SUDDILIVE || SHIVAMOGGA
ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ-ನದಿಯಲ್ಲಿ ಅಲ್ಯುಮಿನಿಯಂ ಅಂಶ ಹೆಚ್ಚು -Task force formed at taluk level - high aluminum content in the river
ಶೃಂಗೇರಿಯಿಂದ ಕಿಷ್ಕಂಧೆ (ಗಂಗಾವತಿ)ಯವರೆಗೆ 400 ಕಿಮಿ ದೂರ ತುಂಗಭದ್ರ ಅಭಿಯಾನವನ್ನ ಬೃಹತ್ ಜಲಜಾಗೃತಿ ಜನಜಾಗೃತಿ ಪಾದಯಾತ್ರೆಯನ್ನ ನಿರ್ಮಲ ತುಂಗಭದ್ರ ಅಭಿಯಾನ ಮತ್ತು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಪಾದಯಾತ್ರೆ ನಡೆಸಿದ್ದು ವರದಿಯನ್ನ ಬಿಡುಗಡೆ ಮಾಡಿದೆ.
22 ದಿನಗಳ ಪಾದಯಾತ್ರೆ ಒಟ್ಟು 430 ಕಿಮಿ ದೂರ ಕ್ರಮಿಸಿದೆ. ಒಟ್ಟು 7 ಜಿಲ್ಲೆಗಳು ಮತ್ತು 13 ತಾಲೂಕು 120 ಗ್ರಾಮಗಳು, 50 ಸಭೆಗಳು ನಡೆದಿದೆ. 150 ಶಾಲಾ ಕಾಲೇಜು, 40 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. 30 ಧಾರ್ಮಿಕ ಮಠ ಮಂದಿರಗಳು ಪಾಲ್ಗೊಂಡಿದ್ದರು ಎಂದು ಅಭಿಯಾನದ ಪ್ರೊ.ಕುಮಾರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಭಿಯಾನದ ಶ್ರೀಪತಿಗಳು ಮಾತನಾಡಿ, ತುಂಗ ಮತ್ತು ಭದ್ರ ನದಿಗಳ ಪರೀಕ್ಷೆ ನಡೆಸಲಾಗಿದೆ. ಬ್ಯಾಕ್ಟಿರಿಯಾ ಇದ್ದೇ ಇದೆ. ಅಲ್ಯುಮಿನಿಯಂ ಅತ್ಯಾಧಿಕ ಪ್ರಮಾಣದಲ್ಲಿದೆ 6 ಪಟ್ಟು ಹೆಚ್ಚು ಅಂಶಗಳು ಕಂಡು ಬಂದಿದೆ. ಸಮಸ್ಯೆಗಳು ಮೂಳೆ ಸಂಬಂಧಿತ ಕಾಯಿಲೆ ಹೆಚ್ಚಾಗಲಿದೆ. ಅಲ್ಯುಮಿನಿಯಂ ಅಂಶದ ಬಗ್ಗೆ ಸರ್ಕಾರ ಘೋಷಿಸಬೇಕಿದೆ.
ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಮಣ್ಣಿನಲ್ಲೇ ಅಲ್ಯೂಮಿನಿಯಂ ಇದೆ. ಕೀಟ ನಾಶಕಗಳು ಬಳಕೆ ಹೆಚ್ಚಾಗಿರುವುದರಿಂದ ನೀರಿಗೆ ಸೇರಿದೆ. ಕುದರೆಮುಖದಲ್ಲಿ ಮಣ್ಣು ಪರೀಕ್ಷಿಸಕಾಗಿದೆ. ಹೊಸಪೇಟೆಯ ಬಳಿ ನಡೆಸಲಾದಾಗ ಕೋಲಿಫಾರಂ ಅಂಶಗಳು 6900 ಅಲ್ಯುಮಿನಿಯಂ ಇರುವುದರಿಂದ ಜಾನುವಾರುಗಳಿಗೂ ಕುಡಿಯಲು ಸಾಧ್ಯವಿಲಗಲವೆಂಬಂತಾಗಿದೆ.
ಕೃಷಿ, ಕೈಗಾರಿಕೆ ಮತ್ತು ಸಾರ್ವಜನಿಕ ಬಳಕೆಯಲ್ಲೂ ಸುಧಾರಣೆಯಾಗಬೇಕು ಎಂದರು. ಪ್ರತಿ ತಾಲಞುಕು ಮಟ್ಟದಲಗಲಿ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಲು ವರದಿ ತಯಾರಿಸಲಾಗುತ್ತದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನ ಮಾಡಲಾಗುವುದು. ಅಧ್ಯಾಯನ
18 ವರ್ಷದ ಹಿಂದೆ ತುಂಗ ನದಿಗೆ ಸಮಿತಿ ಇದೆ. 18 ಜನರ ಸಮಿತಿ ಇದೆ. ನ್ಯಾಯಾಲಯಕ್ಕೂ ಮೀರಿದ ಸಮಸ್ಯೆಯಾಗಿದೆ. ಕಾರ್ಯರೂಪಕ್ಕೆ ತರಲು ರಾಜಕೀಯ ಇಚ್ಚಾಶಕ್ತಿ ಬೇಕಿದೆ.
Task force formed at taluk level