SUDDILIVE || SHIVAMOGGA
ಮಹಾನಗರ ಪಾಲಿಕೆ ವತಿಯಿಂದ ವಿಶ್ವಪರಿಸರ ದಿನಾಚರಣೆ-ಪ್ಲಾಸ್ಟಿಕ್ ನಿಂದ ದೂರ ಇರುವಂತೆ ಆಯುಕ್ತರ ಕರೆ-World Environment Day celebrated by the Metropolitan Corporation - Commissioner calls for staying away from plastic
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯುಕ್ತರಾದ ಕವಿತಾ ಯೋಗಪ್ಪನವರ ಅಧ್ಯಕ್ಷತೆಯಲ್ಲಿ ಇಂದು ಎಲ್ ಬಿಎಸ್ ನಗರದಲ್ಲಿರುವ ಕೃಷ್ಣ ಮಠ ಪಾರ್ಕ್ ನಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಪಾಲಿಕೆ ಆಯುಕ್ತ ಕವಿತಾ ಯೋಗಪ್ಪನವರ್ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕರೆ ನೀಡಿದರು. ಪ್ಲಾಸ್ಟಿಕ್ ಫೋನ್ ಪ್ಲಾಸ್ಟಿಕ್ ಬ್ಯಾಗ್ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಜಾನುವಾರುಗಳು ಮತ್ತು ಮನುಷ್ಯರಲ್ಲಿ ಆಗುತ್ತಿರುವ ಆರೋಗ್ಯದಲ್ಲಿ ಏರುಪೇರುಗಳ ಬಗ್ಗೆ ವಿವರಿಸಿದರು.
ಮೈಕ್ರೋ ಪ್ಲಾಸ್ಟಿಕಿನಂತಹ ವಸ್ತುಗಳು ನೀರಿಗೆ ಸೇರುವುದರಿಂದ ಕ್ಯಾನ್ಸರ್ ಅಂತ ಮಾರಕ ರೋಗಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು ಗಿಡ ಮರ ಪಕ್ಷಿ ಪ್ರಾಣಿಗಳ ಜೊತೆಗೆ ಮನುಷ್ಯರ ಬದುಕು ಸಾಗಬೇಕು ಇದು ನಾಗರಿಕ ಸಮಾಜದ ಕರ್ತವ್ಯವೆಂದು ತಿಳಿಸಿದರು.
ಇದೇ ವೇಳೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಲವಗೊಪ್ಪದಲ್ಲಿರುವ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ (ಜಲಮೂಲ)ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಯಿತು.
ಈ ವೇಳೆ ಪಾಲಿಕೆ ಎಇಇ ಪುಷ್ಪಾವತಿ, ವೈದ್ಯರಾದ ಡಾ.ರೇಖಾ, ಸಮನ್ವಯ ಕಾಶಿ ಮೊದಲಾದ ಪಾಲಿಕೆ ಅಧಿಕಾರಿಗಳು ಮತ್ತು ಪರಿಸರವಾದಿಗಳು ಭಾಗಿಯಾಗಿದ್ದರು.
World Environment Day celebrated by the Metropolitan Corporation