SUDDILIVE || SHIVAMOGGA
ಪ್ರಮೋದನ ಮನೆಗೆ ಮಚ್ಚು ಲಾಂಗು ಹಿಡಿದುಕೊಂಡು ನುಗ್ಗಿದ ವಿಶ್ವನ ಹುಡುಗರು- Vishwa's boys barged into Pramodan's house with maces and longbows.
ಭದ್ರಾವತಿಯಲ್ಲಿ ಮುದ್ದ ಯಾನೆ ವಿಶ್ವ ಮತ್ತು ಪ್ರಮೋದ್ ಯಾನೆ ಗಾಂಧಿ ಇವರ ನಡುವಿನ ತಿಕ್ಕಾಟ ಮುಂದುವರೆದಿದೆ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಇಬ್ಬರೂ ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಭದ್ರಾವತಿ ಜನರಲ್ಲಿ ಆತಂಕ ಮೂಡಿಸಿದೆ
ಭದ್ರಾವತಿಯ ವಿಶ್ವ ಯಾನೆ ಮುದ್ದ ಮತ್ತು ಪ್ರಮೋದ್ ಯಾನೆ ಗಾಂಧಿ ಅವರ ನಡುವಿನ ತಿಕ್ಕಾಟ ಎಫ್ ಐ ಆರ್ ದಾಖಲಾದರೂ ಸಹ ರಾಜಕೀಯದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕೂಗು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ. ಮಾಹಿತಿಯ ಪ್ರಕಾರ ವಿಶ್ವ ಮತ್ತು ಪ್ರಮೋದ್ ರ ನಡುವಿನ ಜಗಳ ಕುರಿತಂತೆ ಭದ್ರಾವತಿ ವಿವಿಧ ಠಾಣೆಗಳಲ್ಲಿ ಇದು ನಾಲ್ಕನೇ FIR ಆಗಿದೆ. ಅಟ್ರಾಸಿಟಿ ಮತ್ತು ಇತರೆ ವಿಚಾರದಲ್ಲಿ ಎರಡು ಪ್ರತ್ಯೇಕ ಅಪಾಯಗಳಿವೆ. ಆದರೂ ಸಹ ಕ್ರಮವಾಗದೆ ಇರುವುದು ಬಗ್ಗೆ ಪೊಲೀಸರ ಮೌನ ಏಕೆ ಎಂಬುದು ತಿಳಿದು ಬರಬೇಕಾಗಿದೆ
ಪ್ರಮೋದರ ಮನೆಗೆ ವಿಶ್ವಯಾನೆ ಮುದ್ದ ಈತನ ಹಿಂಬಾಲಕರು ಮಚ್ಚನ್ನು ಹಿಡಿದುಕೊಂಡು ಹೋಗಿ ಪ್ರಮೋದ್ ಅವರ ಪತ್ನಿಗೆ ಹೆದರಿಸಿರುವುದು ಈಗ ಎಫ್ ಐ ಆರ್ ಆಗಿದೆ. ಹೊಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಮೋದರ ಪತ್ನಿ ದೂರು ದಾಖಲಿಸಿ ಕೊಂಡಿದ್ದಾರೆ. ಪ್ರಮೋದ್ ಕಳೆದ ಒಂದು ತಿಂಗಳಿಂದ ಮನೆಯಲ್ಲಿ ಇಲ್ಲದೆ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದಾರೆ
ಆದರೆ ಜೂನ್ 16 ರಂದು ತಡರಾತ್ರಿ ಮುದ್ದ ಯಾನೆ ವಿಶ್ವ ಈತನ ಇಬ್ಬರೂ ಹಿಂಬಾಲಕರು ಬಂದು ಮೆಚ್ಚು, ಲಾಂಗು ಗಳನ್ನು ತೋರಿಸಿ ಪ್ರಮೋದನನ್ನು ಹೊರಗೆ ಕಳುಹಿಸು ಎಂದು ಹೇಳಿರುವುದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮನೆಯಲ್ಲಿ ಅವರು ಇಲ್ಲ ಬಂದಮಲೆ ಬನ್ನಿ ಎಂದು ಪತ್ನಿ ತಿಳಿಸಿದ್ದು, ಅವನು ನಮ್ಮ ಕೈಗೆ ಸಿಕ್ಕರೆ ಒಡೆದು ಸಾಯಿಸುವುದಾಗಿ ಬೆದರಿಕೆ ಹಾಕಿ ಮಚ್ಚನ್ನು ತೋರಿಸಿ ಹೋಗಿದ್ದಾರೆ. ನಂತರ ಪೊಲೀಸರು ಮನೆಯ ಬಳಿ ಬಂದಾಗ ಸಿಸಿಟಿವಿ ಪರಿಶೀಲಿಸಿದರು
ನಂತರ ಪ್ರಮೋದ್ ಅವರ ಮೊಬೈಲಿಗೆ ಸಿಸಿಟಿವಿ ಕ್ಯಾಮೆರಾದ ತುಣುಕುಗಳನ್ನು ಪತ್ನಿ ಮೊಬೈಲಿಗೆ ಕಳಿಸಿದ್ದಾರೆ. ಇದನ್ನು ನೋಡಿದ ಪ್ರಮೋದ್ ಮಚ್ಚು ಹಿಡಿದುಕೊಂಡು ಬಂದ ಹಿಂಬಾಲಕರಿಗೂ ಧಮ್ಕಿಹಾಕಿರುವುದಾಗಿ ಪತ್ನಿ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ
ಕೋಟೇಶ ಮತ್ತು ನವೀನ ಎಂದು ಪ್ರಮೋದ್ ಪತ್ನಿಗೆ ತಿಳಿಸಿರುವುದಾಗಿಯೂ ಸಹ ದೂರಿನಲ್ಲಿ ಉಲ್ಲೇಖವಾಗಿದೆ.
Vishwa's boys barged into Pramodan's house