ad

ಕುಮಾರ್ ಬಂಗಾರಪ್ಪನವರ ಪೋಸ್ಟ್ ಗೆ ಈ ಸ್ಪಷ್ಠೀಕರಣನಾ?This clarification for Kumar Bangarappa's post

 SUDDILIVE || SHIVAMOGGA

ಕುಮಾರ್ ಬಂಗಾರಪ್ಪನವರ ಪೋಸ್ಟ್ ಗೆ ಈ ಸ್ಪಷ್ಠೀಕರಣನಾ?This clarification for Kumar Bangarappa's post

Kumar Bangarappa, clarification


ಗೋಮಾತೆಯ ಕೆಚ್ಚಲು ಕತ್ತರಿಸಿದ ಪ್ರಕರಣದ ಬಗ್ಗೆ ಸುದ್ದಿ ಹರಿದಾಡಿದ ಬೆನ್ನಲ್ಲೇ ಮಾಜಿ ಸಚಿವ ಕುಮಾರ ಬಂಗಾರಪ್ಪ ಸಾಮಾಜಿಕ ತಾಣದಲ್ಲಿ ಪೋಸ್ಟನ್ನ ಹರಿಬಿಟ್ಟಿದ್ದರು. ಈಗ ಪೊಲೀಸ್ ಇಲಾಖೆ ಈ ಪ್ರಕರಣದ ತೀವ್ರತೆ ಅರಿತು ಸ್ಪಷ್ಟೀಕರಣ ನೀಡಿದೆ. 

ಗೋಮಾತೆ ಮೇಲಿನ ಮತ್ತೊಂದು ರಾಕ್ಷಸಿ ಕೃತ್ಯ! ಶಿವಮೊಗ್ಗದ ಹೊಸನಗರ ತಾಲ್ಲೂಕಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ ಖಂಡನೀಯ. ಈ ಹಿಂದೆಯೂ ಚಾಮರಾಜಪೇಟೆ, ರಾಮನಗರ, ಹೊನ್ನಾವರದಲ್ಲಿ ಇದೇ ಮಾದರಿಯ ದಾಳಿಗಳು ನಡೆದಿದ್ದವು.

ಇದು ಒಬ್ಬರ ಕೃತ್ಯ ಅಲ್ಲ, ಮತಾಂಧ ಶಕ್ತಿಗಳ ಸಂಚು. ಕಾಂಗ್ರೆಸ್ ಸರ್ಕಾರದ ದುರ್ಬಲತೆ ಹಾಗೂ ಓಲೈಕೆ ರಾಜಕಾರಣ ಈ ರಕಾಸಿಗಳನ್ನು ಧೈರ್ಯವಂತಳಿಸಿದೆ. ಸಿಎಂ ಸಿದ್ದರಾಮಯ್ಯ ಅವರೇ ಇದನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವರು ಪತ್ರಿಕೆಯ ಸುದ್ದಿಯನ್ನ ಪೋರ್ಟ್ ಮಾಡಿ ಟೆಕ್ಸ್ಟ್ ಮಾಡಿದ್ದರು. 

ಇದರ ತೀವ್ರತೆ ಅರಿತ ಪೊಲೀಸ್ ಇಲಾಖೆ ಸ್ಪಷ್ಟೀಕರಣ ನೀಡಿದೆ. ಹೊಸನಗರದ ವಿಜಯಪುರ ಗ್ರಾಮದಲ್ಲಿ ನವೀನ್ ಎಂಬುವರ ಹಸು ರಾಮಚಂದ್ರ ನಾಯ್ಕರ ತೋಟಕ್ಕೆ ನುಗ್ಗಿ ದಾಂದ್ಲೆ ಮಾಡಿದ ಪರುಣಾಮ ರೊಚ್ಚಿಗೆದ್ದ ರಾಮಚಂದ್ರ ನಾಯ್ಕ್ ಕೆಚ್ಚಲು ಕತ್ತರಿಸಿದ್ದರು. ಇದರಿಂದ ಪೊಲೀಸರು ರಾಮಚಂದ್ರರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. 

This clarification for Kumar Bangarappa's post

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close