SUDDILIVE || SHIVAMOGGA
ತಡರಾತ್ರಿ ನಡೆದ ಲಘು ಲಾಠಿ ಪ್ರಹಾರ ಎಷ್ಟರ ಮಟ್ಟಿಗೆ ಸಮಂಜಸವಾಗಿತ್ತು?To what extent was the light lathicharge that took place late at night justified?
ನಿನ್ನೆ ಪೊಲೀಸರು ಒಂದು ವೇಳೆ ಲಾಠಿ ಎತ್ತದಿದ್ದರೆ ಏನಾಗುತ್ತಿತ್ತು ಎಂಬುದರ ಬಗ್ಗೆ ಸಾರ್ವಜನಿಕ ಚರ್ಚೆ ಆಗುತ್ತಿದೆ. ನಿನ್ನೆ ಒಂದು ವೇಳೆ ದೊಡ್ಡಪೇಟೆ ಪೊಲೀಸರು ಸರಿಯಾದ ಸಮಯದಲ್ಲಿ ಲಾಠಿ ಎತ್ತದಿದ್ದರೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಶಿವಮೊಗ್ಗದಲ್ಲಿ ತಡರಾತ್ರಿ ನಡೆದು ಬಿಡುವ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು ಎಂಬುದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.
ಗೋಪಿ ವೃತ್ತ, ಎಎ ವೃತ್ತ, ಬಸ್ ನಿಲ್ದಾಣ, ಎಂಆರ್ ಎಸ್ ವೃತ್ತದ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಎಎ ವೃತ್ತದಲ್ಲಿ ಜನರು ಖಾಸಗಿ ಬಸ್ ಗಳನ್ನ ತಡೆದು ಅವುಗಳಮೇಲೆ ಹತ್ತಿ ಬಸ್ ನಿಲ್ದಾಣದ ವರೆಗೆ ಸಾಗುವ ಹುಚ್ಚರ ಆಟ ಆರಂಭವಾಗಿತ್ತು. ಬಸ್ ನಿಲ್ದಾಣದ ಬಳಿ ಪೊಲೀಸರು ಮನೆಗೆ ಹೋಗಲು ಮನವಿ ಮಾಡಿಕೊಂಡರು. ಜನ ಮಾತ್ರ ಜಗ್ಗುತ್ತಿರಲಿಲ್ಲ.
ಒಂದು ಗಂಟೆ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿತ್ತು. ಅವಧಿಯನ್ನ ಮೀರಿ ಜನ ಇನ್ನೂ ರಸ್ತೆಯಲ್ಲೇ ಉಳಿದಿದ್ದರು. ಅದೂ ಗುಂಪು ಗುಂಪಾಗಿ ಜನಜಮಾವಣೆಯಾಗಿದ್ದರು. ರಸ್ತೆಗಿಳಿದ ಬಹುತೇಕರು 40 ವರ್ಷದ ಒಳಗಿನ ವಯಸ್ಕರು. 45 ರ ನಂತರದ ವಯಸ್ಕರು ಟಿವಿಯಲ್ಲೇ ಸಂಭ್ರಮಾಚರಣೆ ವೀಕ್ಷಿಸಿ ಮನೆಯಲ್ಲೆ ಮಲಗಿ ಕೊಂಡರೆ, ಬಹುತೇಕ ಯುವಕರು ಬೀದಿಗಿಳಿದಿದ್ದರು. ಇದು ಯಾವ ರಾಷ್ಡ್ರಪ್ರೇಮದ ಆಟವಾಗಿರಲಿಲ್ಲ. ಆದರೆ ಬೆಟ್ಟಿಂಗ್ ಆಟದ ಪ್ರೇಮವಾಗಿತ್ತು ಅಂತ ಬೇಕಾದರೆ ಹೇಳಬಹುದು.
ಇಂತಹ ಆಟದ ಪರವಾಗಿ ಯುವಕರು ಬೀದಿಗಿಳಿದು ತಡರಾತ್ರಿಯ ವರೆಗೂ ಸಂಭ್ರಮಾಚರಣೆಯ ಹೆಸರಿನಲ್ಲಿ ಎಲ್ಲೆ ಮೀರುವಂತೆ ಶಿವಮೊಗ್ಗದಲ್ಲಿ ನಡೆದಿದ್ದು ಮಾತ್ರ ಅಚ್ಚರಿ. ಇಂತಹ ಜನರ ಗುಂಪಿಗೆ ಸಾವಧಾನದಲ್ಲಿ ಮನೆಗೆ ಹೋಗಿ ಎಂದರೆ ಕೇಳುವ ಪರಿಸ್ಥಿತಿಯಲ್ಲಿ ಆ ಯುವ ಸಮುದಾಯವಿತ್ತ ಎಂಬುದು ಪ್ರಶ್ನೆಯಾಗಿತ್ತು. ಹಾಗಾಗಿ ಪೊಲೀಸರ ಸಮಯೋಚಿತ ಲಘು ಲಾಠಿ ಪ್ರಹಾರ ಸಮರ್ಥವಾಗಿದೆ ಎಂಬುದೇ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಿವು.
ಇಂದು ನಗರಕ್ಕೆ ಐಜಿಪಿ ರವಿಕಾಂತೇ ಗೌಡರು ಭೇಟಿ ನೀಡಿ ಹೋಗಿದ್ದಾರೆ. ನಿನ್ನೆಯ ಘಟನೆಯ ಬಗ್ಗೆ ಅವರ ಗಮನಕ್ಕಿದ್ದೇ ಇರುತ್ತದೆ. ನಿನ್ನೆ ಒಂದು ವೇಳೆ ಪೊಲೀಸರ ಲಾಠಿ ಹೊರಗೆ ಬಾರದಿದ್ದರೆ ಅನಾಹುತಾ ಫಿಕ್ಸ್ ಆಗಿಬಿಡುತ್ತಿತ್ತು. ಅದರಂತೆ ಒಂದು ಅನಾಹುತ ಉಷಾ ನರ್ಸಿಂಗ್ ಹೋಮ್ ಬಳಿ ನಡೆದಿದೆ. ಪೊಲೀಸರು ಲಾಠಿ ಎತ್ತದಿದ್ದರೆ ಉಷಾ ನರ್ಸಿಂಗ್ ಹೋಮ್ ಬಳಿ ನಡೆದಿದ್ದ ಮತ್ತೊಂದಿಷ್ಟು ಅನಾಹುತಗಳು ನಗರದ ವಿವಿಧ ಭಾಗಗಳಲ್ಲಿ ಸಂಭವಿಸುವ ಅಪಾಯವೂ ಇತ್ತು.
lathicharge that took place late at night justified