸುರಿದು ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ. ಒಂದು ಲಾರಿ ಲೋಡ್ ಜಲ್ಲಿ ಕಲ್ಲು, ಎಂ ಸ್ಯಾಂಡ್ ಹಾಗೂ ಸಿಮೆಂಟ್ ಮಿಕ್ಸ್ಅನ್ನು ಗುಂಡಿಗಳಿಗೆ ಸುರಿದಿದ್ದಾರೆ. ೩೦ ಸಾವಿರ ವ್ಯಚ್ಚದಲ್ಲಿ ಗುಂಡಿ ಮುಚ್ಚಿ ರಸ್ತೆಯನ್ನು ಅಚ್ಚುಕಟ್ಟಾಗಿ ದುರಸ್ತಿ ಮಾಡಿಕೊಂಡಿದ್ದಾರೆ. ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆಗೆ ವ್ಯಕ್ತ ಪಡಿಸಿದ್ದಾರೆ.
ಗ್ರಾಪಂ ಸದಸ್ಯ ತಿಪ್ಪೇಶ್, ನೀರುಗಂಟಿ ಪರುಶು, ರಂಗನಾಥ್, ರವಿಕುಮಾರ್, ನಾಗರಾಜ್, ಸುನೀಲ್, ದೇವೇಂದ್ರ, ಮಲ್ಲೇಶ್, ಮನು, ಸುರೇಶ್, ಯಶ್ವಂತ್, ಕುಮಾರ್, ಮಧು, ರುದ್ರೇಶ್, ಪ್ರಭು, ಯೋಗೇಶ್, ಹನುಮಂತ, ಶಿವರಾಜ್, ಶರತ್, ಪ್ರಸನ್ನ, ವಿನಯ್ ಇತರರಿದ್ದರು.
The villagers covered the pothole