SUDDILIVE || SHIVAMOGGA
ಆರ್ ಸಿಬಿಗೆ ಗೆಲವು ಸಾಧಿಸಲಿ ಎಂದು ದೇವರಿಗೆ ವಿಶೇಷ ಪೂಜೆ-Special prayers to God for RCB's victory
ಟಿ20- ೨೦೨೫ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡ ಗೆಲ್ಲಲೆಂದು ರಾಷ್ಟ್ರಭಕ್ತರ ಬಳಗದ ಮುಖಂಡ ಹಾಗೂ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಈ ವಿಶ್ವಾಸ್ ಅವರ ನೇತೃತ್ವದಲ್ಲಿ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
17 ವರ್ಷದಿಂದ ರ್ಸಿಬಿ ತಂಡಕ್ಕೆ ಉತ್ತಮ ಆಟ ಪ್ರದರ್ಶಿಸುತ್ತಿದ್ದರು ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ ಈ ಬಾರಿ ಫೈನಲ್ ತಲುಪಿರುವ ತಂಡಕ್ಕೆ ಅಭಿಮಾನದ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು ಈ ವೇಳೆ ದೇವಸ್ಥಾನ ಅರ್ಚಕರು ಅಭಿಮಾನಿಗಳಿಂದ ಸಂಕಲ್ಪ ಮಾಡಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂತರ ಮಾತನಾಡಿದ ರಾಷ್ಟ್ರ ಭಕ್ತರ ಬಳಗದ ಮುಖಂಡ ಈ ವಿಶ್ವಾಸ್ ಮೂರು ಆರು 2025 ಇವುಗಳನ್ನು ಕೂಡಿಸಿದ್ದರು 18 ಬರಲಿದೆ ಹಾಗೂ ವಿರಾಟ್ ಕೊಹ್ಲಿ ಅವರ ಟೀ ಶರ್ಟ್ ನಂಬರ್ ಸಹ 18 ಆಗಿದ್ದು ನೆಲೆಯಲ್ಲಿ ಆರ್ಸಿಬಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಈ ಬಾರಿ ಕಪ್ ನಂದೇ ಎನ್ನುವ ಘೋಷದೊಂದಿಗೆ ಅಭಿಮಾನಿಗಳು ಘೋಷಣೆಗಳನ್ನು ಹೋಗಿದ್ದರು ತಾಯಿ ಭುವನೇಶ್ವರಿಗೆ ಜಯವಾಗಲಿ ಎಂದು ಹರಿಸಿದರು.
ಕುಂಬಾರ ಗುಂಡಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
ಶಿವಮೊಗ್ಗದ ಕುಂಬಾರ ಗುಂಡಿಯಲ್ಲಿ ಆರ್ಸಿಬಿ ಫ್ಲೆಕ್ಸಿಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ ಕೊಡಪಾನದಲ್ಲಿ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ.
Special prayers to God for RCB's victory