ಬಂಡಾಯದ ಚರಿತ್ರೆಯಲ್ಲಿ ಮಾನವೀಯತೆ ಮತ್ತು ವೈಚಾರಿಕತೆ ಹೋರಾಟಗಾರ ಎನಿಸಿಕೊಂಡವರಲ್ಲಿ ಮೊದಲಿಗರಾದವರು ಪ್ರೊ.ಕೃಷ್ಣಪ್ಪ- in the history of the rebellion

SUDDILIVE || SHIVAMOGGA

ಬಂಡಾಯದ ಚರಿತ್ರೆಯಲ್ಲಿ ಮಾನವೀಯತೆ ಮತ್ತು ವೈಚಾರಿಕತೆ ಹೋರಾಟಗಾರ ಎನಿಸಿಕೊಂಡವರಲ್ಲಿ ಮೊದಲಿಗರಾದವರು ಪ್ರೊ.ಕೃಷ್ಣಪ್ಪ-Prof. Krishnappa was the first to become a fighter for humanity and rationality in the history of the rebellion.

History, rebellion


ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಕರ್ನಾಟಕದ ಬಂಡಾಯದ ಚರಿತ್ರೆಯಲ್ಲಿ ಮಾನವೀಯತೆ ಮತ್ತು ವೈಚಾರಿಕತೆಗಳ ನಾಡಿನ ಹೋರಾಟದ ಹಾದಿಯಲ್ಲಿ ಎಂದೆಂದಿಗೂ ನೆನಪಾಗುವ ಮೊದಲ ಹೆಸರು ಪ್ರೊ. ಬಿ ಕೃಷ್ಣಪ್ಪ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ ಚಂದ್ರಪ್ಪನವರು ಹೇಳಿದರು.

ನಿನ್ನೆ ಭಾನುವಾರ ಬೆಳಗ್ಗೆ ಶಿವಮೊಗ್ಗ ತಾಲ್ಲೂಕು ಹೊಳೆ ಬೆನವಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆ ಏರ್ಪಡಿಸಿದ್ದ   ಡಾ. ಬಾಬಾ ಸಾಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನ ಹಾಗೂ ಹೊಳೆ ಬೆನವಳ್ಳಿ ಡಿಎಸ್ಎಸ್ ಗ್ರಾಮ ಶಾಖೆಯನ್ನು  ಅಂಬೇಡ್ಕರ್ ಮತ್ತು ಪ್ರೊ ಬಿ ಕೃಷ್ಣಪ್ಪನವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

 ಅವರು ಮುಂದುವರಿದು ಮಾತನಾಡುತ್ತಾ ಪ್ರೊ ಬಿ ಕೃಷ್ಣಪ್ಪನವರು  ಕರ್ನಾಟಕದ ಉದ್ದಗಲಕ್ಕೆ ಓಡಾಡಿ ತನಗೆ ದಕ್ಕಿದ ತಿಳುವಳಿಕೆಯನ್ನು ಕ್ರಾಂತಿಯ ಕಿಡಿಯಾಗಿ ಹೊತ್ತಿಸಿದವರು ಪ್ರೊ. ಬಿ ಕೃಷ್ಣಪ್ಪ ನವರು. ಪ್ರಜ್ಞೆಯೇ ನಾಶವಾಗಿದ್ದ ದಲಿತ ಸಮುದಾಯಗಳ ಹಟ್ಟಿಗಳಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿದವರು ಮತ್ತು ಊರಾಚೆಯ ಕಡೆಯ ಕೇರಿಗಳ ಸೋತ ರಟ್ಟೆಗಳಿಗೆ ಹೋರಾಟದ ಕೆಚ್ಚು ತುಂಬಿದವರು ಪ್ರೊ. ಬಿ ಕೃಷ್ಣಪ್ಪನವರು. ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧಕ್ಕಾಗಿ ಹೋರಾಟ ನಡೆಸಿ ಗೆದ್ದ ಕೆಚ್ಚೆದೆಯ ಕೃಷ್ಣಪ್ಪ ಕನ್ನಡ ನಾಡಿನ "ಸಮಾನತೆಯ ಸೂರ್ಯ" ಎಂದು ಡಾ. ಕೆ ಚಂದ್ರಪ್ಪನವರು ಮಾತನಾಡಿದರು.

 ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್, ಡಿಎಸ್ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಬಸಪ್ಪ, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಎಂ ಏಳು ಕೋಟಿ, ಶಿವಮೊಗ್ಗ ಉಪ ವಿಭಾಗದ  ಅಟ್ರಾ ಸಿಟಿ ಕಮಿಟಿ ಸದಸ್ಯರಾದ ಹನುಮಂತಪ್ಪ ಯಡವಾಲ, ನಿವೃತ್ತ ಪ್ರಾದ್ಯಾಪಕರಾದ ಪ್ರೊ ಚಂದ್ರಪ್ಪ ಜೋಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಿರಂಜನಮೂರ್ತಿ,  

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುಬ್ರಮಣಿ, ಡಿಎಸ್ಎಸ್ ತಾಲೂಕು ಸಂಚಾಲಕರಾದ ಚಿಕ್ಕಮರಡಿ ರಮೇಶ್, ನಗರ ಸಂಚಾಲಕರಾದ ಹರಿಗೆ ರವಿ, ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಮೋಹನ್, ಡಿಎಸ್ಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಂಚಾಲಕರಾದ ಮನ್ಸೂರ್ ಲಕ್ಕವಳ್ಳಿ, ಹೊಳೆಬೆನವಳ್ಳಿ ಗ್ರಾಮ ಸಂಚಾಲಕರಾದ ಮುರುಗನ್, ಚಿಕ್ಕಮರಡಿ ದೇವರಾಜೇಗೌಡ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಉಷಾ, ವೆಂಕಟಾಚಲ ಮೊದಲಾದವರು ಉಪಸ್ಥಿತರಿದ್ದರು.

in the history of the rebellion.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close